Tuesday, December 16, 2008

Wildlife messages 2005







Dear friend,

I am overwhelmed by the personal replies and responses with regards to my wildlife messages. Here is the passage of article that followed the wildlife messge cards of 2005.
परॊपकाराय फलंति वृक्षाः परॊपकाराय दुहंति गावाः ।
परॊपकाराय वहंति नद्यः परॊपकारार्थमिदं शरीरम् ॥

ಮರ-ಗಿಡಗಳು ಫಲವನ್ನೀಯುವುದು, ಹಸು-ಗೋವುಗಳು ಹಾಲನ್ನು ನೀಡುವುದು ಮತ್ತು ನದಿಗಳು ಹರಿಯುವುದು ಇವೆಲ್ಲವೂ ಪರೋಪಕಾರಕ್ಕಾಗಿಯೇ. ಈ ನಮ್ಮ ಶರೀರ ಪರೋಪಕಾರಕ್ಕೆ ಮೀಸಲಿರಲಿ.

- ಭರ್ತೃಹರಿಯ ನೀತಿಶತಕ

ಭಾನುವಾರ, ೨೫ ಸೆಪ್ಟೆಂಬರ್ ೨೦೦೫
ಮಿತ್ರರೆ,
ನಿಸರ್ಗದ ಕೆಲವು ವಿದ್ಯಮಾನಗಳನ್ನು ನಾವು ಒಳಹೊಕ್ಕು ಗಮನಿಸಿದಾಗ ನಮಗೆ ಅದು ಬರೇ ವಿಸ್ಮಯಗಳ ಖಜಾನೆಯಷ್ಟೇ ಅಲ್ಲದೆ, ಕೌತುಕಮಯ ನೀತಿಪಾಠಗಳ ಆಗರವೂ ಆಗಿದೆಯೆಂದು ಮನವರಿಕೆಯಾಗುತ್ತದೆ. ಮಾವಿನ ಮರವನ್ನೇ ತೆಗೆದುಕೊಳ್ಳೋಣ. ಪ್ರತಿವರ್ಷ ಆ ಮರದಲ್ಲಿ ಸಾವಿರಾರು ಹಣ್ಣುಗಳು ಬಿಡುವುದೇಕೆ? ಹಣ್ಣನ್ನು ಒಂದು ಪ್ರಾಣಿ ತಿಂದು ಅದರ ಬೀಜವನ್ನು ದೂರದಲ್ಲಿ ಹಾಕಲಿ, ಅಲ್ಲಿ ಒಂದು ಹೊಸ ಮಾವಿನ ಸಸಿ ಬೆಳೆಯಲಿ ಎಂಬುದೇ ಆ ಮರದ ಉದ್ದೇಶವಲ್ಲವೆ?
ಆ ಹಣ್ಣಿನ ಬಣ್ಣ, ರುಚಿ ಮತ್ತು ಸಿಹಿಯೇ ಪ್ರಾಣಿಗೆ ಆಕರ್ಷಣೆ. ಆದರೆ ನಾವು ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು. ಯಾವುದೇ ಒಂದು ಹಣ್ಣು ಬರೇ ಸಿಹಿಯುಳ್ಳ ಪದಾರ್ಥವಲ್ಲ. ಅದರಲ್ಲಿ ಒಂದು ಪ್ರಾಣಿಯ ಜೀವನಕ್ಕೆ ಬೇಕಾದ ಎಲ್ಲಾ ಆಹಾರಾಂಶಗಳೂ ಇರುತ್ತವೆ. ಅದು ಶರ್ಕರ, ಪಿಷ್ಟ, ಕೊಬ್ಬು, ವಿಟಮಿನ್‌ಗಳು, ಖನಿಜ-ಲವಣಗಳು, ನಾರು ಇವೆಲ್ಲವನ್ನೂ ಒಳಗೊಂಡ ಸಂಪೂರ್ಣ ಆಹಾರ ! ಇವೆಲ್ಲವನ್ನೂ ಆ ಮಾವಿನ ಮರ ಸಂಗ್ರಹಿಸಿ ಹಣ್ಣಿನಲ್ಲಿ ಶೇಖರಿಸುತ್ತದೆ.
ಒಂದು ಗೊರಟನ್ನು ಹತ್ತು ಮಾರು ದೂರ ಬಿಸಾಡಿಸುವುದೇ ಆ ಮರದ ಉದ್ದೇಶವಾಗಿದ್ದರೆ, ಅದರ ಸುತ್ತ ಒಂದಷ್ಟು ಸಕ್ಕರೆ-ಬಣ್ಣ ಲೇಪಿಸಿ ಆಕರ್ಷಿಸಬಹುದಿತ್ತು. ಈಗ ಹೇಳಿ: ಕೂಲಿಗೆ ತಕ್ಕ ಕಾಳನ್ನು ತೂಕ ಹಾಕಿ ಕೊಡುವವರು ನಾವು. ಪ್ರಕೃತಿಯ ಮಡಿಲಲ್ಲಿ ಬಾಳಾಟ ನಡೆಸುತ್ತಿರುವ ಜೀವಿಗಳಲ್ಲಿ ಎಂತಹ ವಿಶಾಲ ಮನೋಭಾವ, ಅದೆಂತಹ ಔದಾರ್ಯ!
ನಾವೆಲ್ಲ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿಂದ, ಸಹಬಾಳ್ವೆ ನಡೆಸುವಂತೆ ಮಾಡೋಣ.

ವಂದನೆಗಳು.

Sunday, September 25, 2005

Dear friend,
When we observe nature, we get an insight into the amazing way it works. Plants and animals are interdependent and they know each other’s needs, limitations and responsibilities. In this process they give us an excellent opportunity to know their virtues and rich sense of selflessness.
Take the example of a mango tree. We know that the purpose of producing a fruit in a tree is seed dispersal. The sweetness, flavour and colour of the fruit attract an animal. Please note that a fruit is not just a sweetmeat. It contains proteins, carbohydrates, fats, vitamins, minerals, fibre, micronutrients and anti-oxidants. It is nutritious, wholesome and life giving and makes a complete food for the animal.
The tree concentrates all these essential nutrients into a fruit and gifts them to the animal. If the sole purpose of the tree were to get its seed dropped at a distance, it would suffice to paint the seed with some sugar and colour and offered it to the animals.
We speak of hourly remunerations and scoffing wages. But here, we have a mango tree that generously presents its fruit to its recipient and thereby passes on a moral message to us. The broadmindedness and the magnanimity of the different forms of life in nature is indeed awe-inspiring!
Let us join hands to make our only Earth, a place where all elements of life can live in health, happiness and harmony.
Thank you.
Dr. S V Narasimhan VIRAJPET 571 218 Karnataka India drnsimhan@yahoo.com
The Wildlife Message Cards are individually hand-painted and sent free to individuals throughout the world to mark the Wildlife Week . Please write to the above address to be a proud recipient of these cards every year.
Total of individually hand-painted cards made: this year 1850; in 21 years 43,100. Total recipients: this year 980; in 21 years 6120.
Please send more stamps to reduce my burden on postage.



ದಿನಕರ: ನಮ್ಮ ಆಪದ್ರಕ್ಷಕ

ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ
ಭರ್ಗೋದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್

-ಗಾಯತ್ರೀ

ಭಾನುವಾರ, ೨೬ ಸೆಪ್ಟೆಂಬರ್ ೨೦೦೪

ಮಿತ್ರರೆ,

ಪ್ರತಿದಿನ ಮುಂಜಾನೆ ಎದ್ದು ಆ ಬಾಲಸೂರ್ಯ ನನ್ನನ್ನು ಎಡೆಬಿಡದೆ ಆಕರ್ಷಿಸುತ್ತಾನೆ. ಮತ್ತೆ ಮತ್ತೆ ಅದೇ ಆಲೋಚನೆ ಬರುತ್ತದೆ: ಯಾರೀ ಸೂರ್ಯ?
ಅಗಾಧ ವಿಶ್ವದ ದಶಸಹಸ್ರಕೋಟಿ ಬ್ರಹ್ಮಾಂಡಗಳಲ್ಲೊಂದಾದ ನಮ್ಮ ಅಕಾಶಗಂಗೆಯ ಒಂದು ಮೂಲೆಯಲ್ಲಿ ಉಳಿದ ಕೋಟಿ-ಕೋಟಿ ತಾರೆಗಳಂತೆ, ಕಂಡೂ ಕಾಣದಂತೆ ಹೊಳೆಯುತ್ತಿರುವ ಸಾಧಾರಣ ನಕ್ಷತ್ರ ಇವನೇ ಏನು?

ಅಥವಾ ನಾನ್ನೂರ ಅರವತ್ತು ಕೋಟಿ ವರ್ಷಗಳಿಂದ, ಸೆಕೆಂಡಿಗೆ ಐವತ್ತು ಲಕ್ಷ ಟನ್ ಬೈಜಿಕ ಶಕ್ತಿಯನ್ನು ಉತ್ಪಾದಿಸುತ್ತಿರುವ ಅಸ್ಖಲಿತ ಬೆಂಕಿಯುಂಡೆ ಇವನೇ?
ಆದರೆ ನನ್ನ-ಸೂರ್ಯನ ಅವಿನಾ ಸಂಬಂಧ ಈ ಎಲ್ಲ ವೈಜ್ಞಾನಿಕ ವಿವರಗಳನ್ನೂ ಹಿನ್ನೆಲೆಗೆ ಸರಿಸುತ್ತವೆ. ನಮ್ಮ ಈ ಭೂಮಿಯ ಮೇಲಿರುವ ಸಕಲ ಜೀವರಾಶಿಗಳ ಸೃಷ್ಟಿ-ಸ್ಥಿತಿ-ಲಯಗಳಿಗೂ ಕಾರಣಕರ್ತನಾಗಿ, ದಿನಂಪ್ರತಿ ತನ್ನ ರಶ್ಮಿಗಳಿಂದ ಎಲ್ಲ ಜೀವಿಗಳ ಜಡತ್ವವನ್ನು ತೊಡೆದು ಚೈತನ್ಯ ತುಂಬುವ, ಬೆಳಕಿನ ಗಣಿಯಲ್ಲವೇ ಇವನು? ಸಕಲ ಚರಾಚರ ವಸ್ತುಗಳ ನಿಯಂತ್ರಕನೂ ಅವನೇ, ಪ್ರತ್ಯಕ್ಷವಾಗಿಯೋ-ಪರೋಕ್ಷವಾಗಿಯೋ ನಮ್ಮೆಲ್ಲರ ಶಕ್ತಿಯ ಇಂಧನದ ಮೂಲವೂ ಅವನೇ!
ಆ ದಿನಮಣಿಯ ಕಿರಣಗಳಿಂದಲೇ ಈ ಭೂಮಿಯ ಮೇಲಿನ ಎಲ್ಲ ಋತುಗಳೂ ಮತ್ತು ಎಲ್ಲ ಆಗುಹೋಗುಗಳು. ಮುಂದೊಂದು ದಿನ ಎಲ್ಲ ರೀತಿಯ ಇಂಧನಗಳಿಗೂ ಅವನೇ ಪರ್ಯಾಯ ಸಂಪನ್ಮೂಲ ಶಕ್ತಿಯಾಗುತ್ತಾನೆಂಬುದೂ ನಿಸ್ಸಂಶಯ. ಆತನ ಆಶ್ರಯದಲ್ಲಿರುವ ಸಕಲ ಜೀವಿಗಳೂ ನೆಮ್ಮದಿಯ ಬಾಳು ಸಾಗಿಸುತ್ತ ಬಂದಿವೆ. ಆದರೆ ಇಂದು ಮಾನವನ ಹಸ್ತಕ್ಷೇಪದಿಂದ ಈ ವ್ಯವಸ್ಥೆಯೇ ಏರುಪೇರಾಗುವ ಚಿನ್ಹೆಗಳು ಕಂಡುಬರುತ್ತಿವೆ. ಇದು ಕೈಮೀರುವ ಮುಂಚೆ ನಾವು ಎಚ್ಚೆತ್ತುಕೊಳ್ಳಬೇಕಾಗಿರುವುದು ಅಪೇಕ್ಷಣೀಯವೂ ಅನಿವಾರ್ಯವೂ ಆಗಿದೆ.

ನಾವೆಲ್ಲ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿಂದ, ಸಹಬಾಳ್ವೆ ನಡೆಸುವಂತೆ ಮಾಡೋಣ.
ವಂದನೆಗಳು.

ಗುರುವಾರ, ೨೫, ಸೆಪ್ಟೆಂಬರ್ ೨೦೦೩

ಮಿತ್ರರೆ,

ಇಡೀ ವಿಶ್ವವೇ ಒಂದು ವಿಸ್ಮಯಗಳ ಕಣಜ. ಏನು, ಏಕೆ, ಹೇಗೆ, ಎಂದೆಲ್ಲ ನಾವು ಕೇಳುತ್ತ ಹೋದಂತೆ ಅದು ತನ್ನ ವಿಶಾಲವಾದ ಅದ್ಭುತಲೋಕವನ್ನು ತೆರೆಯುತ್ತ ಹೋಗುತ್ತದೆ.

ಭೂಮಿಯ ಮೇಲೆ ವಾಸಮಾಡುವ ಜೀವಿಗಳ ಸ್ವಭಾವವನ್ನೇ ತೆಗೆದುಕೊಳ್ಳೋಣ. ಪ್ರತಿಯೊಂದು ಪ್ರಾಣಿಗೂ ತನ್ನದೇ ಆದ ಆವಾಸಸ್ಥಾನವಿದೆ. ಅಂದರೆ, ಎಲ್ಲ ಪ್ರಾಣಿಗಳೂ ಎಲ್ಲ ಸ್ಥಳಗಳಲ್ಲಿಯೂ ವಾಸಿಸಲು ಸಾಧ್ಯವಿಲ್ಲ. ಒಂಟೆಯನ್ನು ತಂದು ನಮ್ಮ ಮಲೆನಾಡಿನ ಕಾಡಿನಲ್ಲಿ ಬಿಟ್ಟರೆ, ಅದು ಬದುಕಬಲ್ಲದೆ? ಆನೆಯನ್ನು ಕೊಂಡೊಯ್ದು ಹಿಮಾಲಯದಲ್ಲಿ ಬಿಟ್ಟರೆ ಬಾಳಬಲ್ಲದೆ? ಆದ್ದರಿಂದ ಒಂದೊಂದು ಜೀವಿಗೂ ಬದುಕಿಬಾಳಲು ತಕ್ಕ ಜೀವ ಪರಿಸರ ಇರಲೇಬೇಕು. ಆದರೆ ಎಲ್ಲ ನಿಯಮಕ್ಕೂ ಅಪವಾದವಿದ್ದೇ ಇದೆ. ಉದಾಹರಣೆಗೆ ಜಿರಳೆಯನ್ನೇ ನೋಡಿ. ಅದು ಮರುಭೂಮಿಯ ರಣಬಿಸಿಲೇ ಆಗಲಿ, ನಿಮ್ಮ ಮನೆಯ ಫ್ರಿಜ್ ಆಗಲಿ, ನೆಮ್ಮದಿಯಿಂದ ಜೀವಿಸುವುದು. ಅಂತೆಯೆ ಮಾನವನೂ ಕೂಡ ಪ್ರಪಂಚದ ಎಲ್ಲಾ ಸ್ಥಳಗಳಲ್ಲಿಯೂ ವಾಸಿಸಲು ಶಕ್ಯನಾಗಿದ್ದಾನೆ.

ಇನ್ನು ಆಹಾರದ ವಿಷಯವನ್ನು ತೆಗೆದುಕೊಂಡರೆ, ಪ್ರತಿಯೊಂದು ಪ್ರಾಣಿಗೂ ತನ್ನದೇ ವಿಶಿಷ್ಟ ಆಹಾರಕ್ರಮವಿದೆ. ಕೆಲವು ಸಸ್ಯಾಹಾರಿಗಳು, ಹಲವು ಮಾಂಸಾಹಾರಿಗಳು. ಒಂದು ಜಾತಿಯ ಪಾಂಡಾಗೆ ನೀಲಗಿರಿ ಮರದ ಎಲೆಗಳೇ ಅವಶ್ಯವಾದರೆ, ಕೋಲಾ ಕರಡಿಗೆ ಬಿದಿರಿನ ಎಲೆಗಳೇ ಬೇಕು. ರೇಷ್ಮೆಹುಳು-ಹಿಪ್ಪುನೇರಿಳೆ ಸಂಬಂಧ ನಿಮಗೆಲ್ಲ ಗೊತ್ತೇ ಇದೆ. ಪುನಃ ಅಪವಾದವಿದ್ದೇ ಇದೆ. ಕಾಗೆ, ಹೆಗ್ಗಣ ಮುಂತಾದ ಪ್ರಾಣಿಗಳು ವೆಜ್-ನಾನ್‌ವೆಜ್ ಎರಡನ್ನೂ ಜೀರ್ಣಿಸಿಕೊಳ್ಳಬಲ್ಲವು. ನಾವಿಲ್ಲವೆ? ತಿನ್ನಲು ಯೋಗ್ಯವಾದ ಯಾವ ವಸ್ತುವನ್ನು ನಾವು ಬಿಟ್ಟಿದ್ದೇವೆ?

ನನಗೆ ಬೇಸರವಿಷ್ಟೆ. ಜಿರಳೆ, ಕಾಗೆ, ಹೆಗ್ಗಣಗಳನ್ನು ಹೀಗಳೆಯುವುದು ಬೇಡ. ಆದರೆ ನಾವೂ ಜಿರಳೆಯ ಹಾಗೆ ಎಲ್ಲೆಂದರಲ್ಲಿ ಮನೆ ಮಾಡಿಕೊಳ್ಳುತ್ತೇವೆ; ನಾವೂ ಕಾಗೆ-ಹೆಗ್ಗಣಗಳಂತೆ ಏನು ಬೇಕಾದರೂ ತಿಂದು ಜೀರ್ಣಿಸಿಕೊಳ್ಳುತ್ತೇವೆ ಎಂದು ಹೇಳಿಕೊಳ್ಳುವುದರಲ್ಲಿ ಹೆಗ್ಗಳಿಕೆಯಿದೆಯೆ? ನಮ್ಮನ್ನು ನಾವು ಹೋಲಿಸಿಕೊಳ್ಳಲು ಇವಕ್ಕಿಂತ ಗೌರವಯುತ ಪ್ರಾಣಿಗಳೇ ಇಲ್ಲವೆ?
ಸಿಂಹದ ಗಾಂಭೀರ್ಯ, ಹುಲಿಯ ಶೌರ್ಯ, ನವಿಲಿನ ಸೌಂದರ್ಯ, ಆನೆಯ ಶಕ್ತಿ, ತೋಳದ ಯುಕ್ತಿ, ಜೇನ್ನೊಣಗಳ ಸಂಘಜೀವನ, ಈ ಎಲ್ಲ ಗುಣಗಳ ಗಣಿ ನಾವಾದರೆ!

ನಾವೆಲ್ಲ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿಂದ, ಸಹಬಾಳ್ವೆ ನಡೆಸುವಂತೆ ಮಾಡೋಣ.
ವಂದನೆಗಳು.

ನಾವು ಸಾಧಿಸಬಲ್ಲೆವು

ಬುಧವಾರ, ೨೫ ಸೆಪ್ಟೆಂಬರ್ ೨೦೦೨

ಸಹೃದಯರೇ,

ಸುಮಾರು ಇಪ್ಪತ್ತು ಕೋಟಿ ವರ್ಷಗಳ ಹಿಂದೆ ವಿಕಾಸ ಹೊಂದಿದ ಡೈನಾಸಾರ್‌ಗಳು, ನಿರಂತರವಾಗಿ ೧೪ ಕೋಟಿ ವರ್ಷ ಈ ಭೂಮಿಯನ್ನಾಳಿ, ೬.೬ ಕೋಟಿ ವರ್ಷಗಳ ಹಿಂದೆ ಸಂಪೂರ್ಣವಾಗಿ ನಶಿಸಿ ಹೋದವು. ನಂತರ ಹುಟ್ಟಿದ ಹಕ್ಕಿಗಳ ಬಳಗ, ಇಂದು ಇಡೀ ಆಕಾಶವನ್ನು ಯಾವುದೇ ಗಡಿರೇಖೆಗಳಿಲ್ಲದ ಒಂದು ವಿಶಾಲ ಸಾಮ್ರಾಜ್ಯವನ್ನಾಗಿಸಿಕೊಂಡಿವೆ. ಚಿಟ್ಟೆ ಮತ್ತು ಇತರ ಕೀಟಗಳು, ಡೈನಾಸಾರ್ ಮತ್ತು ಪಕ್ಷಿಗಳಿಗಿಂತ ಮುಂಚೆ ಅಂದರೆ, ಸುಮಾರು ೩೨ ಕೋಟಿ ವರ್ಷಗಳ ಹಿಂದೆ ಪ್ರಪಂಚಕ್ಕೆ ಕಾಲಿಟ್ಟ ಜೀವಿಗಳು. ಕೀಟಗಳು ಈ ಹಿಂದೆ ಘಟಿಸಿದ ಐದು ಜೀವಸಂಕುಲ ವಿನಾಶಗಳ ನಡುವೆಯೂ ಬದುಕುಳಿದು, ಸಂಖ್ಯಾಬಾಹುಳ್ಯದಲ್ಲಿ ಇತರೆಲ್ಲ ಜೀವಿಗಳನ್ನೂ ಹಿಂದೂಡಿವೆ.

ಮತ್ತೊಂದೆಡೆ, ತಾವರೆಯಿಂದ ಆರ್ಕಿಡ್‌ಗಳವರೆಗಿನ ಹೂತಳೆವ ಸಸ್ಯಗಳು ನಮ್ಮ ಪ್ರಕೃತಿಯನ್ನು ಸುಂದರಗೊಳಿಸುವುದಲ್ಲದೆ, ಜೀವಿಗಳಿಗೆ ಅತ್ಯವಶ್ಯಕವಾದ ಆಮ್ಲಜನಕವನ್ನು ವಾತಾವರಣಕ್ಕೆ ತುಂಬುವ ಮಹತ್ಕಾರ್ಯವನ್ನು ನಿರ್ವಹಿಸುತ್ತಿವೆ.

ಕೇವಲ ಒಂದು ಲಕ್ಷಕ್ಕೂ ಕಡಿಮೆ ವರ್ಷಗಳ ಹಿಂದೆ ಭೂಮಿಗೆ ಬಂದ ಆಧುನಿಕ ಮಾನವ, ಜೀವಿಗಳಲ್ಲೇ ಹೆಚ್ಚು ವಿಕಾಸಹೊಂದಿದವನೆಂದೂ, ಅತಿ ಬುದ್ಧಿವಂತನೆಂದೂ ತೀರ್ಮಾನಿಸಲ್ಪಟ್ಟಿದ್ದಾನೆ. ಪೃಥ್ವಿಯ ಮೇಲೆ ನಡೆದ ೪೨೦ ಕೋಟಿ ವರ್ಷಗಳ ಜೀವವಿಕಾಸದ ಇತಿಹಾಸದಲ್ಲಿ, ಮೊಟ್ಟಮೊದಲನೇ ಬಾರಿಗೆ ಪ್ರಕೃತಿಯ ಗರ್ಭದಲ್ಲಿ, ನಿಸರ್ಗದ ಸೌಂದರ್ಯವನ್ನು ಮೆಚ್ಚಬಲ್ಲ; ವಿವಿಧ ಸಸ್ಯ ಮತ್ತು ಪ್ರಾಣಿಗಳ ನಡುವಿನ ಅವಿನಾ ಸಂಬಂಧದ ವಿವೇಚನೆಯುಳ್ಳ; ಮುಂಬರುವ ಅತಿದೊಡ್ಡ ಜೀವ-ವಿನಾಶವನ್ನು ತಾನು ತಡೆಗಟ್ಟಬಲ್ಲನೆಂದು ಅರಿತ ಒಂದು ಜೀವ ಜನ್ಮತಳೆದಿದೆ.

ಭೂಮಿಯ ಮೇಲೆ ಒಂದಲ್ಲ ಒಂದು ಕಾರಣದಿಂದ ಜರುಗಿದ ಜೀವವಿನಾಶದಲ್ಲಿ, ಕೋಟಿಕೋಟಿ ವರ್ಷ ವಿಕಾಸಹೊಂದಿ ಜನಿಸಿದ ಜೀವರಾಶಿಗಳಲ್ಲಿ ಶೇಕಡ ೯೯ರಷ್ಟು ಜೀವಜಾತಿಗಳು ನಿರ್ನಾಮವಾಗಿ ಹೋಗಿವೆ. ಆರನೆಯ ವಿನಾಶ ಈಗ ನಡೆಯುತ್ತಿದ್ದು, ಅದಕ್ಕೆ ಮನುಷ್ಯನ ಹಸ್ತಕ್ಷೇಪವೇ ಕಾರಣವೆಂದು ದೂರಲಾಗುತ್ತಿದೆ. ಮಾನವ, ಇಡೀ ವಾತಾವರಣವನ್ನು ಕಲುಷಿತಗೊಳಿಸಿದ್ದಾನೆ; ಕುಡಿಯುವ ನೀರನ್ನು ವಿಷಮಯಗೊಳಿಸಿದ್ದಾನೆ; ಹಸಿರು ವನಸಿರಿಯನ್ನು ಲೂಟಿಮಾಡಿದ್ದಾನೆ; ಪ್ರಾಣಿ ಮತ್ತು ಪರಸ್ಪರ ತನ್ನಲ್ಲಿಯೇ ಯುದ್ಧ ಸಾರಿದ್ದಾನೆ: ಎಲ್ಲವೂ ಸ್ವಾರ್ಥಕ್ಕಾಗಿ ಮತ್ತು ಆಧುನೀಕರಣದ ನೆಪದಲ್ಲಿ.

ಆತ, ಭೂಮಿಯನ್ನು ಸಂರಕ್ಷಿಸುವ ಪರಿ ಇದೇ ಆದಲ್ಲಿ, ಇದೇ ರೀತಿ ಬುಲೆಟ್ ಮತ್ತು ಬಾಂಬ್‌ಗಳೊಂದಿಗೆ ಯುದ್ಧ ಮುಂದುವರಿಸಿದಲ್ಲಿ, ಯಾರನ್ನು ಅತಿ ವಿಕಾಸಹೊಂದಿದ ಜೀವಿಯೆಂದು ಪರಿಗಣಿಸಿದ್ದೆವೋ ಅವನೇ, ಭೂಮಿಯ ಮೇಲೆ ಅತಿ ಕಡಿಮೆ ಅವಧಿ ಜೀವಿಸಿದ ಪ್ರಾಣಿಯೆನಿಸಿಕೊಳ್ಳುವನು. ಎಂಥ ವಿಪರ್ಯಾಸ!

ನಾವೆಲ್ಲ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿಂದ, ಸಹಬಾಳ್ವೆ ನಡೆಸುವಂತೆ ಮಾಡೋಣ.
ವಂದನೆಗಳು.


ವಂದೇ ಮಾತರಂ ಸುಜಲಾಂ ಸುಫಲಾಂ ಮಲಯಜಶೀತಲಾಂ
ಸಸ್ಯಶ್ಯಾಮಲಾಂ ಮಾತರಂ ವಂದೇ ಮಾತರಂ
ಶುಭ್ರಜ್ಯೋತ್ಸ್ನಾಂ ಪುಲಕಿತಯಾಮಿನೀಂ
ಫುಲ್ಲಕುಸುಮಿತ ದ್ರುಮದಲಶೋಭಿನೀಂ
ಸುಹಾಸಿನೀಂ ಸುಮಧುರಭಾಷಿನೀಂ
ಸುಖದಾಂ ವರದಾಂ ಮಾತರಂ ವಂದೇ ಮಾತರಂ

ಶುಕ್ರವಾರ ೨೪ ಸೆಪ್ಟೆಂಬರ್ ೧೯೯೯

ಮಿತ್ರರೆ,

ಪ್ರಕೃತಿಮಾತೆ ದಯಾಮಯಿ, ಕ್ಷಮಾಶೀಲೆ. ತನಗೇನೇ ಕಷ್ಟ ಬಂದರೂ ಸಹಿಸಿಕೊಂಡು, ತನ್ನ ಮಕ್ಕಳ ಶುಭವನ್ನೇ, ಅಭ್ಯುದಯವನ್ನೇ ಬಯಸುತ್ತಾಳೆ. ಅಮೃತಪ್ರಾಯವಾದ ನಿರ್ಮಲ ನದಿಜಲದಿಂದ ನಮ್ಮ ಮೈಮನಸ್ಸನ್ನು ಕಾಪಾಡುತ್ತಾಳೆ. ಸಮೃದ್ಧ ಬೆಳೆ ಬೆಳೆಯಲು ನೆಲ, ಮಧುರವಾದ ಹಣ್ಣು-ಹಂಪಲುಗಳಿಂದ ಕೂಡಿದ ಗಿಡ-ಮರ-ಬಳ್ಳಿಗಳನ್ನೊಳಗೊಂಡ ನಿಸರ್ಗದೇವಿ ನಮ್ಮ ಎಲ್ಲ ಬೇಕು-ಬೇಡಗಳನ್ನು ಪೂರೈಸುತ್ತಾಳೆ.

ಪಕ್ಷಿಗಳ ಚಿಲಿಪಿಲಿ ಇಂಚರ, ಸುಂಯ್ ಎಂದು ಬೀಸುವ ತಂಗಾಳಿ, ಎಲೆಗಳ ಇನಿದನಿ, ಹರಿಯುವ ಝರಿ-ನದಿಗಳ ಕಲರವ, ಹೂವಿನಿಂದ ಹೂವಿಗೆ ಹಾರುವ ಭ್ರಮರಗಳ ಝೇಂಕಾರ ಇವೆಲ್ಲ ಸೇರಿ ಅವಳ ಮಧುರ ಮಾತುಗಳಾಗಿವೆ. ಪ್ರಕೃತಿಯ ಸೌಂದರ್ಯ ವರ್ಣಿಸಲಸಾಧ್ಯ. ಅವಳು ಹಿಮಾಚ್ಛಾದಿತ ಗಿರಿಕಂದರಗಳಿಂದಲೂ, ಹಚ್ಚಹಸಿರು ವನರಾಶಿಯಿಂದಲೂ ಕೂಡಿದ್ದಾಳೆ. ಶುಭ್ರವಾದ ಬೆಳದಿಂಗಳ ರಾತ್ರಿ, ಈಕೆ ಮುಗುಳ್ನಗುತ್ತಿರುವಳೋ ಎನ್ನಿಸುತ್ತದೆ!

ಇಂತಹ ತಾಯಿಯ ಆಶ್ರಯದಲ್ಲಿ ಸಕಲ ಜೀವರಾಶಿಗಳೂ ನೆಮ್ಮದಿಯಿಂದ ಬಾಳುತ್ತಿವೆ. ಎಲ್ಲ ತಾಯಂದಿರಂತೆ, ತನ್ನೆಲ್ಲ ಮಕ್ಕಳನ್ನೂ ಸರಿಸಮಾನರಾಗಿ, ಎಲ್ಲರೂ ಸುಖದಿಂದ, ಸಂತೋಷದಿಂದ ಬಾಳಬೇಕೆಂಬ ಆಸೆ ಅವಳದ್ದು! ಇಂತಹ ಪ್ರಕೃತಿಮಾತೆ ಸರ್ವಕಾಲದಲ್ಲಿಯೂ ಪೂಜನೀಯಳು.
ಈ ಎಲ್ಲ ಭಾವನೆಗಳನ್ನೂ ನಾವು ವಂದೇ ಮಾತರಂನಲ್ಲಿ ಕಾಣಬಹುದು. ಈಗ ನನಗೆ ಅನ್ನಿಸುತ್ತದೆ: ಶ್ರೀ ಬಂಕಿಮಚಂದ್ರ ಚಟರ್ಜಿಯವರು ಈ ಗೀತೆಯನ್ನು ಬರೆಯುವಾಗ ಅವರ ಮನಸ್ಸಿನಲ್ಲಿದ್ದುದು ಭಾರತಮಾತೆಯಲ್ಲ, ಪ್ರಕೃತಿಮಾತೆಯೇ!

ನಾವೆಲ್ಲ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿಂದ, ಸಹಬಾಳ್ವೆ ನಡೆಸುವಂತೆ ಮಾಡೋಣ.
ವಂದನೆಗಳು.
" We do no great things
Only small things with great love''

- Mother Teresa
26 September 1997

Dear friend,

This year, I thought that I would tell you something about my cards.

The commitment: Every year, during the Wildlife Week, observed during the first week: of October, people rededicate themselves to preserve and protect the wildlife. My humble contribution to this global cause is through my wildlife message cards.
What started as a hobby, thirteen years ago, has come to stay as a commitment. These wildlife cards are drawn and coloured individually, throughout the year, and sent free to recipients all over the world with a request to spread the Wildlife Conservation Message, during the WildlifeWeek.

The Number: The cards which numbered 120 to 150 in the beginning, acquired popularity and the demand forced me to make more and more cards. Since six years, I have set a target of making 3000 cards a year. Though I have not succeeded in this attempt, the number of cards, each year have increased to 2700 to 2900. Put together, in 13 years, the total number of cards has exceeded 25,000!

This has been only possible, only with your continued encouragement and support. Because of the increasing number of recipients year after year, I have restricted this number to 1250, so that each gets at least two cards.

Please remember that I am not an artist. But I have put a small part of my heart into each of these cards. And do not need publicity. The cards do.

Recycled-content Paper: Years ago, the then minister for Environment thought otherwise. She wrote saying "Why can't you plant trees instead of wasting paper?" So, I tried to get the cards made of recycled paper. I was greatly relieved, when I came to know that today, most of the writing material that we use are made out of recycled content paper.

Request: My postal burden has doubled from this year. Please help me by sending extra stamps. Also, please do not forget to write the change of address, or as far as possible, give me your permanent address.

Let us join hands to make our only earth, a place where all elements of life can live in health, happiness and harmony.
Thank you.