Sunday, February 22, 2026

ಜೀವವೈವಿಧ್ಯತೆ ಮತ್ತು ಸಂರಕ್ಷಣೆ

 ಜೀವವೈವಿಧ್ಯತೆ ಮತ್ತು ಸಂರಕ್ಷಣೆ 

ಕೋವಿಡ್೧೯ ಮಹಾಮಾರಿ ಇಡೀ ಪ್ರಪಂಚವನ್ನು ಕಂಗೆಡಿಸಿರುವ ಹಿನ್ನೆಲೆಯಲ್ಲಿ ಇಂದಿನ ಕಾರ್ಯಕ್ರಮವನ್ನು ನಾವು ಪರಿಗಣಿಸಬೇಕಾಗಿದೆ. ಕೋವಿಡ್೧೯ರ ಪಿಡುಗು ಸುಮಾರು ೨೦ ತಿಂಗಳುಗಳಿAದ ಇಡೀ ಮಾನವ ಸಂಕುಲವನ್ನು ತಟಸ್ಥಗೊಳಿಸಿದೆ; ಇಡೀ ಮನುಕುಲಕ್ಕೆ ಮಂಕು ಬಡಿದಿದೆ. ಪ್ರಪಂಚದ ಇನ್ನಾವುದೇ ಜೀವಿಗಳಲ್ಲೂ ಕಂಡುಬರದ ಈ ರೋಗ ಮನುಷ್ಯನೊಬ್ಬನಿಗೆ ಮಾತ್ರ ಅಮರಿಕೊಂಡಿರುವುದು ವಿಚಿತ್ರವೇ ಸರಿ!

ಅಷ್ಟಕ್ಕೂ ಕೋವಿಡ್೧೯ ಎಂದರೇನು? ವೈರಸ್‌ಗಳಲ್ಲಿ ಕರೋನಾ ಎಂಬ ದೊಡ್ಡ ಖಓಂ ವೈರಾಣು ಕುಟುಂಬವಿದೆ. ಕೋವಿಡ್೧೯ ಎನ್ನುವುದು ಆ ಕುಟುಂಬಕ್ಕೆ ಸೇರ್ಪಡೆಗೊಂಡ ಹೊಸ ತಳಿ! ಭೂಮಿಯ ಮೇಲೆ ಈ ವೈರಸ್‌ಗಳೆಂಬ ಜೀವಿಗಳ ಅಸ್ಥಿತ್ವ ಇಂದು ನೆನ್ನೆಯದಲ್ಲ. ಈ ಜೀವಿಗಳು ಭೂಮಿಯ ಮೇಲೆ ಹುಟ್ಟಿ ನಾನ್ನೂರು ಕೋಟಿ ವರ್ಷಗಳೇ ಕಳೆದಿವೆ! ಅಂದರೆ, ಇವು ಭೂಮಿಯ ಮೇಲೆ ಅವತರಿಸಿದ ಮೊದಮೊದಲ ಜೀವಿಗಳು! ನಾನ್ನೂರು ಕೋಟಿ ವರ್ಷಗಳಿಂದ ವೈರಸ್‌ಗಳು ಇಡೀ ಪ್ರಪಂಚವನ್ನು ಆವರಿಸಿಕೊಂಡಿವೆ. ಸಾವಿರಾರು ಪ್ರಬೇಧದ ವೈರಾಣುಗಳು ಭೂಮಿಯ ಮೇಲಿದ್ದರೂ, ಅವುಗಳಲ್ಲಿ ಮನುಷ್ಯನನ್ನು ರೋಗಗಳ ಮೂಲಕ ಕಾಡಿ, ಜೀವಕ್ಕೇ ಅಪಾಯಕಾರಿಯಾದ ವೈರಾಣುಗಳು ಬೆರಳೆಣಿಕೆಯಷ್ಟು ಮಾತ್ರ.

ಇಡೀ ಭೂಮಿಯೇ ಪ್ರಕೃತಿಯ ಪ್ರಯೋಗ ಶಾಲೆ! ಕೋಟ್ಯಂತರ ಜೀವಿಗಳು ಭೂಮಿಯ ಮೇಲೆ ವಿಕಾಸ ಹೊಂದಿ, ಏಕಾಣು ಜೀವಿಗಳಿಂದ ಬಹು ಜೀವಕೋಶಗಳುಳ್ಳ ಜೀವಿಗಳು, ನಂತರ ಸಣ್ಣ ಸಣ್ಣ ಜಲಚರಗಳು, ಹುಳಗಳು, ನೀರಿನಿಂದ ಹೊರಬಂದ ದ್ವಿಚರಿಗಳು, ಅಲ್ಲಿಂದ ಮುಂದಕ್ಕೆ ಸರೀಸೃಪಗಳು, ಹಕ್ಕಿಗಳು, ಸ್ತನಿಗಳು, ಹೀಗೆ ಮುಂದುವರೆದು, ಕಟ್ಟಕಡೆಗೆ ಭೂಮಿಯ ಮೇಲೆ ವಿಕಾಸ ಹೊಂದಿದ ಜೀವಿಗಳೇ ಮಾನವರು. ಆದ್ದರಿಂದ ಜೀವವಿಕಾಸದಲ್ಲಿ ಎಲ್ಲರಿಗಿಂತ ಪರಿಪಕ್ವವಾದ ಜೀವಿಗಳು ನಾವು!

ನಮ್ಮ ಮೆದುಳು ಇತರ ಎಲ್ಲ ಪ್ರಾಣಿಗಳಿಗಿಂತ ಅತ್ಯಂತ ವಿಕಾಸ ಹೊಂದಿದ ಅಂಗವಾಗಿದೆ. ಉಳಿದೆಲ್ಲ ಪ್ರಾಣಿಗಳಿಗಿಂತಲೂ ಅಧಿಕವಾದ ಆಲೋಚನಾ ಶಕ್ತಿ, ಬುದ್ಧಿಶಕ್ತಿ ನಮಗಿದೆ. ಜೊತೆಗೆ ವಿವೇಚನಾ ಶಕ್ತಿ, ಅಂದರೆ ಯಾವುದು ಸರಿ ಯಾವುದು ತಪುö್ಪ ಎಂದು ತಾಳೆ ಹಾಕುವ ಪರಿಜ್ಞಾನ, ನಮಗಿದೆ. ಮುಂಬರುವ ಕಷ್ಟಗಳನ್ನು ಅರಿತು, ಅವುಗಳನ್ನು ಎದುರಿಸುವ, ಬುದ್ಧಿವಂತಿಕೆಯಿAದ ಪರಿಹರಿಸಿಕೊಳ್ಳುವ ಶಕ್ತಿ ಮತ್ತು ಇತರ ಎಲ್ಲ ಜೀವಿಗಳನ್ನು ಮೀರಿ ಬದುಕುವ ಕಲೆ ನಮಗಿದೆ. ಹಾಗೆಂದು ನಾವು ಜಂಬಪಡಬೇಕಿಲ್ಲ.

ಮತ್ತು ಹೀಗೆ ವಿಕಾಸ ಹೊಂದಿದ ಜೀವಿಗಳಲ್ಲಿ ಎಲ್ಲವೂ ಈವತ್ತು ಭೂಮಿಯ ಮೇಲೆ ಇಲ್ಲ. ವಿಜ್ಞಾನಿಗಳ ಪ್ರಕಾರ ಈ ಜೀವಿಗಳಲ್ಲಿ ಶೇಕಡ ೯೯ರಷ್ಟು ಪ್ರಬೇಧದ ಜೀವಿಗಳು ಕಾಲಾಕಾಲಕ್ಕೆ ನಶಿಸಿಹೋಗಿವೆ. ಅಂದರೆ, ಭೂಮಿಯ ಮೇಲೆ ಇಂದು ನಾವು ಕಾಣುತ್ತಿರುವುದು, ವಿಕಾಸ ಹೊಂದಿದ ಬರೇ ೧% ಪ್ರಬೇಧದ ಜೀವಿಗಳನ್ನು ಮಾತ್ರ. ಉಳಿದುವು ಏನಾದವು? ಅವು ನಶಿಸಿಹೋಗಲು ಕಾರಣವೇನು?

ಒಂದು ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ: ಇಷ್ಟೊಂದು ಜೀವಿಗಳು ಈ ಭೂಮಿಗೆ ಬೇಕಿತ್ತೆ? ಜಗವ ನಿರವಿಸಿದ ಕೈಯ್ಯೊಂದಾದೊಡೆ ಏಕಿಷ್ಟು ಜೀವಗತಿ? ಎಂದು ಡಿವಿಜಿಯವರು ಮಂಕುತಿಮ್ಮನ ಕಗ್ಗದಲ್ಲಿ ಕೇಳುತ್ತಾರೆ. ಜಗತ್ತಿನಲ್ಲಿ ಇಷ್ಟೊಂದು ಪ್ರಬೇಧದ ಜೀವಿಗಳು ಕಂಡುಬರಲು ಬಲಿಷ್ಟ ಕಾರಣ ಇರಲೇ ಬೇಕಲ್ಲವೆ?

ನಾವು ಒಂದು ವಿಚಾರವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ. ಒಂದು ಜೀವಿ ತನ್ನ ಜೀವನ ಚಕ್ರದಲ್ಲಿ, ಪ್ರಕೃತಿಯಲ್ಲಿರುವ ಅನೇಕ ವಸ್ತುಗಳನ್ನು ಬಳಸಿಕೊಳ್ಳುತ್ತದೆ. ಅದು ಆ ಜೀವಿಯ ಆಹಾರವೇ ಆಗಿರಬಹುದು ಅಥವಾ ತನ್ನ ವಾಸಕ್ಕೆ ಬೇಕಾಗುವ ಸಲಕರಣೆಗಳಿರಬಹುದು. ಈ ಕಚ್ಚಾ ವಸ್ತುಗಳನ್ನು ಬಳಸುತ್ತಾ ಹೋದರೆ, ಅವುಗಳ ಪ್ರಮಾಣ ಕಡಿಮೆಯಾಗಿ ಮುಂದೊAದು ದಿನ ಅದು ಭೂಮಿಯ ಮೇಲೆ ಲಭಿಸದೇ ಹೋಗುತ್ತದೆ. ಹಾಗಾಗಿ ಈ ವಸ್ತುಗಳು ಉಪಯೋಗಿಲ್ಪಡುತ್ತಾ ಹೋದಂತೆ, ಅವುಗಳನ್ನು ಮತ್ತೊಂದು ಎಡೆಯಿಂದ ಪುನಃ ಪೂರೈಸುತ್ತಾ ಬರುವುದು ಅನಿವಾರ್ಯವಾಗುತ್ತದೆ. ಈ ಕೆಲಸವನ್ನು ಯಾರು ಮಾಡಬೇಕು?

ಇದಕ್ಕೆ ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ: ಕಾಡಿನಲ್ಲಿ ಒಂದು ಜಿಂಕೆಯಿದೆಯೆAದು ಭಾವಿಸಿ. ಅದು ಪ್ರತಿದಿನ ಹುಲ್ಲು ತಿನ್ನುತ್ತದೆ. ಅದರ ಸಂತತಿ ಅಧಿಕವಾಗುತ್ತ ಹೋದಂತೆ, ಕಾಡಿನಲ್ಲಿ ಹುಲ್ಲಿನ ಪ್ರಮಾಣ ಬರಬರುತ್ತಾ ಕಡಿಮೆಯಾಗುತ್ತದೆ. ಕೊನೆಗೆ ಒಂದು ದಿನ ಆ ಎಲ್ಲ ಜಿಂಕೆಗಳಿಗೆ ತಿನ್ನಲು ಹುಲ್ಲೇ ಇರುವುದಿಲ್ಲ. ಅಲ್ಲದೆ, ಜಿಂಕೆಗಳ ಸಂಖ್ಯೆ ಮಿತಿ ಮೀರಿ ಒಂದು ದಿನ, ಹುಲ್ಲು ತಿಂದು ಬದುಕುವ ಉಳಿದ ಪ್ರಾಣಿಗಳು ಹಸಿವೆಯಿಂದ ನರಳುವಂತಾಗುತ್ತವೆ. ಇಂತಹ ಸಂದರ್ಭ ಬಾರದಂತಿರಲು ಕಾಡಿನಲ್ಲಿ ಎರಡು ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತದೆ: ೧. ಜಿಂಕೆಗಳ ಸಂಖ್ಯೆಯ ನಿಯಂತ್ರಣ. ೨. ಬಳಕೆಯಾದ ಹುಲ್ಲನ್ನು ಮತ್ತೊಮ್ಮೆ ಬೆಳೆಸುವುದು.

ಕಾಡಿನಲ್ಲಿ ಜಿಂಕೆಗಳ ಸಂಖ್ಯೆಯನ್ನು ನಿಯಂತ್ರಿಸಲು ಹುಲಿಯಂತಹ ಮಾಂಸಾಹಾರಿ ಪ್ರಾಣಿ ಇರಬೇಕು. ಒಂದು ಹುಲಿಯು ವಾರಕ್ಕೊಂದು ಜಿಂಕೆಯನ್ನು ತಿನ್ನುತ್ತದೆ ಎಂದಿಟ್ಟುಕೊAಡರೆ, ಅದಕ್ಕೆ ವರ್ಷಕ್ಕೆ ೫೦ ಜಿಂಕೆಗಳು ಬೇಕೆಂದಾಯಿತು. ಹಾಗಾಗಬೇಕಿದ್ದಲ್ಲಿ, ಆ ಕಾಡಿನ ವ್ಯಾಪ್ತಿಯಲ್ಲಿ ಸುಮಾರು ಐನೂರು ಜಿಂಕೆಗಳಿರಬೇಕು. ಈ ಜಿಂಕೆಗಳಿಗೆ ಹುಲ್ಲು ಮತ್ತು ಹಸಿರುಕಾಡು ಬೆಳೆಸುವವರು ಬೇಕು. ಈ ಕಾರ್ಯವನ್ನು ಸಣ್ಣ ಸಣ್ಣ ಜೀವಿಗಳಾದ ಹಾವು, ಸರೀಸೃಪಗಳು, ಮೂಷಕಗಳು, ಕಪಿ, ಹಕ್ಕಿಗಳು ಮತ್ತು ಕೀಟಗಳು ಮುಂತಾದ ಪ್ರಾಣಿಗಳು ಮಾಡುತ್ತವೆ. ಕಾಡಿನಲ್ಲಿ ನೆಲದ ಉಳುಮೆ, ಗೊಬ್ಬರದ ಪೂರೈಕೆ, ಹೂಗಳ ಪರಾಗಸ್ಪರ್ಶ, ಬೀಜ ಪ್ರಸರಣ ಮುಂತಾದ ಕ್ರಿಯೆಗಳು ಈ ಪ್ರಾಣಿಗಳಿಂದ ನಡೆಯುತ್ತದೆ. ಈ ಒಟ್ಟಾರೆ ಪ್ರಕ್ರಿಯೆಗಳಿಂದ ಗಿಡ, ಮರ, ಬಳ್ಳಿ, ಪ್ರಾಣಿ, ಪಕ್ಷಿ, ಕೀಟಗಳಿಂದ ಕಾಡು ನಳನಳಿಸುತ್ತದೆ. ಈ ಕಾಡಿನ ರಾಜ ಹುಲಿ! ಆ ಒಂದು ಹುಲಿಗಾಗಿ ಇಡೀ ಕಾಡು ತಯಾರಾಗಿರುತ್ತದೆ. ಒಂದು ವೇಳೆ ಹುಲಿ ಸತ್ತುಹೋಯಿತೆಂದು ಭಾವಿಸೋಣ. ಆ ಹುಲಿ ಇಲ್ಲದಿದ್ದರೆ, ಬರೇ ಹತ್ತು ವರ್ಷಗಳಲ್ಲಿ ಇಡೀ ಕಾಡು ನಶಿಸಿಹೋಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ!

ಹೀಗೆ ಪ್ರಕೃತಿಯಲ್ಲಿ ಎಲ್ಲ ಜೀವಿಗಳೂ ಒಂದಕ್ಕೊAದು ಅವಲಂಬಿತವಾಗಿ, ಒಂದರ ಬೇಕು ಬೇಡಗಳನ್ನು ಮತ್ತೊಂದು ಜೀವಿ ಅರಿತು, ಒಂದಕ್ಕೊAದು ಪೂರಕವಾಗಿ ತಮ್ಮ ತಮ್ಮ ಜೀವನವನ್ನು ಸಾಗಿಸುತ್ತವೆ.

ಇಲ್ಲಿ, ಹುಲಿಗೇನೂ ಹಸಿರು ಕಾಡು ಬೇಕಿರಲಿಲ್ಲ. ಅದಕ್ಕೆ ದಣಿವಾದರೆ, ಒಂದು ಹುಲಿ ಮರದ ಕೆಳಗೇನೂ ವಿಶ್ರಮಿಸುವುದಿಲ್ಲ. ಆದರೆ, ಅದೇ ಕಾಡಿನ ಅಸ್ಥಿತ್ವಕ್ಕೆ ಆ ಒಂದು ಹುಲಿ ಅನಿವಾರ್ಯ! ಇದನ್ನೇ ನಾವು “ಜೀವವೈವಿಧ್ಯ” ಎನ್ನುತ್ತೇವೆ. ಪ್ರಕೃತಿಯಲ್ಲಿ ಪ್ರತಿಯೊಂದು ಜೀವದ್ರವ್ಯವೂ ಸದಾ ಕಾಲ ದೊರಕುವಂತಾಗಲು, ಪ್ರತಿಯೊಂದು ಜೀವಿಯೂ ಮತ್ತೊಂದು ಜೀವಿಗೆ ಪೂರಕವಾಗಿ ಬಾಳನ್ನು ಸಾಗಿಸುತ್ತದೆ; ಪ್ರಕೃತಿಗೆ ತನ್ನ ಅಮೂಲ್ಯವಾದ ಕೊಡುಗೆಯನ್ನು ಹಿಂದಿರುಗಿ ಕೊಡುತ್ತದೆ. ಭೂಮಿಯ ಈ ಪ್ರಯೋಗಾಲಯದಲ್ಲಿ ಯಾವ ಜೀವಿ ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅಸಮರ್ಥವಾಗಿರುತ್ತದೆಯೋ ಅದು ಸ್ವಾಭಾವಿಕವಾಗಿ ತನ್ನಂತಾನೇ ನಶಿಸಿಹೋಗುತ್ತದೆ.

ಪ್ರತಿಯೊಂದು ಜೀವಿಯೂ ತನ್ನ ಜೀವನವನ್ನು ಸಾಗಿಸಲು ತಕ್ಕುದಾದ, ಎಲ್ಲ ಜೀವದ್ರವ್ಯಗಳೂ ದೊರಕುವ ಸ್ಥಳವನ್ನು ತನ್ನ ವಾಸಸ್ಥಾನವನ್ನಾಗಿ ಆಯ್ಕೆ ಮಾಡಿಕೊಳ್ಳುತ್ತದೆ. ಅಲ್ಲಿಂದ ಮುಂದೆ ಆ ಆವಾಸದಲ್ಲಿ ತನ್ನ ಸ್ಥಿರತೆಯನ್ನು ಪಡೆಯಲು, ತನ್ನ ದೇಹದಲ್ಲಿ, ನಡವಳಿಕೆಗಳಲ್ಲಿ, ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತದೆ. ಹೀಗೆ ಸಸ್ಯಗಳು ಮತ್ತು ಪ್ರಾಣಿಗಳಿಗೆ ಅನೇಕ ರೀತಿಯ ಆವಾಸಗಳಿವೆ. ಮರುಭೂಮಿ, ಹುಲ್ಲುಗಾವಲು, ಸಮುದ್ರ ಜೀವಿಗಳು, ಜಲಚರಗಳು, ದಟ್ಟಕಾಡುಗಳು ..... ಹೀಗೆ ಬಗೆಬಗೆಯ ಆವಾಸಗಳಿವೆ. ಪ್ರತಿಯೊಂದು ಆವಾಸದಲ್ಲಿಯೂ, ಅಲ್ಲಿ ತಮ್ಮ ಜೀವನಚಕ್ರವನ್ನು ಸಕ್ರಿಯವಾಗಿ ಬಾಳಲು ಯೋಗ್ಯವಾದ ಜೀವಿಗಳು ಮನೆ ಮಾಡಿಕೊಂಡಿರುತ್ತವೆ.

ಈ ನೈಸರ್ಗಿಕ ಪ್ರಕ್ರಿಯೆಯಲ್ಲಿ ಯಾವುದೇ ಜೀವಿಗೂ ತಾನು ಈ ಅದ್ಭುತ ಕಾರ್ಯವನ್ನು ಮಾಡುತ್ತಿದ್ದೇನೆಂದು ತಿಳಿದೇ ಇರುವುದಿಲ್ಲ. ಯಾವೊಂದು ಪ್ರಾಣಿಯೂ ತನ್ನಿಂದಲೇ ಈ ಕಾರ್ಯವಾಯಿತು ಎಂದು ಹೇಳಿಕೊಂಡು ಬೀಗುವುದಿಲ್ಲ. ನಿಸರ್ಗದ ಪ್ರತಿಯೊಂದು ಜೀವವೂ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಒಂದಕ್ಕೊAದು ಪೂರಕವಾಗಿ, ನಿಸ್ಪöÈಹತೆಯಿಂದ, ತನ್ನ ಪಾತ್ರವನ್ನು ನಿಭಾಯಿಸಿ, ಇಳೆಯ ಇಡೀ ಜೀವಸಂಕುಲ ಯಾವುದೇ ಅಡೆತಡೆಗಳಿಲ್ಲದೆ ಬಾಳಾಟ ನಡೆಸಲು ಅನುವು ಮಾಡಿ ಕೊಡುತ್ತದೆ. ಈ ರೀತಿಯ ಸಹಬಾಳ್ವೆಯಿಂದ ಪ್ರಕೃತಿಯಲ್ಲಿ ಸದಾಕಾಲ ಒಂದು ರೀತಿಯ ಸಮತೋಲನ ಉಂಟಾಗುತ್ತದೆ.

ಭೂಮಿಯ ಮೇಲೆ ಮಾನವನದ್ದು ಎಲ್ಲರಿಗಿಂತ ವಿಕಾಸ ಹೊಂದಿದ ಜೀವ. ನಿಜಕ್ಕೂ ಇದು ಪ್ರಕೃತಿಯ ನಾನ್ನೂರು ಕೋಟಿ ವರ್ಷಗಳ ಫಲವೆಂದೇ ಹೇಳಬೇಕು. ಇಡೀ ಭೂಮಿಯನ್ನು ತನ್ನ ಪ್ರಯೋಗಾಲಯವನ್ನಾಗಿಸಿಕೊಂಡು ಬ್ಯಾಕ್ಟೀರಿಯಾ, ಅಮೀಬಾ ಮುಂತಾದ ಜೀವಿಗಳಿಂದ ಹಿಡಿದು, ಚಿರತೆ, ಚಿಂಪಾAಜಿಯವರೆಗೆ, ಮನುಷ್ಯನ ದೇಹಕ್ಕೆ ಏನೆಲ್ಲ ರಾಸಾಯನಿಕ ದ್ರವ್ಯಗಳು ಅಗತ್ಯವೋ, ಅವನ ಅಂಗಾAಗಗಳಿಗೆ ಏನೆಲ್ಲ ಗುಣವಿಶೇಷಗಳು ಮುಖ್ಯವೋ, ಅವುಗಳನ್ನೆಲ್ಲ ನಮ್ಮ ಜೀವತಂತುಗಳಲ್ಲಿ ಕ್ರೋಢೀಕರಿಸಿ, ತಯಾರಿಸಲ್ಪಟ್ಟ ಒಟ್ಟಾರೆ ಸ್ವರೂಪವೇ ನಾವು!

ಇಂದು ಪ್ರಪಂಚದಲ್ಲಿ ವಾಸವಾಗಿರುವ ಎಲ್ಲ ಜೀವಿಗಳಿಗಿಂತ ನಾವೇ ಪ್ರಜ್ಞಾವಂತರು, ಮೇಧಾವಿಗಳು ಎಂದು ಬೀಗುತ್ತೇವೆ. ಆದರೆ, ಈ ಹಿಂದೆ ಭೂಮಿಯಲ್ಲಿ ವಿಕಾಸ ಹೊಂದಿದ ಜೀವಿಗಳಿಗೆ ಹೋಲಿಸಿದರೆ, ನಾವು ಆಡುಮಾತಿನಲ್ಲಿ ‘ಎಳಸು’ಗಳು! ೪೮ ಕೋಟಿ ವರ್ಷಗಳಿಂದ ಬಾಳ್ವೆ ನಡೆಸುತ್ತಿರುವ ಕೀಟಗಳು, ೩೬ ಕೋಟಿ ವರ್ಷಗಳಿಂದ ಬಾಳ್ವೆ ನಡೆಸುತ್ತಿರುವ ಕಪ್ಪೆಗಳು, ೧೬.೫ ಕೋಟಿ ವರ್ಷಗಳಿಂದ ಬಾಳ್ವೆ ನಡೆಸುತ್ತಿರುವ ಪಕ್ಷಿಗಳು, ೬.೫ ಕೋಟಿ ವರ್ಷಗಳಿಂದ ಬಾಳ್ವೆ ನಡೆಸುತ್ತಿರುವ ಇಲಿ-ಹೆಗ್ಗಣಗಳಿಗೆ ಹೋಲಿಸಿದರೆ, ನಾವು ಬಹಳ ಇತ್ತೀಚೆಗೆ ಬಂದವರು. ಹಾಗಾಗಿ ಮನುಷ್ಯನಿಗೆ ಭೂಮಿಯ ಮೇಲೆ ಬದುಕಿಬಾಳುವ ಕಲೆ ಇನ್ನೂ ಕರಗತವಾಗಿಲ್ಲವೆಂದೇ ಹೇಳಬಹುದು!

Suಡಿvivಚಿಟ oಜಿ ಣhe ಈiಣಣesಣ ಎಂದು ವಿಕಾಸವಾದದ ಪ್ರತಿಪಾದಕ ಡಾರ್ವಿನ್ ಹೇಳಿದ್ದಾನಷ್ಟೆ. ಇಲ್ಲಿ ಈiಣಟಿess ಎಂದರೇನು? ಸಾಮಾನ್ಯವಾಗಿ ಭೂಮಿಯ ಮೇಲಿರುವ ಎಲ್ಲ ಜೀವಿಗಳಿಗಿಂತ ನಾವು ಬುದ್ಧಿಜೀವಿಗಳು, ಬಲಶಾಲಿಗಳು ಮತ್ತು ಬಲಿಷ್ಟರು ಎಂದು ಭ್ರಮಿಸಿ, ಬೀಗುತ್ತೇವೆ. ಆದರೆ, ಪ್ರಕೃತಿಯ ಪರಿಭಾಷೆಯಲ್ಲಿ ಈiಣಟಿess ಎಂದರೆ, ಭೂಮಿಯ ಮೇಲೆ ಂಡಿe ಥಿou ಜಿiಣ ಣo ಟive ಅಥವಾ ಮನುಷ್ಯನಿಗೆ ಭೂಮಿಯ ಮೇಲೆ ಬಾಳಲು ಅರ್ಹತೆಯಿದೆಯೇ ಎಂದು ಅರ್ಥೈಸಿಕೊಳ್ಳಬೇಕು. ಈ ಅರ್ಹತೆ ಇಲ್ಲದಿದ್ದಲ್ಲಿ ಅವನು ಭೂಮಿಗೆ ಭಾರ!

ಈ ಅರ್ಹತೆ ಬರಬೇಕಾದರೆ, ನಾವು ಏನು ಮಾಡಬೇಕು? ಮೊದಲಿಗೆ ಮನುಷ್ಯರು ಭೂಮಿಯ ಮೇಲೆ ನಡೆಯುತ್ತಿರುವ ನಿರಂತರ ಬಾಳಾಟದಲ್ಲಿ ತನ್ನ ಪಾತ್ರ ಬಹಳ ಪ್ರಮುಖವಾದದ್ದು ಎಂಬುದನ್ನು ಅರಿತು, ತಾವು ಭೂಮಿಗೆ ಅನಿವಾರ್ಯ ಎಂಬುದನ್ನು ಪ್ರಕೃತಿಗೆ ಸಾಬೀತುಪಡಿಸಬೇಕು. ಸಹಜೀವಿಗಳೊಡಗೂಡಿ ಅವುಗಳ ಬಾಳಿಗೆ ಪೂರಕವಾಗಿ ಸ್ಪಂದಿಸಬೇಕು. ಹಾಗಾಗಿ, ಪ್ರಕೃತಿಯಿಂದ ಎಲ್ಲವನ್ನೂ ಪಡೆದ ನಾವು ಈವರೆಗೆ, ಪ್ರತಿಯಾಗಿ ಯಾವ ಕೊಡುಗೆಯನ್ನು ಹಿಂದಿರುಗಿಸಿ ಕೊಟ್ಟಿದ್ದೇವೆ ಎಂಬುದನ್ನು ಗಂಭೀರವಾಗಿ ಆಲೋಚಿಸಲೇ ಬೇಕಾದ ಕಾಲ ಬಂದಿದೆ.

ಏಕೆAದರೆ, ಪ್ರಪಂಚದಲ್ಲಿ ಈವತ್ತು ಪ್ರಕೃತಿಗೆ ಪೂರಕವಲ್ಲದ, ಪ್ರಕೃತಿಗೆ ಹಿಂದಿರುಗಿಸಿ ಏನನ್ನೂ ಕೊಡದಿರುವ ಜೀವಿ ನಾವೊಬ್ಬರೆ! ಇದಲ್ಲದೆ, ಭೂಮಿಯ ಮೇಲಿರುವ ಎಲ್ಲ ಮೂಲದ್ರವ್ಯ ಸಂಪತ್ತುಗಳನ್ನು ನಿರಾತಂಕವಾಗಿ, ಸ್ವೇಚ್ಛೆಯಿಂದ, ಅನವಶ್ಯಕವಾಗಿ ಮತ್ತು ಅತಿಯಾಗಿ ಬಳಸಿಕೊಳ್ಳುತ್ತಿದ್ದೇವೆ. ಸ್ವಾರ್ಥ, ದುರಾಸೆ ಮತ್ತು ಕ್ರೌರ್ಯ: ಇವು ಭೂಮಿಯಲ್ಲಿ ವಾಸಿಸುವ ಪ್ರಾಣಿಗಳಲ್ಲಿ ಮನುಷ್ಯನಲ್ಲಿ ಮಾತ್ರ ಕಂಡುಬರುವ ವಿಶೇಷ ದುರ್ಗುಣಗಳು! ಈ ದುರ್ಗುಣಗಳ ದೆಸೆಯಿಂದ ನಾವಿಂದು ಭೂಮಿಗೆ ನಿಷ್ಪçಯೋಜಕರಾಗುತ್ತಿದ್ದೇವೆ. ಪ್ರಾಣಿ ಪಕ್ಷಿಗಳ ಬಗೆಗಿರುವ ಅಸಡ್ಡೆಯಿಂದಾಗಿ, ಅವುಗಳ ಮೇಲೆ ಕೂಡ ಇದರ ದುಷ್ಪರಿಣಾಮ ಕಂಡು ಬರುತ್ತಿದೆ. ಪ್ರಾಕೃತಿಕ ಸಂಪತ್ತಿನ ಅತಿಯಾದ ದುರ್ಬಳಕೆಯಿಂದ ನಿಸರ್ಗದಲ್ಲಿ ಅಸಮತೋಲನ ಉಂಟಾಗಿದೆ. ಇದು ನಮ್ಮ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ.

ಈ ವಿಕೃತಿಗೆ ಮತ್ತೊಂದು ಕಾರಣ ಜನಸಂಖ್ಯಾ ಸ್ಫೋಟ. ಎಗ್ಗಿಲ್ಲದೆ ಏರುತ್ತಿರುವ ಜನಸಂಖ್ಯೆಯಿAದಾಗಿ, ಪ್ರಕೃತಿ ವಿನಾಶವಾಗುತ್ತಿದೆ. ಉದಾಹರಣೆಗೆ, ಪಟ್ಟಣಗಳೆಲ್ಲ ಕಾಂಕ್ರೀಟ್ ಕಾಡುಗಳಾಗುತ್ತಿವೆ. ಕಟ್ಟಡಗಳನ್ನು ಕಟ್ಟಲು ಅವಶ್ಯವಾದ ಕಬ್ಬಿಣ, ಕಲ್ಲು, ಮರಳು ಮುಂತಾದ ಪ್ರಾಕೃತಿಕ ಸಂಪತ್ತು ನಿರಂತರವಾಗಿ ಲೂಟಿಯಾಗುತ್ತಿದೆ. ಮರಗಿಡಗಳನ್ನಾದರೂ ನೆಟ್ಟು ಬೆಳೆಸಬಹುದು. ಆದರೆ, ಖನಿಜಗಳು, ಲೋಹಗಳು ಪುನಃ ತಯಾರಾಗಬೇಕಾದರೆ, ಲಕ್ಷಾಂತರ ವರ್ಷಗಳೇ ಬೇಕಲ್ಲವೆ?

ಈ ಎಲ್ಲ ಕಾರಣಗಳಿಂದ ಈವತ್ತು ಭೂಮಿಯಿಂದ ನಶಿಸಿಹೋಗುವ ಜೀವಿಗಳ ಪಟ್ಟಿಯಲ್ಲಿ ನಾವೇ ಮೊದಲಿಗರಾಗಿ ನಿಂತಿದ್ದೇವೆ. ನಮಗೆ ದೇಹದ ರೋಗನಿರೋಧಕ ಶಕ್ತಿ ಉಳಿದ ಜೀವಿಗಳಷ್ಟು ಬೆಳೆದಿಲ್ಲ. ಆದ್ದರಿಂದ ಅತ್ಯಂತ ದುರ್ಬಲರಾದ ನಮಗೆ ಯಾವ ಹೊಸ ರೋಗವನ್ನೂ ತಡೆದುಕೊಳ್ಳುವ

ಶಕ್ತಿಯಿಲ್ಲ. ಇದಲ್ಲದೆ, ನಾವು ಪ್ರಪಂಚದ ಎಲ್ಲೆಡೆ ವಾಸವಾಗಿದ್ದೇವೆ. ಪ್ರಪಂಚದಲ್ಲಿ ಒಂದೆಡೆಯಿAದ ಮತ್ತೊಂದೆಡೆಗೆ ನಾವು ಅತಿ ವೇಗದಿಂದ ನೆಲ, ಜಲ ಮತ್ತು ಆಕಾಶದಲ್ಲಿ ಪ್ರಯಾಯಾಣಿಸುವುದರಿಂದ ರೋಗಗಳನ್ನು ಅಷ್ಟೇ ವೇಗವಾಗಿ ಎಲ್ಲೆಡೆ ಹರಡುತ್ತಿದ್ದೇವೆ. ಇದರಿಂದ ಮನುಷ್ಯನಿಂದ ಮನುಷ್ಯನಿಗೆ ಸುಲಭವಾಗಿ ರೋಗ ಹರಡುತ್ತಿದೆ.

ಹಾಗಾಗಿ ವೈರಾಣು ರೋಗಗಳಿಗೆ ನಾವು ಬಹು ಬೇಗ ತುತ್ತಾಗುತ್ತಿದ್ದೇವೆ. ಇದು ವೈರಸ್ ಮತ್ತು ಮಾನವನ ನಡುವಿನ ಯುದ್ಧ. ಎಲ್ಲಕ್ಕಿಂತ ವಿಪರ್ಯಾಸದ ಸಂಗತಿ ಏನೆಂದರೆ, ಭೂಮಿಯ ಮೇಲೆ ವಿಕಾಸ ಹೊಂದಿದ ಮೊಟ್ಟ ಮೊದಲ ಜೀವಿಯಾದ ವೈರಾಣು, ಇಂದು ಇದೇ ಭೂಮಿಯ ಮೇಲೆ ವಿಕಾಸ ಹೊಂದಿದ ಕಟ್ಟಕಡೆಯ ಜೀವಿಯಾದ ಮನುಷ್ಯನ ಮೇಲೆ ಸಮರ ಸಾರಿದೆ!

ಕೋವಿಡ್೧೯ ವೈರಾಣುಗಳು ಮಾನವ ನಿರ್ಮಿತವಾದ ಜೈವಿಕ ಅಸ್ತç ಎಂದು ಕೂಡ ಹೇಳುವುದನ್ನು ಕೇಳಿದ್ದೇವೆ. ಇದು ಹಸಿ ಸುಳ್ಳು ಸುದ್ದಿಯಾಗಿದೆ. ಆದರೆ, ನೀವು ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಒಂದು ಅಂಶ ಸ್ಪಷ್ಟವಾಗುತ್ತದೆ: ಕಳೆದ ಸಾವಿರಾರು ವರ್ಷಗಳಲ್ಲಿ, ಮಾನವನ ಜನಸಂಖ್ಯೆಯ ನಿಯಂತ್ರಣವು, ಪ್ರಾಕೃತಿಕ ವಿಕೋಪಗಳಾದ ನೆರೆಹಾವಳಿ, ಭೂಕಂಪ, ಬರಗಾಲ, ಉಲ್ಕಾಪಾತ ಮುಂತಾದುವುಗಳಿಗಿAತ ಹೆಚ್ಚಾಗಿ, ಮನುಷ್ಯರು ಪರಸ್ಪರ ಕಾದಾಡಿದ ಯುದ್ಧಗಳಿಂದಲೇ ಸಾಧ್ಯವಾಗಿದೆ ಎಂಬುದು ವೇದ್ಯವಾಗುತ್ತದೆ. ಈ ಯುದ್ಧಗಳಲ್ಲಿ ಒಂದೊAದು ಸಾರಿಯೂ ಕೋಟ್ಯಂತರ ಮಂದಿ ಸಾವನ್ನಪ್ಪಿದ್ದಾರೆ! ಯುದ್ಧ ಎನ್ನುವುದು ಮಾನವ-ಮಾನವನ ನಡುವೆ ನಡೆಯುವ ಸಂಘರ್ಷ!

ಪರಿಸರ ಮತ್ತು ಜೀವವೈವಿಧ್ಯ ಸಂರಕ್ಷಣೆ ಹೇಗೆ? ಮಾನವನ ಸ್ವಾರ್ಥ, ದುರಾಸೆ ಮತ್ತು ಕ್ರೌರ್ಯದಿಂದಾಗಿ ಇಂದು ಎಷ್ಟೋ ಜೀವಿಗಳು ಕಣ್ಮರೆಯಾಗಿವೆ. ಜನಸಂಖ್ಯಾ ಸ್ಫೋಟ, ನಗರೀಕರಣ, ಔದ್ಯೋಗೀಕರಣ, ಆಧುನಿಕ ಬೇಸಾಯದಲ್ಲಿ ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬಳಕೆ, ರಾಸುಗಳ ಮೇವಿಗೆ ಕಾಡುಗಳ ಬಳಕೆ, ಪ್ರಾಣಿಹತ್ಯೆ ಮುಂತಾದ ದುಷ್ಪರಿಣಾಮಗಳಿಂದ ಇಂದು ಎಷ್ಟೋ ಜೀವಿಗಳು ವಿನಾಶದ ಹಾದಿ ಹಿಡಿದಿವೆ. ವೇಗವಾಗಿ ನಡೆಯುತ್ತಿರುವ ಈ ಬದಲಾವಣೆಗಳನ್ನು ಸೈರಿಸಿಕೊಂಡು ಬಾಳುವ ಶಕ್ತಿ ಕೆಲವು ಪ್ರಾಣಿಗಳಿಗಿದ್ದರೂ, ಕೆಲವು ಜೀವಿಗಳಿಗೆ ಇದು ದುಸ್ಸಾಹಸವಾಗಿ ತೋರುತ್ತದೆ. ಭೂ ಆವಾಸಗಳಲ್ಲಿ ಯಾವುದೇ ಬದಲಾವಣೆಯಾದರೂ, ಅದು ಜೀವವೈವಿಧ್ಯತೆಯ ಮೇಲೆ ನೇರ ಪರಿಣಾಮ ಬೀರುವುದು ಕಂಡುಬರುತ್ತದೆ. ಕೆಲವು ಜೀವಿಗಳ ಸಂಖ್ಯೆ ಮತ್ತು ನಡವಳಿಕೆಯಲ್ಲಿ ಗಣನೀಯ ವ್ಯತ್ಯಾಸಗಳಾಗಿ ಬಿಡುತ್ತವೆ. ಆರೋಗ್ಯಕರ ನೈಸರ್ಗಿಕ ವಾತಾವರಣದ ಸೂಚಕಗಳಾಗಿರುವ ಈ ಜೀವಿಗಳು ಪರಿಸರ ಸಂರಕ್ಷಣೆಯ ಕೀಲಿಕೈಗಳು. ಅವುಗಳ ಅಧ್ಯಯನ ಹಾಗೂ ಅರಿವು ಆ ಪರಿಸರದಲ್ಲಿ ಉಂಟಾಗಿರುವ ದುಷ್ಪರಿಣಾಮಗಳ ಆಳವನ್ನು ತೋರಿಸುತ್ತದೆ. ಪರಿಸರದ ಆರೋಗ್ಯ-ಅನಾರೋಗ್ಯಗಳಿಗೆ ಈ ಜೀವಿಗಳು ಅದ್ಭುತವಾದ ದಿಕ್ಸೂಚಿಗಳೆಂದು ವಿಜ್ಞಾನಿಗಳು ಪರಿಗಣಿಸಿದ್ದಾರೆ.

ಈ ದುಷ್ಪರಿಣಾಮಗಳು ಮುಂದೆ ಮನುಷ್ಯನ ಮೇಲೂ ಕಂಡುಬರುವುದು ನಿಸ್ಸಂಶಯ. ಉದಾಹರಣೆಗೆ, ಇತ್ತೀಚೆಗೆ ಅತಿಯಾಗಿ ಬಳಸುತ್ತಿರುವ ರಸಗೊಬ್ಬರಗಳು, ಕೀಟನಾಶಕ ಹಾಗೂ ಕ್ರಿಮಿನಾಶಕಗಳು ನಮ್ಮ ಆಹಾರ ಪದಾರ್ಥಗಳನ್ನು ವಿಷಪೂರಿತಗೊಳಿಸುತ್ತಿವೆ. ನಾವು ತಿಂದು ಬಿಸಾಡುವ ಆಹಾರ ಪದಾರ್ಥಗಳನ್ನೇ ತಿಂದು ಜೀವಿಸುವ ಕಾಗೆ, ಗುಬ್ಬಚ್ಚಿ ಮುಂತಾದ ಪಕ್ಷಿಗಳ ಸಂಖ್ಯೆ ಇಂದು ಇಳಿಮುಖವಾಗುತ್ತಿರುವುದನ್ನು ನೀವು ಗಮನಿಸಿರಬಹುದು. ಇದು ಮನುಷ್ಯನಿಗೆ ಹಕ್ಕಿಗಳು ನೀಡುತ್ತಿರುವ ಎಚ್ಚರಿಕೆಯ ಗಂಟೆ ಎಂದು ನಾವೆಲ್ಲ ತಿಳಿಯಬೇಕು.

ಎಷ್ಟೋ ಅಂತರರಾಷ್ಟಿçÃಯ ನಿಯಮಗಳು, ನಿಬಂಧನೆಗಳು, ಕಟ್ಟುಪಾಡುಗಳಿದ್ದರೂ, ಮಾನವನ ದುರಾಸೆ, ಸ್ವಾರ್ಥ ಮತ್ತು ಕ್ರೌರ್ಯದ ಮುಂದೆ ಈ ಸಂಪತ್ತನ್ನು ಉಳಿಸಿಕೊಳ್ಳುವ ಎಲ್ಲ ಪ್ರಯತ್ನಗಳೂ ನಿಷ್ಫಲವಾಗುತ್ತಿವೆ. ಪ್ರಾಕೃತಿಕ ಸಂಪತ್ತನ್ನು ಉಳಿಸಬೇಕು, ಪರಿಸರವನ್ನು ರಕ್ಷಿಸಬೇಕು ಮುಂತಾದ ಕೂಗು ಈಗ ಎಲ್ಲೆಡೆ ಕೇಳಿಬರುತ್ತಿದೆ. ಈ ದಿಶೆಯಲ್ಲಿ ಸರಕಾರ ಮತ್ತು ಅನೇಕ ಸಂಘ-ಸAಸ್ಥೆಗಳು ಹಲವು ಹತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು, ಅದರಲ್ಲೂ ಯುವಕ-ಯುವತಿಯರು ಹೆಚ್ಚಿನ ಕಳಕಳಿ ತೋರುತ್ತಿರುವುದು ಬಹಳ ಸಮಾಧಾನದ ವಿಷಯ. ಪ್ರಕೃತಿವೀಕ್ಷಣೆ ಮತ್ತು ಅವುಗಳ ಆವಾಸಗಳ ಅಧ್ಯಯನವೂ ಪ್ರಕೃತಿಯನ್ನು ವಿಸ್ತಾರವಾಗಿ-ಆಳವಾಗಿ ಅರಿಯಲು ಮಾತ್ರವಲ್ಲದೆ, ಆರೋಗ್ಯಪೂರ್ಣ ಪರಿಸರದ ಕಲ್ಪನೆ ಮತ್ತು ಜೀವವೈವಿಧ್ಯತೆಯ ವಿವಿಧ ಕೊಂಡಿಗಳ ತಿಳಿವಳಿಕೆ ಹೆಚ್ಚುವಲ್ಲಿಯೂ ಸಹಾಯ ಮಾಡುವುದು.

ಇವೆಲ್ಲದರೊಂದಿಗೆ ನಮ್ಮ ಬದುಕಿನೊಂದಿಗೆ ಹಾಸುಹೊಕ್ಕಾಗಿರುವ ಮತ್ತೊಂದು ಅನಿವಾರ್ಯ ವಸ್ತು, ಪ್ಲಾಸ್ಟಿಕ್. ಈ ಪ್ಲಾಸ್ಟಿಕ್ ಎನ್ನುವುದು ಪೆಟ್ರೋಲಿಯಂ ಖನಿಜದ ಉಪಪದಾರ್ಥ. ಎಲ್ಲಿಯವರೆಗೆ ನಾವು ಪೆಟ್ರೋಲ್, ಡೀಸೆಲ್, ಎಲ್‌ಪಿಜಿ, ಮುಂತಾವುಗಳನ್ನು ಬಳಸುತ್ತೇವೆಯೋ ಅಲ್ಲಿಯವರೆಗೆ ಪ್ಲಾಸ್ಟಿಕ್ ಕೂಡ ನಮ್ಮೊಂದಿಗಿರುತ್ತದೆ! ಆದ್ದರಿಂದ ಪ್ಲಾಸ್ಟಿಕ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಿ, ಅದರ ಮರುಬಳಕೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಹೆಚ್ಚು ಹೆಚ್ಚು ಕಾಲ ಸವೆಯದೆ, ಬಾಳುವಂತೆ ಇರಬೇಕು ಎಂದು ನಾವು ಬಯಸುವ ಮನೆ, ಬಹುಮಹಡಿ ಕಟ್ಟಡಗಳು, ರಸ್ತೆ, ಸೇತುವೆ, ಮುಂತಾದುವುಗಳ ನಿರ್ಮಾಣದಲ್ಲಿ, ಕೆಲವು ರಾಸಾಯನಿಕ ಬದಲಾವಣೆಗಳೊಂದಿಗೆ ವ್ಯಾಪಕವಾಗಿ ಪ್ಲಾಸ್ಟಿಕ್‌ನ್ನು ಬಳಸಬಹುದು.

ಪ್ರಾಕೃತಿಕ ಸೌಂದರ್ಯದ ಉಸಿರಾಗಿರುವ ವನ್ಯಜೀವಿ ಸಂಪತ್ತಿನ ಭವಿಷ್ಯ ಇಂದು ಕವಲುಹಾದಿಯಲ್ಲಿದೆ. ಒಂದು ಬದಿಯಲ್ಲಿ, ಜಾಗತಿಕ ಮಟ್ಟದಲ್ಲಿ ದೇಶದ ಸಾಂಸ್ಕöÈತಿಕ ಸಂಪತ್ತು ಹಾಗೂ ಪ್ರಕೃತಿ ಸಂಪತ್ತನ್ನು ಮುಂದಿನ ತಲೆಮಾರುಗಳಿಗೆ ಉಳಿಸಬೇಕು, ಎಂದು ಹಪಹಪಿಸುವ ಮಂದಿ ಮತ್ತು ಅವರೊಂದಿಗೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕೈಜೋಡಿಸಿರುವ ಪ್ರಕೃತಿಪ್ರೇಮಿಗಳು; ಮತ್ತೊಂದು ಬದಿಯಲ್ಲಿ ವನ್ಯಸಂಪತ್ತು ಇರುವುದೇ ಹಣಗಳಿಸಲಿಕ್ಕಾಗಿ ಎಂದು ಭಾವಿಸುವ ಕಳ್ಳಬೇಟೆ, ಮರ ವ್ಯಾಪಾರ, ಗಣಿಗಾರಿಕೆ, ಇಕೋ-ಟೂರಿಸಂ ಮುಂತಾದ ದಂಧೆ ನಡೆಸುವ ಹಾಗೂ ಅದರಲ್ಲಿಯೇ ಅಭಿವೃದ್ಧಿ ಇದೆ, ಇವೆಲ್ಲ ಜನರ ಉನ್ನತಿಗಾಗಿ ಮಾಡುತ್ತಿರುವ ಹೋರಾಟ ಎಂಬ ಭ್ರಮೆ ಹುಟ್ಟಿಸುವ ಮಂದಿ, ಅಲ್ಲದೆ ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ಅವರೊಂದಿಗೆ ಬೆನ್ನೆಲುಬಾಗಿ ನಿಂತಿರುವ ಸ್ವಯಂಘೋಷಿತ ಬುದ್ಧಿಜೀವಿಗಳು ಮತ್ತು ಢೋಂಗೀ ಜನಸೇವಕರು. ಇವೆರಡರ ನಡುವೆ ಸಮನ್ವಯದ ಸಮತೋಲನ ಸಾಧ್ಯವಾಗಬೇಕು.

ರೈತರು ಮತ್ತು ಕೃಷಿಕರು ದೇಶದ ಜೀವಾಳಗಳು. ಸರ್ಕಾರ ಮುಖ್ಯವಾಗಿ ಕೃಷಿವಲಯಗಳನ್ನು ಭೂಪರಿವರ್ತನೆ ಮತ್ತು ಮತ್ತಾವುದೇ ವ್ಯಾಪಾರೀ ಚಟುವಟಿಕೆಗಳಿಗೆ ಬಳಸದೆ, ಕಟ್ಟುನಿಟ್ಟಾಗಿ ಸಂರಕ್ಷಿಸಿ ಮತ್ತು ಅಲ್ಲಿ ವಿವಿಧ ಸ್ಥಳೀಯ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡಬೇಕು. ಅಲ್ಲದೆ ಹೆಚ್ಚು ಹೆಚ್ಚು ವಿದ್ಯಾರ್ಥಿಗಳನ್ನು, ಯುವಜನಾಂಗವನ್ನು ಪ್ರಕೃತಿವೀಕ್ಷಣೆ, ಪಕ್ಷಿವೀಕ್ಷಣೆ ಮುಂತಾದ ಹವ್ಯಾಸಗಳಲ್ಲಿ ಅರಿವು ಮೂಡಿಸಿ, ಆ ಚಟುವಟಿಕೆಗಳಲ್ಲಿ ಅವರನ್ನು ತೊಡಗುವಂತೆ ಪ್ರೇರೇಪಿಸಿ, ಪ್ರೋತ್ಸಾಹಿಸಿ, ಅವರು ಪ್ರಕೃತಿ ರಕ್ಷಕರೆಂಬ ಹೆಗ್ಗಳಿಕೆಗೆ ಪಾತ್ರರಾಗಬೇಕು.

ಭೀಮಯ್ಯ

 ಭೀಮಯ್ಯ

ನಲವತ್ತೆöÊದು ವರ್ಷಗಳ ಹಿಂದೆ ನಾನು ನಮ್ಮ ಸಣ್ಣ ಊರಿನಲ್ಲಿ, ನನ್ನ ತಂದೆಯವರ ಕ್ನಿನಿಕ್‌ನಲ್ಲಿಯೇ ಪ್ರಾಕ್ಟಿಸ್ ಶುರು ಮಾಡಿದೆ. ಸುತ್ತಮುತ್ತಲ ಸುಮಾರು ಇಪ್ಪತ್ತು-ಇಪ್ಪತ್ತೆöÊದು ಗ್ರಾಮಗಳಿಂದ ರೋಗಿಗಳು ನಮ್ಮಲ್ಲಿಗೆ ಚಿಕಿತ್ಸೆಗೆ ಬರುತ್ತಿದ್ದರು. ಆ ಕಾಲದಲ್ಲಿ ರಸ್ತೆಯಲ್ಲಿ ನಡೆದಾಡುವ ಸರಿಸುಮಾರು ಎಲ್ಲರೂ ಪರಿಚಯವಿದ್ದರು. ನನ್ನ ತಂದೆ ಹಳೆಯ ತಲೆಮಾರಿನ ಡಾಕ್ಟರು. ಒಬ್ಬೊಬ್ಬ ರೋಗಿಯನ್ನೂ ಮಲಗಿಸಿ, ಒಂದು ಸ್ಟೂಲಿನ ಮೇಲೆ ಕುಳಿತು ಏನಿಲ್ಲವೆಂದರೂ ಇಪ್ಪತ್ತು-ಇಪ್ಪತ್ತೆöÊದು ನಿಮಿಷ ಪರೀಕ್ಷೆ ಮಾಡುತ್ತಿದ್ದರು; ಎಲ್ಲರ ಯೋಗಕ್ಷೇಮವನ್ನೂ ಕೂಲಂಕಶವಾಗಿ ವಿಚಾರಿಸುತ್ತಿದ್ದರು. ಮೃದುವಾಗಿ ಮಾತನಾಡುತ್ತಿದ್ದ ರೀತಿ, ಸೇವಾ ಮನೋಭಾವ ಇವೆಲ್ಲದರಿಂದ ಅವರು ಜನಾನುರಾಗಿಯಾಗಿದ್ದರು.

ಈಗ ಕಾಲ ಸರಿದಿದೆ; ಊರು ನಗರವಾಗಿದೆ; ಜನಸಂಖ್ಯೆ ಹೆಚ್ಚಾಗಿದೆ; ಸಂಬAಧಗಳು ಸಡಿಲವಾಗಿವೆ; ಮೌಲ್ಯಗಳು ಬದಲಾಗಿವೆ; ಎಲ್ಲರ ಜೇಬಿನಲ್ಲೂ ಈವತ್ತು ಹಣವಿದೆ; ಆದರೆ ಯಾರಿಗೂ ಹೆಚ್ಚು ಮಾತನಾಡಲು ಸಮಯವಿಲ್ಲ!

ಎರಡು ತಿಂಗಳ ಹಿಂದೆ ನಡೆದ ಘಟನೆ. ಕರೋನಾ ರೋಗ ದೂರವಾಗುತ್ತಿರುವ ಲಕ್ಷಣಗಳು ಎಲ್ಲರನ್ನೂ ಧೈರ್ಯದಿಂದ ಓಡಾಡುವಂತೆ ಮಾಡಿತ್ತು. ಆವತ್ತು ನಮ್ಮೂರಿನಲ್ಲಿ ಸಂತೆಯ ದಿನ, ಮಧ್ಯಾಹ್ನ ಸುಮಾರು ಎರಡು ಗಂಟೆಯ ಸಮಯ. ನನಗೂ ಹಗಲು ಹೊತ್ತಿನ ರೋಗಿಗಳು ಮುಗಿದು, ಊಟಕ್ಕೆ ಮನೆಗೆ ಹೊರಡಲು ಅಣಿಯಾಗುತ್ತಿದ್ದೆ. ಜನಜಂಗುಳಿ ಕಡಿಮೆಯಾಗಿತ್ತು.

ಅಷ್ಟರಲ್ಲಿ ನನ್ನ ದೃಷ್ಟಿ ರಸ್ತೆಯಲ್ಲಿ ನಡೆದು ಬರುತ್ತಿದ್ದ ಒಬ್ಬ ವ್ಯಕ್ತಿಯ ಮೇಲೆ ನೆಟ್ಟಿತು. ಎಲ್ಲಿಯೋ ಕಂಡ ಹಾಗಿದೆ ಎಂದುಕೊಳ್ಳುತ್ತಿದ್ದAತೆಯೇ ಆ ವ್ಯಕ್ತಿ ನೇರವಾಗಿ ನನ್ನತ್ತಲೇ ಬಂದ.

ಭೀಮಯ್ಯ!

ಈತ ಪಕ್ಕದ ಬೆಳ್ಳುಮಾಡು ಗ್ರಾಮದವನು. ಯಾವುದೇ ಸಮಸ್ಯೆಯಿದ್ದರೂ ಇಡೀ ಸಂಸಾರ ನನ್ನಲ್ಲಿಗೇ ಬರುತ್ತಿತ್ತು. ನಲವತ್ತು ವರ್ಷಗಳ ಹಿಂದೆ, ಭೀಮಯ್ಯನದು ಟಿಪಿಕಲ್ ನಡಿಗೆ. ಎಡದ ಹೆಗಲ ಮೇಲೆ ಸಣ್ಣ ಮಗನನ್ನು ಕೂರಿಸಿಕೊಂಡು ಮತ್ತೊಬ್ಬ ಮಗನನ್ನು ಬಲದ ಕೈಯ್ಯಲ್ಲಿ ಹಿಡಿದು ನಡೆಸಿಕೊಂಡು ಬರುತ್ತಿದ್ದ. ಜೊತೆಗೆ ಹೆಂಡತಿ, ಒಬ್ಬ ಮಗಳು ಮತ್ತು ಚಿಗುರು ಮೀಸೆಯ ಮತ್ತೊಬ್ಬ ಮಗ.

ಅವನನ್ನು ನೋಡಿಯೇ ಬಹಳ ವರ್ಷಗಳಾಗಿದ್ದವು. ಈಗ ಭೀಮಯ್ಯನಿಗೂ ಎಂಭತ್ತು ವಯಸ್ಸು ಮೀರಿದೆ. ಅದೇಕೋ ಬಹಳ ಕೃಶನಾಗಿದ್ದ. ಬಟ್ಟೆಯೂ ಅಲ್ಲಲ್ಲಿ ಹರಿದು ಹೋಗಿದ್ದವು. ಏನಾಯಿತು, ಇವನಿಗೆ? ನಾನೇ ಹೋಗಿ ಅವನ ಕೈಹಿಡಿದು, ಒಳಗಡೆ ಕರೆತಂದೆ.

‘ಏನು ಭೀಮಯ್ಯನವರೆ, ಯಾಕೆ ಇಳಿದುಹೋಗಿದ್ದೀರಿ? ಏನು ಬಂದಿರಿ?’

‘ಏನಿಲ್ಲ ಸ್ವಾಮಿ, ಊಟ ಮಾಡಲು ಸ್ವಲ್ಪ ದುಡ್ಡು ಬೇಕಿತ್ತು!’ ಎಂದ. ಅವನ ಧ್ವನಿ ನಡುಗುತ್ತಿತ್ತು. ತುಟಿಗಳು ಅದುರುತ್ತಿದ್ದವು. ಕೇಳಲು ಬಹಳ ಸಂಕೋಚ ಪಡುತ್ತಿದ್ದ.

ನನಗೆ ಒಂದು ಕ್ಷಣ ದಂಗು ಬಡಿದಂತಾಯ್ತು. ಒಂದು ಕಾಲದಲ್ಲಿ ನನಗೆ ಅನ್ನ ಕೊಡುತ್ತಿದ್ದ ಕೈಗಳು ಈವತ್ತು ನನ್ನನ್ನೇ ಭಿಕ್ಷೆ ಬೇಡುತ್ತಿವೆ! ಇವನಿಗೆ ಅಂತಹ ಪರಿಸ್ಥಿತಿ ಬರಲು ಕಾರಣವೇನು? ಬೆಂಚಿನ ಮೇಲೆ ಕೂರಿಸಿಕೊಂಡು ನಾನೂ ಪಕ್ಕದಲ್ಲಿ ಕುಳಿತೆ.

ಅವನ ಹೆಂಡತಿ ಮತ್ತು ದೊಡ್ಡ ಮಗ ತೀರಿಕೊಂಡಿದ್ದರು. ಮಗಳು ಗಂಡನ ಮನೆ ಸೇರಿದ್ದಳು. ಸಣ್ಣ ಮಗ ಮದುವೆಯಾಗಿ ಮೈಸೂರಿನಲ್ಲಿ ನೆಲೆಸಿದ್ದ. ಎರಡನೆಯ ಮಗ, ಈ ಭೀಮಯ್ಯನ ಮನೆಯಲ್ಲಿಯೇ ಇದ್ದಾನೆ. ಆತ ಕುಡುಕ. ವಯಸ್ಸಾದ ತಂದೆಯನ್ನು ಹೊಡೆದು ಬಡಿದು, ಮನೆಯಿಂದ ಹೊರಗೆ ಅಟ್ಟಿದ್ದಾನೆ.

ನನ್ನ ಮನಸ್ಸಿಗೆ ಬಹಳ ಸಂಕಟವಾಯಿತು. ಹೇಗಿದ್ದವ ಹೇಗಾದ! ಈಗ ನಾನು ಅವನಿಗೆ ಈ ಹೊತ್ತಿನ ಊಟಕ್ಕೆ ಸ್ವಲ್ಪ ಹಣ ಕೊಟ್ಟರೆ ಅವನ ಕಷ್ಟ ಮುಗಿಯುವುದೆ? ಮುಂದಿನ ಗತಿ ಏನು? ತಕ್ಷಣ ಒಂದು ನಿರ್ಧಾರಕ್ಕೆ ಬಂದೆ. ಭೀಮಯ್ಯನನ್ನು ಎಬ್ಬಿಸಿಕೊಂಡು ಕಾರಿನಲ್ಲಿ ಕೂರಿಸಿಕೊಂಡೆ.

ನೇರವಾಗಿ ನನ್ನ ಮನೆಗೆ ಹೋದೆ. ಬೀರುವಿನಿಂದ ಒಂದೆರಡು ಪ್ಯಾಂಟು, ಶರಟು, ಟೀ ಶರಟುಗಳನ್ನು ಒಂದು ಕೈಚೀಲದಲ್ಲಿ ತುರುಕಿಕೊಂಡು, ಬಿಟ್ಟ ಬಾಣದ ಹಾಗೆ ಹೊರಬಂದೆ. ಅಲ್ಲಿಂದ ಬೆಳ್ಳುಮಾಡು ಗ್ರಾಮಕ್ಕೆ ಹೋದೆವು. ಭೀಮಯ್ಯನೇ ಮನೆ ತೋರಿಸಿದ. ಅವನನ್ನು ಕಾರಿನಲ್ಲಿಯೇ ಕುಳ್ಳಿರಿಸಿ ನಾನು ಅವನ ಮನೆಗೆ ಹೋದೆ.

ಒಳ ನುಗ್ಗಿದವನೇ ಅಲ್ಲಿಯೇ ಇದ್ದ ಒಂದು ಕುರ್ಚಿಯನ್ನು ಎಳೆದುಕೊಂಡು ಕುಳಿತೆ. ಅದೊಂದು ಒಂದೇ ಕೋಣೆಯ ಮನೆ. ಒಂದು ಮೂಲೆಯಲ್ಲಿ ಅಡುಗೆ ಒಲೆ-ಪಾತ್ರೆಗಳು, ಇನ್ನೊಂದು ಮೂಲೆಯಲ್ಲಿ ಮಲಗಲು ಮಂಚ, ಮತ್ತೊಂದು ಮೂಲೆಯಲ್ಲಿ ಟೇಬಲ್ಲು ಕುರ್ಚಿ, ಹಿತ್ತಲ ಕಡೆಗೊಂದು ಬಾಗಿಲು! ಭೀಮಯ್ಯನ ಸೊಸೆ ಮನೆಯನ್ನು ಬಹಳ ಚೊಕ್ಕಟವಾಗಿ ಇಟ್ಟುಕೊಂಡಿದ್ದಳು. ಅಲ್ಲಿಯೇ ಇದ್ದ ಅವಳು ಇದ್ದಕ್ಕಿದ್ದಂತೆ ಒಳನುಗ್ಗಿದ ನನ್ನನ್ನು ಕಂಡು ಗಾಬರಿಯಾದರೂ, ತಕ್ಷಣದಲ್ಲಿ ನನ್ನನ್ನು ಗುರುತಿಸಿದಳು.

‘ಏನು ಸ್ವಾಮಿ, ಡಾಕ್ಟರೆ? ಏನಾಯಿತು?’ ಎಂದು ಆತಂಕದಿAದ ಕೇಳಿದಳು.

‘ನಿನ್ನ ಗಂಡ ಎಲ್ಲಿ ತಾಯಿ? ಅವನ ಹೆಸರೇನು? ಈವತ್ತು ಸಂತೆಗೆ ಹೋಗಿದ್ದಾನೇನು? ನಿನ್ನ ಮಾವ ಭೀಮಯ್ಯ ಎಲ್ಲಿ, ಕಾಣುತ್ತಿಲ್ಲ?’, ಎಂದು ಒಂದಷ್ಟು ಪ್ರಶ್ನೆಗಳನ್ನು ಕೇಳಿದೆ.

‘ಗಂಡನ ಹೆಸರು ಸುರೇಶ ಅಂತ ಸ್ವಾಮಿ. ಕುಡಿದು ಕುಡಿದು, ಕೆಲಸಕ್ಕೆ ಹೋಗಿಯೇ ವಾರ ಆಯ್ತು. ನಾನೂ ಸಣ್ಣ ಮಗುವನ್ನು ನೋಡಿಕೊಂಡು ಮನೆಯಲ್ಲಿಯೇ ಇದ್ದೇನೆ. ಇನ್ನು ಸಂತೆಗೆ ಹೋಗಿ ಮಾಡುವುದೇನು? ಅವನು ಇಲ್ಲಿಯೇ ಹೊರಗೆಲ್ಲಿಯೋ ಇದ್ದಾನೆ. ಮಾವನಿಗೂ ತುಂಬ ಹೊಡೆದುಬಿಟ್ಟಿದ್ದಾನೆ, ಅವರು ಮನೆ ಬಿಟ್ಟು ಒಂದು ತಿಂಗಳಾಯಿತು. ಎಲ್ಲಿ ಹೋದರೆಂದೇ ಗೊತ್ತಿಲ್ಲ’, ಎಂದು ಕಣ್ಣು ಒರೆಸಿಕೊಂಡಳು.

ನಾನು ಹೋಗಿ ಕಾರಿನಲ್ಲಿದ್ದ ಭೀಮಯ್ಯನನ್ನು ಮನೆಯೊಳಗೆ ಕರೆತಂದೆ. ಅಲ್ಲಿಯೇ ಇದ್ದ ಮೊಮ್ಮಗು ಓಡಿ ಬಂದು ತಾತ ತಾತ ಎಂದು ಅಜ್ಜನಿಗೆ ಅಂಟಿಕೊAಡಿತು. ‘ನೋಡಮ್ಮ, ನೋಡು ಹೇಗಾಗಿದ್ದಾರೆ! ಮೊದಲು ಮಾವನಿಗೆ ತಿನ್ನಲು ಊಟ ಕೊಡು’, ಎಂದು ಒತ್ತಾಯಿಸಿದೆ. ತಟ್ಟೆಯಲ್ಲಿ ಉಳಿದಿದ್ದ ಅನ್ನ-ಸಾರು ಬಡಿಸಿಕೊಂಡು ಮಾವನಿಗೆ ಕೊಟ್ಟಳು. ಭೀಮಯ್ಯ ಅಲ್ಲಿಯೇ ಕುಳಿತು, ಮೊಮ್ಮಗುವಿಗೂ ತಿನ್ನಿಸುತ್ತ ತಾನೂ ತಿನ್ನತೊಡಗಿದ. ಆಗಾಗ ನನ್ನತ್ತ ದೃಷ್ಟಿ ಬೀರುತ್ತಿದ್ದ ಆತನ ಕಣ್ಣುಗಳಲ್ಲಿ ಆವಾಗ ಯಾವ ಭಾವನೆ ಇತ್ತೆಂದು ನಾನು ಹೇಳಲಾರೆ.

ಅಷ್ಟರಲ್ಲಿ ಸುರೇಶನೂ ಬಂದ. ಅವನೂ ಕೂಡ ರೋಗಿಯಂತೆ ಸೊರಗಿಹೋಗಿದ್ದ. ಹಣವಿಲ್ಲದ್ದರಿಂದ, ಆವತ್ತು ಕುಡಿದಿರಲಿಲ್ಲ. ನನ್ನನ್ನು ಕಂಡವನೇ ಕೈ ಮುಗಿದು, ಪ್ರಶ್ನಾರ್ಥಕವಾಗಿ ನನ್ನತ್ತ ನೋಡಿದ.

‘ಸುರೇಶ, ನೋಡು! ನಿನ್ನ ಅಪ್ಪನನ್ನು ಹುಡುಕಿ ಕರೆದುಕೊಂಡು ಬಂದಿದ್ದೇನೆ’.

ಅಪ್ಪನನ್ನು ನೋಡಿದೊಡನೆ ಸುರೇಶ ತಲೆ ತಗ್ಗಿಸಿ, ಹೆಂಡತಿಯ ಕಡೆಗೆ ನೋಡಿದ.

‘ಇಲ್ಲಿ ಬಾ ಸುರೇಶ’, ಎಂದು ಅವನನ್ನು ಹಿಡಿದು ಪಕ್ಕದಲ್ಲಿ ಕುಳ್ಳಿರಿಸಿಕೊಂಡೆ. ಅವನ ಎರಡೂ ಕೈಗಳನ್ನು ಹಿಡಿದುಕೊಂಡು, ‘ಸುರೇಶ, ಲೋಕದಲ್ಲಿ ಹೆಂಡ ಕುಡಿಯದವರು ಯಾರಿದ್ದಾರೆ ಹೇಳು? ಎಲ್ಲರೂ ಕುಡಿಯುತ್ತಾರೆ. ಆದರೆ ಅದಕ್ಕೊಂದು ಲಿಮಿಟ್ಟಿರಬೇಕು, ಅಲ್ಲವೆ? ಕುಡಿದ ಅಮಲಿನಲ್ಲಿ ಹೆತ್ತ ಅಪ್ಪನನ್ನೇ ಮನೆಯಿಂದ ಓಡಿಸಿದೆಯಲ್ಲ! ಇದು ನಿನಗೆ ಸರಿಯೇ? ನಿನ್ನ ತಂದೆ ತಾಯಿ ಚಿಕ್ಕವರಾಗಿದ್ದಾಗ ನಿಮ್ಮನ್ನೆಲ್ಲ ಎಷ್ಟು ಚೆನ್ನಾಗಿ ಸಾಕಿದ್ದಾರೆ ಅಂತ ನನಗೆ ಗೊತ್ತು! ನಾಳೆ ನಿನಗೂ ವಯಸ್ಸಾದಾಗ, ನಿನ್ನ ಮಕ್ಕಳು ನಿನ್ನನ್ನು ಹೀಗೆ ನಡೆಸಿಕೊಂಡರೆ ನಿನಗೆ ಸರಿ ಅನ್ನಿಸುತ್ತದೆಯೆ? ಇನ್ನು ಹೀಗೆಲ್ಲ ಮಾಡಬೇಡ. ತಂದೆಯನ್ನು ಚೆನ್ನಾಗಿ ಸಾಕು. ಹಗಲು ಹೊತ್ತಿನಲ್ಲಿ ಭೀಮಯ್ಯ ಮಗುವನ್ನು ನೋಡಿಕೊಂಡಿದ್ದರೆ, ನಿನ್ನ ಹೆಂಡತಿಯೂ ನಿನ್ನೊಂದಿಗೆ ಕೆಲಸಕ್ಕೆ ಹೋಗಬಹುದು, ಅಲ್ಲವೆ’.

ಅವನನ್ನು ಎಬ್ಬಿಸಿ, ಅಲ್ಲಿಯೇ ಇದ್ದ ದೇವರ ¥s಼ೆÇÃಟೋ ಮುಂದೆ ನಿಲ್ಲಿಸಿ, ‘ಇನ್ನು ಮುಂದೆ ಹೀಗಾಗುವುದಿಲ್ಲ ಎಂದು ದೇವರ ಮುಂದೆ ಪ್ರಮಾಣ ಮಾಡು’ ಎಂದು ಆಗ್ರಹಿಸಿದೆ. ಈ ವಿಚಾರದಲ್ಲಿ ಸುರೇಶನೂ ಬಹಳ ನೊಂದಿದ್ದಾನೆAದು ಅನ್ನಿಸಿತು. ಅವನೊಂದಿಗೆ, ಅವನ ಹೆಂಡತಿಯೂ ಬಂದು ಕೈ ಮುಗಿದು ನಿಂತಳು.

ಹೊರಡುವಾಗ ಮಗುವಿನ ಕೈಯ್ಯಲ್ಲಿ ನೂರು ರೂಪಾಯಿಯನ್ನಿಟ್ಟು ಅಜ್ಜ, ಅಪ್ಪ, ಅಮ್ಮನನ್ನು ಚೆನ್ನಾಗಿ ನೋಡಿಕೋ ಎಂದು ಹೇಳಿ ಮನೆಯತ್ತ ಕಾರು ಚಲಾಯಿಸಿದೆ. ಮನಸ್ಸಿನಲ್ಲಿ ಸಣ್ಣದೊಂದು ಸತ್ಕಾರ್ಯ ಮಾಡಿದ ತೃಪ್ತಿ ಇತ್ತು. ಜೀವನವನ್ನು ಸಂಭ್ರಮಿಸಲು ಇಂತಹ ಸಣ್ಣ ಕಾರಣಗಳೇ ಸಾಕಲ್ಲವೆ?

_ ಡಾ. ಎಸ್. ವಿ. ನರಸಿಂಹನ್. ವಿರಾಜಪೇಟೆ. ೯೪೮೦೭೩೦೮೮೪

೧೭ ¥s಼Éಬ್ರವರಿ ೨೦೨೨

ಬೀಗವಿಲ್ಲದ ಮನೆಗಳು

ಬೀಗವಿಲ್ಲದ ಮನೆಗಳು

ರಜ ಬಂತೆAದರೆ, ನನಗೆ ನನ್ನ ಬಾಲ್ಯದ ನೆನಪುಗಳು ಕಾಡುತ್ತವೆ. ಬೇಸಿಗೆ ರಜೆಯಲ್ಲಿ ಮೊಮ್ಮಕ್ಕಳೆಲ್ಲ ಬೇರೆ ಬೇರೆ ಊರುಗಳಿಂದ ಚಾಮರಾಜನಗರದ ನಮ್ಮ ಅಜ್ಜನ ಮನೆಗೆ ಹೋಗುತ್ತಿದ್ದೆವು. ಎಲ್ಲರೂ ಸೇರಿದೆವೆಂದರೆ, ಅದೊಂದು ದೊಡ್ಡ ಸಂಭ್ರಮದ ಸಂತೆ! ರಜಾ ಮುಗಿಯುವ ವೇಳೆಗೆ, ಸರಿಯಾಗಿ ಬಿಳಿಗಿರಿರಂಗನ ಬೆಟ್ಟದ ಜಾತ್ರೆಯಾಗುತ್ತಿತ್ತು. ದೊಡ್ಡವರು, ಮಕ್ಕಳು, ಮೊಮ್ಮಕ್ಕಳಾದಿಯಾಗಿ ಎಲ್ಲರೂ ಅಲ್ಲಿಗೆ ಪ್ರಯಾಣ ಮಾಡುತ್ತಿದ್ದೆವು. ಅಲ್ಲಿ ಜಾತ್ರೆ ಮುಗಿದ ನಂತರ ಎಲ್ಲರೂ ಅವರವರ ಊರಿಗೆ ವಾಪಸ್ಸು. ಪುನಃ ಶಾಲಾರಂಭ.

ನಮಗೆ ಶಾಲೆಯಿರುವಾಗ ಅಲ್ಲಿಯ ಸವಿಸ್ತಾರವಾದ ಆಟದ ಮೈದಾನದಲ್ಲಿ ಹಾಕಿ, ಫುಟ್‌ಬಾಲ್, ವಾಲಿಬಾಲ್, ಕಬಡ್ಡಿ ಮುಂತಾದ ಆಟಗಳನ್ನು ಆಡಿಸುತ್ತಿದ್ದರು. ಅವೇನಿದ್ದರೂ ಶಾಲೆಯಲ್ಲಿ ಆಡುವ ಆಟಗಳು. ನಮ್ಮ ಶಾಲೆಗಳಿಗೆ ದಸರಾ, ಕ್ರಿಸ್ಮಸ್ ರಜಗಳಲ್ಲದೆ, ಕೊಡಗಿಗೇ ವಿಶೇಷವಾದ ಮಳೆಗಾಲದ ರಜವಿರುತ್ತಿತ್ತು. ಶಾಲೆ ಬಿಟ್ಟ ಮೇಲೆ ಮತ್ತು ರಜಾ ದಿನಗಳಲ್ಲಿ ವಿವಿಧ ಆಟಗಳಿರುತ್ತಿದ್ದವು. ಬುಗುರಿ, ಚಿಣ್ಣಿ-ದಾಂಡು, ಲಗೋರಿ, ಗೋಲಿ, ಮರಕೋತಿ, ಐಸ್‌ಪೈಸ್ ಮುಂತಾದ ಆಟಗಳು. ಇವುಗಳೆಲ್ಲದರ, ಮಧ್ಯೆ ಒಂದೆರಡು ವಾರಗಳ ಕಾಲ ಗಾಳಿಪಟ ಹಾರಿಸುವ ಸಮಯ!

ಸಂಜೆ ಶಾಲೆ ಬಿಟ್ಟೊಡನೆ ಮನೆಗೆ ಬಂದು ಬಟ್ಟೆ ಬದಲಿಸಿ, ಆಟ ಆಡಲು ಓಡಿದೆವೆಂದರೆ, ಹಿಂದಿರುಗುತ್ತಿದ್ದುದು ಊರಿನ ಬೀದಿಯ ಕಂಬಗಳಲ್ಲಿ ವಿದ್ಯುದ್ದೀಪಗಳು ಹತ್ತಿದಾಗಲೇ! ಇದು ಆಟಗಳ ಪೂರ್ಣವಿರಾಮಕ್ಕೆ ಎಚ್ಚರಿಕೆಯ ಸೈರನ್! ಆಡುತ್ತಿದ್ದ ಆಟಗಳನ್ನು ಅಲ್ಲಿಗಲ್ಲಿಯೇ ನಿಲ್ಲಿಸಿ, ಮನೆಗೆ ದೌಡಾಯಿಸುತ್ತಿದ್ದೆವು. ಕೈಕಾಲು ತೊಳೆದುಕೊಂಡು, ದೇವರ ಸ್ತೋತ್ರಗಳನ್ನು ಹೇಳಿ, ಶಾಲೆಯಲ್ಲಿ ಕೊಟ್ಟ ಹೋಂವರ್ಕ್ ಮಾಡಿ, ಸ್ವಲ್ಪ ಹೊತ್ತು ಓದಿದ ನಂತರ ಊಟ. ರಾತ್ರಿ ಒಂಬತ್ತೂವರೆಗೆ ಮಲಗುವ ಸಮಯ.

ನಾವು ಆಡುತ್ತಿದ್ದ ಆಟಗಳು ಸರದಿಯಂತೆ, ಒಂದಾದ ಮೇಲೊಂದು, ಪ್ರತಿಯೊಂದೂ ಸುಮಾರು ನಾಲ್ಕಾರು ವಾರಗಳ ಸಮಯ ಇರುತ್ತಿದ್ದವು. ಬುಗುರಿ ಆಟವೆಂದರೆ, ಎಲ್ಲರ ಕೈಯ್ಯಲ್ಲೂ ಬುಗುರಿ, ಎಲ್ಲೆಡೆ ಬುಗುರಿಯದ್ದೇ ಆಟಾಟೋಪ! ಆ ಸಮಯದಲ್ಲಿ ಅಂಗಡಿಗಳಲ್ಲಿ ಬರೇ ಬುಗುರಿಗಳನ್ನು ಮಾತ್ರ ಮಾರುತ್ತಿದ್ದರು. ಅಲ್ಲದೆ, ಕತ್ತಿಯಿಂದ ಸೀಬೆ ಮರದ ತುಂಡನ್ನು ಹೆರೆದು, ಅದಕ್ಕೊಂದು ಮೊಳೆ ಹೊಡೆದು, ನಾವೇ ಬುಗುರಿ ಮಾಡಿಕೊಳ್ಳುತ್ತಿದ್ದೆವು. ಅದಕ್ಕೆ ಬೂತಾಳೆ ನಾರಿನಿಂದ ಹೊಸೆದ ದಾರ! ಅಂಗಡಿಯಿAದ ಕೊಂಡುಕೊAಡ ಬುಗುರಿಗಳು ಎರಡು ದಿನ ನೆಲದ ಮೇಲೆ ಹೊರಳಾಡಿದರೆ, ಅವುಗಳ ಬಣ್ಣ ಮಣ್ಣುಪಾಲು. ಅವುಗಳ ಆಯಸ್ಸೂ ಕಡಿಮೆಯೇ; ಸೀಬೆ ಮರದ ಬುಗುರಿಯಿಂದ ಸರಿಯಾಗಿ ಗುನ್ನಾ ಹೊಡೆದರೆ, ಅವು ಅಲ್ಲೇ ಎರಡು ಪಾಲು!

ಬುಗುರಿಯಾಟದ ಸೀಸನ್ ಮುಗಿದ ಮೇಲೆ, ಅದು ತನ್ನಂತಾನೇ ಗೋಲಿ ಆಟಕ್ಕೆ ತಿರುಗುತಿತ್ತು. ಅಲ್ಲಿಂದ ಮುಂದೆ, ಎಲ್ಲರ ಜೇಬಿನಲ್ಲಿಯೂ ಬಣ್ಣಬಣ್ಣದ ಗೋಲಿಗಳು! ಕೆಲವರಿಗೆ ಕಾಡಿನಲ್ಲಿ ಕೆಳಕ್ಕೆ ಬಿದ್ದ ಚಿಟ್ಟಿ ಮರದ, ಉರುಟಾದ ಬೀಜಗಳೇ ಆಟದ ಗೋಲಿಗಳು! ಈ ಗೋಲಿಗಳು ವಜ್ರದಂತೆ ಗಟ್ಟಿ; ಕಲ್ಲಿನಿಂದ ಚಚ್ಚಿದರೂ ಒಡೆಯುತ್ತಿರಲಿಲ್ಲ.

ನನಗಿನ್ನೂ ಅರ್ಥವಾಗದ ಒಂದು ವಿಚಾರ ಏನೆಂದರೆ, ಆ ಆಟದ ಋತುಮಾನ ಮುಗಿಯಿತು, ಇನ್ನು ಈ ಆಟ ಎಂದು ಎಲ್ಲರಿಗೂ ಹೇಗೆ ಗೊತ್ತಾಗುತ್ತಿತ್ತು? ಪ್ರಾರಂಭ ಎಲ್ಲಿಂದ? ಅದನ್ನು ಮೊದಲು ಶುರು ಮಾಡುತ್ತಿದ್ದವರು ಯಾರು? ಅಥವಾ ಅಂಗಡಿಯವರೇ ‘ಬುಗುರಿಗಳೆಲ್ಲಾ ಮುಗಿದು ಹೋದವು, ಗೋಲಿಗಳಿವೆ, ಕೊಡುತ್ತೇನೆ. ಇನ್ನು ಎಲ್ಲರೂ ಅದನ್ನೇ ಆಡಬೇಕು’ ಎಂದು ಅವರೇ ನಾಂದಿ ಹಾಡುತ್ತಿದ್ದರೆ?

ಗಾಳಿಪಟ ಹಾರಿಸುವ ಸಮಯವಂತೂ ಬಹಳ ಚೇತೋಹಾರಿಯಾದ ಆಟ. ಏಕೆಂದರೆ, ಆ ಕಾಲದಲ್ಲಿ ಅಂಗಡಿಗಳಲ್ಲಿ ಗಾಳಿಪಟಗಳನ್ನು ಮಾರುತ್ತಿರಲಿಲ್ಲ. ಬಣ್ಣದ ಕಾಗದ, ಬಿದಿರು ಕಡ್ಡಿ, ಗೋಂದು, ದಾರವನ್ನು ಬಳಸಿಕೊಂಡು ನಾವೇ ಮನೆಯಲ್ಲಿ ಗಾಳಿಪಟ ತಯಾರು ಮಾಡುತ್ತಿದ್ದೆವು. ಅದಕ್ಕೆ ಸೂತ್ರ, ಬಾಲಂಗೋಚಿ ಕಟ್ಟುವುದೇ ಒಂದು ವಿಶಿಷ್ಟ ಕಲೆ! ಅವು ಸರಿಯಿಲ್ಲವೆಂದರೆ, ಇಡೀ ದಿನದ ನಮ್ಮ ಪ್ರಯತ್ನವೇ ಗೋತಾ ಹೊಡೆದುಬಿಡುತ್ತಿತ್ತು.

ಪ್ರತಿ ವರ್ಷವೂ ಈ ಆಟಗಳ ಪುನರಾವರ್ತನೆಯಾಗುತ್ತಿತ್ತು. ಆದರೆ, ಅವು ಅದೇ ಸರದಿಯಲ್ಲಿ ಬರಬೇಕೆಂದಿರಲಿಲ್ಲ.

ಶಾಲೆಗಾಗಲಿ, ಆಟಕ್ಕಾಗಲೀ ನಾವು ಏನಿದ್ದರೂ ಮನೆಯಿಂದ ಹಿಂಬದಿಯ ಕಾಂಪೌAಡ್ ಮತ್ತು ಅರಳಿಕಟ್ಟೆ ಹಾರಿಯೇ ಹೋಗುತ್ತಿದ್ದೆವು. ಯಾರೂ ಮುಂದಿನ ಬಾಗಿಲು, ಗೇಟು ದಾಟಿ ಹೋದದ್ದೇ ನೆನಪಿಲ್ಲ.

ಚಿಕ್ಕಂದಿನ ಆ ದಿನಗಳಲ್ಲಿ ಮತ್ತೊಂದು ವಿಚಾರ ನನ್ನನ್ನು ಯಾವಾಗಲೂ ಕಾಡುತ್ತದೆ. ನಮ್ಮ ಮನೆಗಳ ಬಾಗಿಲುಗಳನ್ನು ಮುಂಜಾನೆ ತೆಗೆದರೆ, ಅವನ್ನು ಮುಚ್ಚುತ್ತಿದ್ದುದು ರಾತ್ರಿಯೇ! ಇದು ನಮ್ಮ ಮನೆಯಲ್ಲಿ ಮಾತ್ರವಲ್ಲ. ಎಲ್ಲರ ಮನೆಗಳ ಬಾಗಿಲುಗಳೂ ಹಗಲಿನಲ್ಲಿ ತೆರೆದೇ ಇರುತ್ತಿದ್ದವು. ಎಲ್ಲೆಡೆ ಇದೇ ಪದ್ಧತಿ. ಆಟದ ಸಮಯದಲ್ಲಿ, ಅದರಲ್ಲೂ ಕಣ್ಣಮುಚ್ಚಾಲೆ ಆಟ ಆಡುವಾಗ, ಅಕ್ಕಪಕ್ಕದ ಮನೆಗಳಿಗೆ ಯಾವಾಗ ಬೇಕೆಂದಾಗ ನುಗ್ಗಿ, ಎಲ್ಲೆಂದರಲ್ಲಿ ಅವಿತುಕೊಳ್ಳುತ್ತಿದ್ದೆವು.

ನಮ್ಮ ಊರಿನಲ್ಲಿ ಕಳ್ಳತನ ಎಂಬುದು ಬಹಳ ಅಪರೂಪದ ಸಂಗತಿ. ಯಾರಾದರೂ ಕಳ್ಳತನ ಮಾಡಿದರೆ, ಅವನು ಬೇರೆ ಊರಿನವನೇ ಆಗಿರಬೇಕು! ಏಕೆಂದರೆ, ನಮ್ಮೂರಿನ ಸರಿಸುಮಾರು ಎಲ್ಲರೂ ಪರಿಚಿತರೇ! ಒಂದು ಸಾರಿ ಒಬ್ಬ ಕಳ್ಳನನ್ನು ಪೋಲಿಸರು ಹಿಡಿದುಕೊಂಡು ಶಾಲೆಯ ರಸ್ತೆಯಲ್ಲಿ ಹೋಗುತ್ತಿದ್ದರು. ನಾವು ಆಟ-ಪಾಠಗಳನ್ನು ಬಿಟ್ಟು, ಓಡಿ ಹೋಗಿ ಸಾಲಾಗಿ ನಿಂತು ನೋಡಿದ್ದೆವು. ಆ ಕಳ್ಳನ ಎರಡೂ ಕೈಗಳನ್ನು ಮುಂದಕ್ಕೆ ಸೇರಿಸಿ ಕೋಳ ಹಾಕಿ, ಎರಡೂ ಕಡೆ ಅದರ ಸರಪಣಿಯನ್ನು ಇಬ್ಬರು ಪೋಲಿಸರು ಹಿಡಿದುಕೊಂಡು ಹೋಗುವ ದೃಶ್ಯ ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ!

ಮತ್ತೊAದು ಸಾರಿ ನಮ್ಮ ಅಜ್ಜ ಊರಿಗೆ ಬಂದಿದ್ದಾಗ ನಡೆದ ಘಟನೆ. ಅವರು ಸಂಧ್ಯಾವAದನೆಗೆAದು ಒಂದು ಬೆಳ್ಳಿ ಲೋಟವನ್ನು ತೆಗೆದುಕೊಂಡವರು ಅದನ್ನು ಅಂಗಳದಲ್ಲಿಯೇ ಮರೆತು ಬಿಟ್ಟಿದ್ದರು. ಅದು ಅವರಿಗೆ ನೆನಪಾದದ್ದು ಅವರು ಊರಿಗೆ ಹಿಂದಿರುಗಿದ ನಂತರವೇ! ಅಲ್ಲಿಂದ ಅವರು ಪತ್ರ ಬರೆದು ಅದು ನಮಗೆ ತಲುಪುವುದರೊಳಗೆ ಐದಾರು ದಿನಗಳೇ ಕಳೆದಿದ್ದವು. ಹೋಗಿ ನೋಡಿದರೆ, ಆ ಬೆಳ್ಳಿಲೋಟ ತುಳಸೀಕಟ್ಟೆಯ ಕೆಳಗೇ ಇತ್ತು!

ಊರಿನಲ್ಲಿ ಮನೆಗಳ ಬಾಗಿಲುಗಳನ್ನು ಹೊರಗಡೆಯಿಂದ ಬೀಗ ಹಾಕುವ ಪ್ರಮೇಯವಂತೂ ಬಹಳ ಅಪರೂಪ. ಮನೆಯವರೆಲ್ಲ ನೆಂಟರ ಮದುವೆಗೋ, ಯಾರದ್ದಾದರೂ ಸಾವಿಗೋ ಹೋಗುವ ಸಮಯದಲ್ಲಿ ಮಾತ್ರ ಬೀಗ ಹಾಕುತ್ತಿದ್ದೆವು. ಅದಕ್ಕಿಂತ ಮುಖ್ಯವಾಗಿ ನಮ್ಮ ಯಾರ ಮನೆಯಲ್ಲಿಯೂ ಬೀಗವೇ ಇರಲಿಲ್ಲ. ಇಡೀ ವಠಾರದಲ್ಲಿ ಇದ್ದದ್ದು ಒಂದೇ ಬೀಗ! ಅದೂ ಎದುರು ಮನೆಯ ಬಾಷನ ಮನೆಯಲ್ಲಿ. ಅವನ ಅಪ್ಪ ಕೋರ್ಟಿನಲ್ಲಿ ಆಮೀನರಾಗಿದ್ದರು.

ನಮಗೆ ಅವಶ್ಯವಿದ್ದಾಗ ಆ ಬೀಗವನ್ನು ಬಾಷನ ಮನೆಯಿಂದ ತರಬೇಕು. ಈ ಕೆಲಸವನ್ನು ಯಾರು ಮಾಡಬೇಕು ಎಂಬ ವಿಚಾರದಲ್ಲಿ ನನ್ನ ತಮ್ಮನಿಗೂ ನನಗೂ ಪ್ರತಿ ಸಾರಿ ಜಗಳ. ಏಕೆಂದರೆ, ಬಾಷನ ಮನೆಯಲ್ಲಿ ಆ ಬೀಗ ಮತ್ತು ಬೀಗದ ಕೈ ತುಕ್ಕು ಹಿಡಿಯದಿರಲೆಂದು ಅವುಗಳ ತೂತುಗಳಿಗೆ ಸೀಮೆಣ್ಣೆ ಹೊಯ್ದು ಇಡುತ್ತಿದ್ದರು. ಅವನ್ನು ಒಂದು ಬಟ್ಟೆಯಲ್ಲಿ ಸುತ್ತಿ, ಬಚ್ಚಲು ಮನೆಯ ಗೂಡಿನಲ್ಲಿ ಇಟ್ಟಿದ್ದರು. ಅಗತ್ಯವಿದ್ದಾಗ ಅವರನ್ನು ಕೇಳಿ ನಾವೇ ಹೋಗಿ ತೆಗೆದುಕೊಳ್ಳಬೇಕಾಗಿತ್ತು. ಅದನ್ನು ಒಂದು ಬಾರಿ ಮುಟ್ಟಿದರೆ ಸಾಕು, ಕೈಯ್ಯನ್ನು ಎಷ್ಟು ಸೋಪು ಹಾಕಿ ತೊಳೆದುಕೊಂಡರೂ ಎರಡು-ಮೂರು ದಿನಗಳ ಕಾಲ ಅದರ ಸೀಮೆಣ್ಣೆ ವಾಸನೆ ಹೋಗುತ್ತಿರಲಿಲ್ಲ!

ಇವೆಲ್ಲ ಆ ಕಾಲಘಟ್ಟದ ಮಧುರವಾದ ನೆನಪುಗಳು. ಆವಾಗ ಟಿವಿ ಇರಲಿಲ್ಲ; ಲ್ಯಾಪ್‌ಟಾಪ್ ಇರಲಿಲ್ಲ ಅಥವಾ ಮೊಬೈಲ್ ಇರಲಿಲ್ಲ. ನಮಗಿದ್ದುದು ವಿಶಾಲವಾದ ಆಟದ ಮೈದಾನ, ಕಣ್ಮನ ತಣಿಸುವ ಪ್ರಕೃತಿ. ಜೊತೆಗೆ ಚಂದಮಾಮಾ, ಬಾಲಮಿತ್ರ, ಸುಧಾ ಪತ್ರಿಕೆಗಳು; ಪುಟ್ಟಣ್ಣಯ್ಯ, ಭಾರತೀಸುತ, ರಾಜರತ್ನಂ ಮತ್ತಿತರ ಕನ್ನಡ ಪುಸ್ತಕಗಳು! ಇವೆಲ್ಲಕ್ಕೂ ಮೇಲೆ ನಿರಾಡಂಬರ-ನಿಶ್ಕಲ್ಮಷ ಮನಸುಗಳು!

- ಡಾ| ಎಸ್. ವಿ. ನರಸಿಂಹನ್, ವಿರಾಜಪೇಟೆ.

‘ಅವ್ವ’- ನಮ್ಮೆಲ್ಲರ ಅಮ್ಮ- ಪುಸ್ತಕ ವಿಮರ್ಶೆ:

 ‘ಅವ್ವ’- ನಮ್ಮೆಲ್ಲರ ಅಮ್ಮ

ಪುಸ್ತಕ ವಿಮರ್ಶೆ:

‘ಅವ್ವ’: ಕೊಡಗಿನ ಕೂತಂಡ ಪಾರ್ವತಿ ಪೂವಯ್ಯನವರ ಗೌರವಾರ್ಥ, ಅವರ ಜೀವನ ಮತ್ತು ಕೃತಿಗಳ ಕುರಿತಾದ ನುಡಿ ಕಾಣಿಕೆ

ಲೇಖಕಿ: ಡಾ| ನಯನಾ ಕಶ್ಯಪ್

ಪ್ರಕಾಶನ: ವರ್ಡ್ ಸ್ಟೋರ್ ಪಬ್ಲಿಕೇಶನ್ಸ್, ಮಡಿಕೇರಿ. ಪ್ರಕಟಣೆ: ೨೦೨೪

ಶ್ರೀಮತಿ ಕೂತಂಡ ಪಾರ್ವತಿ ಪೂವಯ್ಯನವರು ಇಪ್ಪತ್ತನೆಯ ಶತಮಾನದಲ್ಲಿ ಕೊಡಗು ಕಂಡ ಒಬ್ಬ ಅದ್ವಿತೀಯ ಆದರ್ಶ ಮಹಿಳೆ. ಮೂಲತಃ ನೆರವಂಡ ಕುಟುಂಬದ ನಂಜಪ್ಪ ಮತ್ತು ಶ್ರೀಮತಿ ಮಾಯಮ್ಮ ದಂಪತಿಗಳ ಆರನೆಯ ಕುಡಿ. ತಾಯಿ, ಶ್ರೀ ಹರದಾಸ ಅಪ್ಪಚ್ಚ ಕವಿಯ ಅಪ್ಪನೆರವಂಡ ಕುಟುಂಬಕ್ಕೆ ಸೇರಿದವಳು. ಮಡಿಕೇರಿಯಲ್ಲಿಯೇ ಸಮಗ್ರ ಶಿಕ್ಷಣವನ್ನು ಪಡೆದು ಪಾಲಿಬೆಟ್ಟದ ಕೂತಂಡ ಶ್ರೀ ಪೂವಯ್ಯನವರನ್ನು ವಿವಾಹವಾಗಿ ಅಲ್ಲಿಯೇ ತನ್ನ ಬದುಕನ್ನು ಕಟ್ಟಿಕೊಂಡ ಗೃಹಿಣಿ.

ಒಬ್ಬ ವಿದ್ಯಾವಂತ ಮಹಿಳೆ, ಆ ಕಾಲದಲ್ಲಿ ಪಾಲಿಬೆಟ್ಟದಂತಹ ಸಣ್ಣ ಹಳ್ಳಿಯಲ್ಲಿ ಎಸ್ಟೇಟು ಜೀವನವನ್ನು ನಡೆಸುವುದೆಂದರೆ, ಒಂದು ಹಕ್ಕಿಗೆ ಹಾರಿ ಆಕಾಶವನ್ನು ಮುಟ್ಟಲು ಕಲಿಸಿ, ಆ ಹಕ್ಕಿಯನ್ನು ಒಂದು ಪಂಜರದಲ್ಲಿ ಬಿಟ್ಟಂತೆ! ಆದರೆ ಶ್ರೀಮತಿ ಪಾರ್ವತಿಯವರು ಆ ಸವಾಲನ್ನು ಪರಿಸ್ಥಿತಿಗೆ ತಕ್ಕಂತೆ ಸಮರ್ಥವಾಗಿ ಸದ್ಬಳಸಿಕೊಂಡು ಕುಟುಂಬವನ್ನು ನಿರ್ವಹಿದ ರೀತಿ ಎಲ್ಲರಿಗೂ ಮಾರ್ಗದರ್ಶನ!

‘ಸೂರ್ಯ ಮುಳುಗಿದನೆಂದು ಕಣ್ಣೀರಿಡುತ್ತ ಕುಳಿತರೆ ನಕ್ಷತ್ರಗಳನ್ನು ಕಾಣುವ ಭಾಗ್ಯವೂ ಇಲ್ಲದಾಗುವುದು’, ಎನ್ನುವ ಶ್ರೀಮತಿ ಪಾರ್ವತಿಯವರ ಮಾತುಗಳು ಅಕ್ಷರಶಃ ಅವರಿಗೇ ಅನ್ವಯಿಸುತ್ತದೆ!

ಶ್ರೀಮತಿ ಪಾರ್ವತಿಯವರಿಗೆ ಸಂಗೀತ, ಸಾಹಿತ್ಯ, ಸಂಸ್ಕೃತಿಗಳಲ್ಲಿ ಅಪಾರ ಆಸಕ್ತಿಯಿದ್ದುದರಿಂದ ಅವರಿಗೆ ಚಿತ್ರಕಲೆ, ಹಾಡುಗಾರಿಕೆ, ನೃತ್ಯ, ಬರವಣಿಗೆ, ತೋಟಗಾರಿಕೆ, ಅಡಿಗೆ, ಆತಿಥ್ಯ, ಎಲ್ಲವೂ ಕರಗತವಾಗಿತ್ತು. ಗಾಂಧೀಜಿಯವರಿAದ ಪ್ರೇರಿತರಾದ ಅವರು ಸರಳತೆಯ ಸಾಕಾರವಾಗಿದ್ದರು. ಹೀಗಾಗಿ ಅವರೊಬ್ಬ ಸುಶಿಕ್ಷಿತ, ರಚನಾತ್ಮಕ, ಸುಸಂಸ್ಕೃತ, ಸ್ವತಂತ್ರ ಹಾಗೂ ಎಲ್ಲರ ಮಮತೆಯ ಗೃಹಿಣಿಯಾಗಿ ಬಾಳುವೆ ನಡೆಸಿದರು.

“ನನ್ನ ಈ ಕೈಗಳಿಗೆ ಬರವಣಿಗೆಯಂತಹ ಪವಿತ್ರ ಕಲೆಯಲ್ಲಿ ಅನುಭವವಿಲ್ಲ. ನನ್ನೆಲ್ಲ ಸಣ್ಣ ಸಣ್ಣ ಕತೆಗಳು ಹಾಗೂ ಕವನಗಳು ಬಿಡುವಿನ ವೇಳೆ ನನ್ನ ಮನಃಸಂತೋಷಕ್ಕಾಗಿ ಬರೆದವುಗಳಾಗಿವೆ. ನನ್ನಲ್ಲಿ ಸಮರ್ಥ ಬರವಣಿಗೆಯ ಸಹಜ ಪ್ರವೃತ್ತಿಯನ್ನು ಪೋಷಿಸಿದವರೇ ಕೊಡಗಿನ ಆದಿಕವಿ ಶ್ರೀ ಹರದಾಸ ಅಪ್ಪಚ್ಚಕವಿ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತದೆ.” - ಇದು ಪುಸ್ತಕದ ನಾಯಕಿ ಶ್ರೀಮತಿ ಕೂತಂಡ ಪಾರ್ವತಿ ಪೂವಯ್ಯನವರು ತನ್ನ ಮನದಂತರಾಳದಿAದ ಹೇಳುವ ಮಾತುಗಳು.

ಕೊಡಗಿನ ಸಣ್ಣ ಕತೆ ಮತ್ತು ಕವನಗಳು, ಕೊಡಗಿನ ಕತೆಗಳು, ಭುಗಿಲ ಗೊಂಚಲು (೩೬ ಸಣ್ಣ ಕತೆಗಳೂ ಹಾಗೂ ೩೦ ಕವನಗಳ ಸಂಗ್ರಹ), ಭೈರವಿ, ವಿಧಿವಿಲಾಸ, ಅಲ್ಲದೆ ಅಪರೂಪ, ಕನ್ಯಾಬಲಿ, ಕೃತಘ್ನ ಮುಂತಾದ ಕಾದಂಬರಿಗಳು ಮತ್ತು ಅನೇಕ ಅಪ್ರಕಟಿತ ಬರಹಗಳ ಲೇಖಕಿಯಾದ ಶ್ರೀಮತಿ ಕೂತಂಡ ಪಾರ್ವತಿ ಪೂವಯ್ಯನವರು, ಕೊಡಗಿನ ಗೌರಮ್ಮ, ಬುಟ್ಟಿಯಂಡ ದೇವಕಿಯಮ್ಮ, ಡಾ| ಮುಕ್ಕಾಟಿರ ನೀಲಮ್ಮ ಮುಂತಾದವರ ಸಾಲಿಗೆ ಸೇರುತ್ತಾರೆ.

ಅವರಿಗೆ ಆರು ಮಕ್ಕಳು. ಕೂತಂಡ ಉತ್ತಪ್ಪ (ಜಪ್ಪು) ಕೊಡಗಿನ ಸುಪರಿಚಿತ ಸಮಾಜ ಸೇವಕ ಮತ್ತು ಭಾರತೀಯ ವಿದ್ಯಾ ಭವನದ ರೂವಾರಿ. ಐವರು ಹೆಣ್ಣು ಮಕ್ಕಳು- ಗಂಗಮ್ಮ (ಶಾಂತಿ), ಕಾವೇರಿ (ರಾಧ), ಕಾಮವ್ವ (ಯಶ್), ಮಾಯಮ್ಮ (ಸಾವಿತ್ರಿ) ಮತ್ತು ಅಕ್ಕಮ್ಮ (ಮಧು). ಎಲ್ಲರೂ ಕಾಲೇಜು ಶಿಕ್ಷಣವನ್ನು ಪಡೆದು, ತಾಯಿಯ ಆದರ್ಶಗಳನ್ನು ಮೈಗೂಡಿಸಿಕೊಂಡು ಇಂದು ಸಮಾಜಕ್ಕೆ ಆದರ್ಶಪ್ರಾಯರೇ ಆಗಿದ್ದಾರೆ.

ಪುಸ್ತಕದಲ್ಲಿ ಶ್ರೀಮತಿ ಕೂತಂಡ ಪಾರ್ವತಿ ಪೂವಯ್ಯನವರ ಬಿಡುಗಡೆ, ದಿವ್ಯ ದರ್ಶನ ಮತ್ತು ವಿಚಿತ್ರ ಘಟನೆ _ ಈ ಮೂರು ಕತೆಗಳ ಇಂಗ್ಲೀಷ್ ಭಾವಾನುವಾದವಿದೆ. ಅಲ್ಲದೆ ಶ್ರೀಮತಿ ಪಾರ್ವತಿಯವರ ಬಗ್ಗೆ ಹಿರಿಯರಾದ ಜಿ. ಪಿ. ರಾಜರತ್ನಂ, ಡಾ| ತೀತಿರ ರೇಖಾ ವಸಂತ, ಶ್ರೀ ಉಳ್ಳಿಯಡ ಪೂವಯ್ಯ ಮತ್ತು ಅವರ ಮಕ್ಕಳು ಹಾಗೂ ವಿವಿಧ ಬಂಧುಗಳು ಬರೆದ ಲೇಖನಗಳಿವೆ.

ಪುಸ್ತಕದ ಲೇಖಕಿ ಡಾ| ನಯನಾ ಕಶ್ಯಪ್‌ರವರಾದರೋ ಅಷ್ಟೇ ಸರಳ, ಪ್ರತಿಭಾವಂತ, ಸಹೃದಯ ಗೃಹಿಣಿ. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರು; ಕರ್ನಾಟಕದ ಸುಪ್ರಸಿದ್ಧ ಲೇಖಕಿಯಾದ ಶ್ರೀಮತಿ ವೈದೇಹಿಯವರ ಮಗಳು ಹಾಗೂ ಕುಂದಾಪುರದ ಸುಪರಿಚಿತ ವಕೀಲರೂ, ಕನ್ನಡ ಲೇಖಕರೂ, ಉತ್ತಮ ವಾಗ್ಮಿಯೂ ಆದ ಶ್ರೀ ಎಎಸ್‌ಎನ್ ಹೆಬ್ಬಾರರ ಸೋದರ ಸೊಸೆ; ಬರಹದ ಮತ್ತು ವಾಗ್ಮಯದ ಕಲೆ ಶ್ರೀಮತಿ ನಯನಾರವರಲ್ಲಿ ರಕ್ತಗತವಾಗಿದೆ. ಹಾಗಾಗಿ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಸಮಾನ ಪರಿಣತಿ ಹೊಂದಿದ್ದಾರೆ. ಲೀಲಾಜಾಲವಾಗಿ ಕನ್ನಡದ ಒಳಹೊಕ್ಕು ಅಷ್ಟೇ ಲೀಲಾಜಾಲವಾಗಿ ಇಂಗ್ಲೀಷಿನಿAದ ಹೊರಬಲ್ಲ ಚಾಕಚಕ್ಯತೆ ಅವರಲ್ಲಿದೆ!

ನನ್ನಮ್ಮ ಹೆಚ್ಚು ಓದಿಲ್ಲದೆ ಇರಬಹುದು; ಶ್ರೀಮಂತ ಕುಟುಂಬದ ವಾತಾವರಣದಲ್ಲಿ ಬೆಳೆದಿಲ್ಲದಿರಬಹುದು, ಆದರೆ ಪುಸ್ತಕದ ಪ್ರತಿಯೊಂದು ಪುಟದಲ್ಲಿಯೂ ಅವಳ ನೆನಪು ಕಾಡುತ್ತದೆ. ಮಕ್ಕಳನ್ನು ಸುತ್ತಲೂ ಕೂಡಿಸಿಕೊಂಡು ಕೈತುತ್ತು ಭೋಜನ ಮಾಡಿಸಿದ್ದು; ಸಂಜೆ ದೇವರ ಮುಂದೆ ಸ್ತೋತ್ರಗಳನ್ನೂ, ದೇವರನಾಮಗಳನ್ನೂ ಹಾಡಿಸಿದ್ದು; ದೋಸೆಗೆ ಅಕ್ಕಿ ಕಡೆಯುವಾಗ ಮಗ್ಗಿ, ಕೋಷ್ಟಕಗಳನ್ನು ಹೇಳಿಕೊಟ್ಟಿದ್ದು; ಮನೆಯ ಅಂಗಳದಲ್ಲಿ ಮತ್ತು ಹಿತ್ತಲಲ್ಲಿ ಅಗೆದು, ಹೂ-ತರಕಾರಿ ಗಿಡಗಳನ್ನು ನೆಡಲು ಹೇಳಿಕೊಟ್ಟಿದ್ದು ಎಲ್ಲವೂ ನಮಗೆ ಅರಿವಿಲ್ಲದಂತೆ ನೆನಪಿಗೆ ಬರುತ್ತವೆ!

ಪುಸ್ತಕವನ್ನು ಓದುತ್ತ ಹೋದಂತೆ ನೀವೊಂದು ಆಂಗ್ಲ ಪುಸ್ತಕವನ್ನು ಓದುತ್ತಿರುವಿರೆಂದೇ ನಿಮಗೆ ಅನ್ನಿಸುವುದಿಲ್ಲ. ಅದೊಂದು ಕೊಡಗಿನ ಕಿತ್ತಳೆ ಹಣ್ಣಿನಂತೆ: ಅತಿ ಸುಲಭವಾಗಿ ಸುಲಿದು ಬಿಡಬಹುದಾದ ಇಂಗ್ಲೀಷ್ ಹೊದಿಕೆ, ಅದರೊಳಗೆ ಅತ್ಯಂತ ಮಧುರವಾದ ಕನ್ನಡ ಹೂರಣ!

‘ಅವ್ವ’ ಎಲ್ಲರ ಹೃದಯವನ್ನು ಮುಟ್ಟುವ, ಅತ್ಯಂತ ಮನೋಜ್ಞವಾದ; ಮುಂದಿನ ಪೀಳಿಗೆಗೆ ಸಮರ್ಥ ಮಾರ್ಗದರ್ಶನವನ್ನು ನೀಡಬಲ್ಲ; ಇಂಗ್ಲೀಷ್ ಬಲ್ಲ ಎಲ್ಲ ಕನ್ನಡಿಗರ ಮನೆಯಲ್ಲಿಯೂ ಇರಲೇ ಬೇಕಾದಂತಹ ಪುಸ್ತಕವಾಗಿದೆ.

- ಡಾ| ನರಸಿಂಹನ್, ವಿರಾಜಪೇಟೆ. ೯೪೮೦೭೩೦೮೮೪

ಅಂಟಾರ್ಟಿಕಾದಲ್ಲಿ ಆಕಾಶ ವೀಕ್ಷಣೆ

 ಅಂಟಾರ್ಟಿಕಾದಲ್ಲಿ ಆಕಾಶ ವೀಕ್ಷಣೆ

ಈ ಲೇಖನದಲ್ಲಿ ನಾನು ಅಂಟಾರ್ಟಿಕಾದ ವಿವಿಧ ಸ್ಥಳಗಳಲ್ಲಿ ರಾತ್ರಿ ವೇಳೆ ನಾನು ಮಾಡಿದ ಆಕಾಶ ವೀಕ್ಷಣೆಯ ಅನುಭವಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತೇನೆ.

ಭಾರತ ದೇಶವನ್ನು ಬಿಟ್ಟು ಬೇರೆ ಯಾವುದೇ ರಾಷ್ಟçವನ್ನೂ ನಾನು ಕಂಡವನಲ್ಲ. ಹಾಗೆಂದ ಮಾತ್ರಕ್ಕೆ ನನಗೆ ಹೊರ ದೇಶಗಳನ್ನು ನೋಡುವ ಆಸೆ ಇರಲಿಲ್ಲವೆಂದಲ್ಲ. ಮದುವೆಯಾದ ಹೊಸತರಲ್ಲಿ ಒಂದು ಬಾರಿ ಪುಷ್ಪಾಳೊಡನೆ ಸಿಂಗಾಪುರಕ್ಕೆ ಹೋದದ್ದುಂಟು. ಅದು ಬಿಟ್ಟರೆ, ನನ್ನ ಪಾಸ್‌ಪೋರ್ಟ್ ಪುಟಗಳು ಖಾಲಿ ಖಾಲಿ!

ಹೀಗಿರುವಾಗ ೨೦೧೭ರ ಜುಲೈ ತಿಂಗಳಲ್ಲಿ ಗೋಣಿಕೊಪ್ಪಲಿನಲ್ಲಿ, ನನ್ನಂತೆ ವೈದ್ಯವೃತ್ತಿಯನ್ನು ಮಾಡುತ್ತಿರುವ ನನ್ನ ಮಿತ್ರ ಡಾ| ಕಿರಣ್ ‘ಅಂಟಾರ್ಟಿಕಾಗೆ ಕ್ರೂಸ್‌ನಲ್ಲಿ ಹೋಗುವ ಒಂದು ಅವಕಾಶ ಒದಗಿ ಬಂದಿದೆ, ನನಗೊಬ್ಬ ಜೊತೆಗಾರ ಬೇಕು, ಬರುತ್ತೀಯಾ’ ಎಂದು ಕೇಳಿದ. ತಕ್ಷಣ ಒಪ್ಪಿಬಿಟ್ಟೆ. ಆ ನಂತರದಲ್ಲಿ ಹೊಸ ಪಾಸ್‌ಪೋರ್ಟ್, ವಿಸಾ, ಮುಂತಾದ ತಯಾರಿಗಳು ನಡೆದವು. ಜನವರಿ ೧೯ರಂದು ಇಲ್ಲಿಂದ ಹೊರಟು, ಅರ್ಜೆಂಟೈನಾದ ಬ್ಯೂನಸ್ ಆಯ್ರಿಸ್‌ನಿಂದ ಹಡಗನ್ನು ಹತ್ತಿ ೧೫ ದಿನಗಳ ಕ್ರೂಸ್‌ನಲ್ಲಿ ಐದು ದೇಶಗಳನ್ನು ಮತ್ತು ಒಂದು ಖಂಡವನ್ನೂ ನೋಡಿ ಬಂದೆವು.

ಸಾಧಾರಣವಾಗಿ ಪ್ರಪಂಚದ ಹೆಚ್ಚು ಜನ ಭೂಮಧ್ಯ ರೇಖೆಯ ಉತ್ತರ ಭಾಗದಲ್ಲಿರುವ ದೇಶಗಳಿಗೆ ಅಂದರೆ, ಯೂರೋಪ್, ಅಮೆರಿಕಾ, ರಷ್ಯಾ, ಜಪಾನ್, ಚೈನಾ, ಇಂಡೊನೇಶಿಯಾ ಮತ್ತು ನಮ್ಮ ಸುತ್ತ ಮುತ್ತಲೂ ಇರುವ ನೇಪಾಳ, ಭೂತಾನ್, ಶ್ರೀಲಂಕಾ ಮುಂತಾದ ದೇಶಗಳಿಗೆ, ಪ್ರವಾಸ ಮಾಡುತ್ತಾರೆ. ಭೂಮಧ್ಯ ರೇಖೆಯ ದಕ್ಷಿಣ ಭಾಗದಲ್ಲಿರುವ ಆಫಿû್ರಕಾದ ದಕ್ಷಿಣ ದೇಶಗಳು, ದ. ಅಮೆರಿಕಾ, ಆಸ್ಟೆçÃಲಿಯಾ, ನ್ಯೂಜಿûಲ್ಯಾಂಡ್ ಮೊದಲಾದ ದೇಶಗಳು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುವುದಿಲ್ಲ!

ಭೂಮಧ್ಯ ರೇಖೆಯ ದಕ್ಷಿಣದ ದೇಶಗಳಿಗೆ ನನ್ನದು ಇದೇ ಮೊದಲ ಬಾರಿಗೆ ಪ್ರಯಾಣ! ಹಾಗಾಗಿ ನನ್ನ ನಿರೀಕ್ಷೆಗಳೂ ಬಹಳ ಇದ್ದವು. ಅಲ್ಲಿಯ ಪರಿಸರ, ಜೀವವೈವಿಧ್ಯತೆ, ವಾತಾವರಣ, ವಿವಿಧ ಜನಗಳ ಭಾಷೆ, ಆಚಾರ-ವಿಚಾರಗಳು ಮತ್ತು ಎಲ್ಲಕ್ಕಿಂತ ನನಗೆ ಪ್ರಿಯವಾದ ಇರುಳಿನ ಆಕಾಶ.


ಬ್ಯೂನಸ್ ಆಯ್ರಿಸ್‌ನಿಂದ ಹೊರಟ ನಮ್ಮ ‘ಸೆಲೆಬ್ರಿಟಿ ಇನ್ಫಿನಿಟಿ’ ಹಡಗು ಅರ್ಜೆಂಟೈನಾ, ಉರುವಾಯ್ ಮತ್ತು ಚಿಲಿ ಮಾರ್ಗವಾಗಿ ಜಗತ್ತಿನ ಅತ್ಯಂತ ದಕ್ಷಿಣದ ಪಟ್ಟಣವೆಂದೇ ಹೆಸರಾದ, ಉಶುವಯ್ಯಾ ಎಂಬ ಸ್ಥಳಕ್ಕೆ ತಲುಪಿತು. ಈ ಪಟ್ಟಣದಿಂದಲೇ ಅಂಟಾರ್ಟಿಕಾ ಖಂಡಕ್ಕೆ ಅತಿ ಹತ್ತಿರದ ಮಾರ್ಗ, ಅಂದರೆ ಹಡಗಿನಲ್ಲಿ ೩೦ ಗಂಟೆಗಳ ಪ್ರಯಾಣ.

ಅಂಟಾರ್ಟಿಕಾದಲ್ಲಿ ನಾವು ಕಳೆದದ್ದು ನಾಲ್ಕು ದಿನಗಳು. ಈ ಅವಧಿಯಲ್ಲಿ ನಾವು ಹಗಲು ಹೊತ್ತಿನಲ್ಲಿ ಪ್ಯಾರಡೈಸ್ ಬೇ, ಬ್ರಾಬ್ಯಾಂಟ್ ದ್ವೀಪ, ಡಿಸೆಪ್ಶನ್ ದ್ವೀಪ ಮತ್ತು ಎಲೆ¥s಼ೆಂಟ್ ದ್ವೀಪ ಎಂಬ ನಾಲ್ಕು ಸ್ಥಳಗಳಲ್ಲಿ ಹಡಗಿನಿಂದ ಇಳಿದು ಸುತ್ತಿ ನೋಡಿದೆವು.

ನಮಗೆ, ಅಂದರೆ, ಭೂಮಿಯ ಉತ್ತರ ಗೋಳಾರ್ಧದಲ್ಲಿ ವರ್ಷದ ಡಿಸೆಂಬರ್ ತಿಂಗಳು ಬಂತೆAದರೆ ಚಳಿಗಾಲ ಎಂದರ್ಥ. ಆದರೆ ದಕ್ಷಿಣ ಗೋಳಾರ್ಧದಲ್ಲಿ ಆ ಸಮಯ ಉರಿಬಿಸಿಲಿನ ಬೇಸಗೆ ಕಾಲ. ನಮಗೆ ಬೇಸಗೆ ಕಾಲವಿರುವಾಗ ಅಲ್ಲೆಲ್ಲ ಚಳಿಗಾಲ. ಈ ಪ್ರಕೃತಿಗೋಚರ ಸಂಗತಿ ಭೂಮಿಯಲ್ಲಿ ೩೦ಲಿ ಅಕ್ಷಾಂಶದ ಆಚೆಗೆ ಉತ್ತರ ಅಥವಾ ದಕ್ಷಿಣಕ್ಕೆ ವಾಸವಿರುವ ಜನರಿಗೆ ಸುಲಭವಾಗಿ ಗಮನಕ್ಕೆ ಬರುತ್ತದೆ.

ಬ್ಯೂನಸ್ ಆಯ್ರಿಸ್‌ನಿಂದ ಅಂಟಾರ್ಟಿಕಾದವರೆಗೆ ನಾವು ನೇರವಾಗಿ ದಕ್ಷಿಣದ ಕಡೆಗೆ ಸುಮಾರು ಐದು ಸಾವಿರ ಕಿಲೋಮೀಟರುಗಳನ್ನು ದಾಟಬೇಕು. ಹೀಗೆ ನಿರಂತರ ಪ್ರಯಾಣ ಮಾಡುವಾಗ ವಾತಾವರಣದ ಉಷ್ಣತೆಯಲ್ಲಿ, ಹಗಲು-ರಾತ್ರಿಯ ಅವಧಿ ಇವುಗಳಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಇಡೀ ಹಡಗಿನೊಳಗೆ ಸಂಪೂರ್ಣ ಹವಾ ನಿಯಂತ್ರಣದ ವ್ಯವಸ್ಥೆಯಿದ್ದರೂ, ಹಡಗಿನ ಕದ ತೆರೆದು ಹೊರಗೆ ಬಂದಾಗ ಅದು ಅನುಭವವಾಗುತ್ತದೆ. ಇದರಲ್ಲಿ ನಮಗೆ ಎದ್ದು ಕಾಣುವುದು,

೧. ಉಷ್ಣಾಂಶದಲ್ಲಿ ದಿಢೀರನೆ ಕಂಡುಬರುವ ಇಳಿಮುಖ! ೩೮ಲಿ ದಕ್ಷಿಣ ಅಕ್ಷಾಂಶದ ಬ್ಯೂನಸ್ ಆಯ್ರಿಸ್‌ನಿಂದ ೬೨ಲಿ ದಕ್ಷಿಣ ಅಕ್ಷಾಂಶದ ಅಂಟಾರ್ಟಿಕಾಗೆ ಹೋಗುವುದರಲ್ಲಿ, ಉಷ್ಣಾಂಶ ೩೨ಲಿಅ ನಿಂದ -೯ಲಿಅ ಕ್ಕೆ ಇಳಿಯುತ್ತದೆ! ಪ್ರಯಾಣದ ಶುರುವಿನಲ್ಲಿ ಹಗುರವಾದ ಹತ್ತಿ ಬಟ್ಟೆಯನ್ನು ಉಡುತ್ತಿದ್ದವರು, ಬರಬರುತ್ತ ಉಣ್ಣೆಯ ದಿರಿಸುಗಳನ್ನು ಧರಿಸಬೇಕಾಯಿತು. ಕೊನೆ ಕೊನೆಗೆ ಮೈ ಕೊರೆಯುವ ಚಳಿಯಿಂದಾಗಿ ಥರ್ಮಲ್ಸ್-ಕೈಚೀಲ-ಕಾಲುಚೀಲಗಳೂ ಸಾಲದಾದವು!

೨. ಬೇಸಗೆ ಕಾಲವಾದ್ದರಿಂದ ದಕ್ಷಿಣಾಭಿಮುಖವಾಗಿ ಪ್ರಯಾಣ ಮಾಡುತ್ತಾ ಹೋದಂತೆ, ಹಗಲಿನ ಅವಧಿ ಹೆಚ್ಚುತ್ತಾ, ರಾತ್ರಿಯ ಅವಧಿ ಕಡಿಮೆಯಾಗುತ್ತದೆ. ಇದನ್ನು ನಾನು ಮೊದಲು ಕಂಡದ್ದು ಬ್ಯೂನಸ್ ಆಯ್ರಿಸ್‌ನಲ್ಲಿಯೇ! ರಾತ್ರಿ ಎಂಟೂವರೆ ಗಂಟೆಯಾದರೂ ಇನ್ನೂ ಸಂಜೆಗತ್ತಲೂ ಆವರಿಸಿರಲಿಲ್ಲ. ಇಡೀ ಆಯಸ್ಸು ಕರ್ನಾಟಕದಲ್ಲಿ ಕಳೆದವನಿಗೆ ಇದೊಂದು ವಿಚಿತ್ರವಾದ ಅನುಭವ! ಬರಬರುತ್ತ ರಾತ್ರಿ ಹತ್ತು-ಹನ್ನೊಂದು ಗಂಟೆಯಾದರೂ ಮಟಮಟ ಮಧ್ಯಾಹ್ನದಂತೆ ಬೆಳಕು! ಕೊನೆಗೆ ಅಂಟಾರ್ಟಿಕಾ ತಲಪುವಾಗ ಕತ್ತಲಾಗುತ್ತಿದ್ದುದು ರಾತ್ರಿ ಹನ್ನೊಂದೂಮುಕ್ಕಾಲು ಗಂಟೆಗೆ!

೩. ಇದರೊಂದಿಗೆ ಗಾಳಿಯ ತೀವ್ರತೆ! ಸುಮಾರು ೧೦೦ರಿಂದ ೧೫೦ ಕಿಲೋಮೀಟರು ವೇಗದಲ್ಲಿ ಬೀಸುವ ಗಾಳಿಯಿಂದಾಗಿ ಎಷ್ಟೋ ವೇಳೆ ಹಡಗಿನಿಂದ ಹೊರಗೆ ಬರಲೂ ಸಾಧ್ಯವಾಗದ ಪರಿಸ್ಥಿತಿಯುಂಟಾಗುತ್ತಿತ್ತು! ಈ ಗಾಳಿ ಯಾವಾಗಲೂ ಪಶ್ಚಿಮ ದಿಕ್ಕಿನಿಂದ ಪೂರ್ವಕ್ಕೆ ಬೀಸುವುದರಿಂದ, ನಮಗೆ ಸಮುದ್ರದಲ್ಲಿ ಏನನ್ನಾದರೂ ನೋಡಲೇ ಬೇಕೆನಿಸಿದರೆ, ಹಡಗಿನ ಮತ್ತೊಂದು ಬದಿಯ ಡೆಕ್‌ನಲ್ಲಿ ನಿಲ್ಲುವುದು ಸ್ವಲ್ಪ ವಾಸಿ ಎನಿಸುತ್ತಿತ್ತು! ಅಟ್ಲಾಂಟಿಕ್ ಸಾಗರ ಬಹಳ ಒರಟು. ಬ್ಯೂನಸ್ ಆಯ್ರಿಸ್‌ನಿಂದ ಹೊರಟ ನಮ್ಮ ಹಡಗು ಉಶುವಯ್ಯ ತಲಪುವವರೆಗೂ, ದಕ್ಷಿಣ ಅಮೆರಿಕಾದ ಪೂರ್ವ ತೀರದಲ್ಲಿಯೇ, ಅಟ್ಲಾಂಟಿಕ್ ಸಾಗರದಲ್ಲಿ ಸಾಗಿದ್ದರಿಂದ ಆ ಬಿರುಸು ನಮಗೆ ತಟ್ಟಲಿಲ್ಲ. ಅಲ್ಲಿಂದ ಮುಂದಕ್ಕೆ ತೆರೆದ ಸಾಗರಗಳನ್ನು ಎದುರಿಸಬೇಕಾಗುತ್ತದೆ: ಪಶ್ಚಿಮದಲ್ಲಿ ಪೆಸಿಫಿûಕ್ ಸಾಗರ ಮತ್ತು ಪೂರ್ವಕ್ಕೆ ಅಟ್ಲಾಂಟಿಕ್ ಸಾಗರ! ಪೆಸಿಫಿûಕ್ ಸಾಗರ ಹೆಸರಿಗೆ ತಕ್ಕಂತೆ ‘ಶಾಂತ’ ಸಾಗರ! ಅಂಟಾರ್ಟಿಕಾ ತಲಪುವವರೆಗೂ ಸಾಧ್ಯವಾದಷ್ಟು ಆ ನೀರಿನಲ್ಲಿಯೇ ಚಲಿಸಿದ್ದರಿಂದ ಯಾರಿಗೂ ಪ್ರಯಾಣದ ಅರಿವೇ ಆಗಲಿಲ್ಲ. ಅಂಟಾರ್ಟಿಕಾದಲ್ಲಿ ನಮ್ಮ ಪ್ರಯಾಣದ ಮಾರ್ಗ

೪. ಅಂಟಾರ್ಟಿಕಾ ಪ್ರಯಾಣದಲ್ಲಿ ನಾವು ನಾಲ್ಕೆöÊದು ರೀತಿಯ ಹವಾಮಾನದ ವೈಪರೀತ್ಯಗಳನ್ನು ಎದುರಿಸುತ್ತೇವೆ. ಮೊದಲನೆಯದಾಗಿ, ಬಿಸಿಲುಗಾಲದಲ್ಲಿಯೂ -೯ಲಿಯಿಂದ -೧೫ಲಿ ಅ ವರೆಗಿನ ಚಳಿ! ಮಂಜು ಮುಸುಕಿದ ವಾತಾವರಣ; ಮೋಡ-ಮಳೆ; ಹಿಮಪಾತ; ವೇಗವಾಗಿ ಬೀಸುವ ಗಾಳಿ ಮತ್ತು ಇವಾವುವೂ ಇಲ್ಲದಿದ್ದಲ್ಲಿ ಮಾತ್ರ ಶುಭ್ರವಾದ, ನಿರ್ಮಲ ವಾತಾವರಣ! ಆಶ್ಚರ್ಯದ ಸಂಗತಿ ಏನೆಂದರೆ, ಕೇವಲ ಮುಕ್ಕಾಲು ಗಂಟೆಯ ಅವಧಿಯಲ್ಲಿ ಈ ಎಲ್ಲ ವೈಪರೀತ್ಯಗಳನ್ನೂ ಕಾಣಬಹುದು!


ಹಡಗಿನಿಂದ ಹೊರಗೆ ಆ ಸಮಯದಲ್ಲಿ ಬರಬೇಕಾದರೆ, ಥರ್ಮಲ್ಸ್, ಬೆಚ್ಚಗಿನ ನೀರಿಳಿಯದ ಉಡುಪು ಮತ್ತು ಅದೇ ರೀತಿ ಕೈ-ಕಾಲುಗಳಿಗೆ ಕವಚ, ಇವೆಲ್ಲವನ್ನೂ ಧರಿಸಿ ತಯಾರಾಗಬೇಕು. ಒಂದೊAದು ಬಾರಿಗೂ ಹೀಗೆ ನಮ್ಮ ರೂಮಿನಿಂದ ‘ವೇಷ ಕಟ್ಟಿ’ಕೊಂಡು ಬರುವುದು, ಹಿಂದಿರುಗಿ ಮಾಮೂಲಿ ಬಟ್ಟೆ ಹಾಕಿಕೊಳ್ಳುವುದು, ಇವೆಲ್ಲ ಕಿರಿಕಿರಿಯುಂಟು ಮಾಡುತ್ತಿದ್ದವು.

ಹಡಗಿನಲ್ಲಿ ಪ್ರಯಾಣ ಮಾಡಿ ಅಂಟಾರ್ಟಿಕಾ ತಲುಪಲು ಬೇಸಗೆ ಕಾಲವೇ ಸೂಕ್ತ. ಚಳಿಗಾಲದಲ್ಲಿ ಸಮುದ್ರದ ಮೇಲೆ ಸುಮಾರು ನೂರು-ನೂರೈವತ್ತು ಕಿಲೋಮೀಟರುಗಳ ವ್ಯಾಪ್ತಿಯಲ್ಲಿ ಹಿಮಗಡ್ಡೆಗಳು ಸಂಪೂರ್ಣವಾಗಿ ಆವರಿಸಿಕೊಳ್ಳುವುದರಿಂದ, ಹಡಗಿನಲ್ಲಿ ಪ್ರಯಾಣಿಸಿ ನೆಲವನ್ನು ತಲುಪಲು ಸಾಧ್ಯವೇ ಆಗುವುದಿಲ್ಲ. ಸಮುದ್ರದ ಮೇಲೆ ಬಿಸಿಲು ಬಿದ್ದು ನಿಧಾನವಾಗಿ ಹಿಮ ಕರಗುತ್ತಾ ಹೋದಂತೆ ಸ್ವಲ್ಪ ಸ್ವಲ್ಪವಾಗಿ ದಾರಿಯಾಗುತ್ತದೆ. ಹಿಮ ಕರಗುವ ಈ ಪ್ರಕ್ರಿಯೆ ನವೆಂಬರ್‌ನಲ್ಲಿಯೇ ಶುರುವಾದರೂ ಅದು ಡಿಸೆಂಬರ್ ತಿಂಗಳೂ ಮುಂದುವರೆದು, ಜನವರಿ ತಿಂಗಳ ಕೊನೆಗೆ ಸಮುದ್ರ ಖಾಲಿಯಾಗುವುದರಿಂದ, ¥s಼Éಬ್ರವರಿ-ಮಾರ್ಚ್ ತಿಂಗಳುಗಳು ಅಂಟಾರ್ಟಿಕಾ ಪ್ರಯಾಣಕ್ಕೆ ಸೂಕ್ತ. ಮಾರ್ಚ್ ತಿಂಗಳಿನ ಕೊನೆಗೆ ಪುನಃ ನೀರು ಹೆಪುö್ಪಗಟ್ಟಿ ಹಿಮಗಡ್ಡೆಗಳು ತೇಲಲು ತೊಡಗುವುದರಿಂದ ಅಲ್ಲಿಂದಾಚೆಗೆ ಹಡಗುಗಳು ಅಂಟಾರ್ಟಿಕಾ ಕಡೆಗೆ ಪ್ರಯಾಣ ಮಾಡುವುದು ಕಡಿಮೆ.

ಅಂಟಾರ್ಟಿಕಾ ಸೇರಲು ಉಶುವಯ್ಯಾ ಪಟ್ಟಣವನ್ನು ನಾವು ಬಿಟ್ಟದ್ದು ಜನವರಿ ೨೬ರಂದು. ಎರಡು ದಿನ ಕಳೆದು, ೨೮ನೇ ತಾರೀಕು, ಬೆಳಿಗ್ಗೆ ೫:೧೫ಕ್ಕೆ ಹಿಮಖಂಡದ ಮೊದಲ ದರ್ಶನ! ಹಡಗಿನಲ್ಲಿದ್ದ ಎಲ್ಲ ಪ್ರಯಾಣಿಕರೂ ಮೊದಲ ಬಾರಿಗೆ ಅಂಟಾರ್ಟಿಕಾ ಖಂಡವನ್ನು ನೋಡುವ ಕುತೂಹಲದಿಂದ ಹಡಗಿನ ಮೇಲ್ಮಹಡಿಯಲ್ಲಿ, ಅಂದರೆ, ಹಡಗಿನ ೧೨ನೇ ಡೆಕ್‌ನ ಮೇಲೆ ಗಡಗಡ ನಡುಗುತ್ತಾ ೪ ಗಂಟೆಗೇ ತಯಾರಾಗಿ ನೆರೆದಿದ್ದರು!

ಆಕಾಶ ವೀಕ್ಷಣೆ:

ಉತ್ತರ ಗೋಳಾರ್ಧದಲ್ಲಿ ವಾಸಿಸುವ ನಮಗೆ ಇಲ್ಲಿ ಕಾಣದ ಕೆಲವು ಆಕಾಶದ ಭಾಗಗಳು ದಕ್ಷಿಣಕ್ಕೆ ಹೋದಾಗ ಕಂಡುಬರುತ್ತವೆ. ಜೊತೆಗೆ ಯಾವ ಜೀವಿಗಳೂ ಇಲ್ಲದ, ಯಾವುದೇ ಕೃತಕವಾದ ಬೆಳಕೂ ಇಲ್ಲದ, ಶುಭ್ರವಾದ ವಾತಾವರಣ ಮತ್ತು ನಿಶ್ಶಬ್ದವಾದ ಅಂಟಾರ್ಟಿಕಾದಲ್ಲಿ ಆಕಾಶ ವೀಕ್ಷಣೆ ನಿಜಕ್ಕೂ ರೋಮಾಂಚನಕಾರಿ!

ಅAಟಾರ್ಟಿಕಾದಲ್ಲಿ ಕಾಣಬಹುದಾದ ನಭೋಮಂಡಲದ ದೃಶ್ಯ ಮತ್ತು ಆಕಾಶಕಾಯಗಳ ಬಗ್ಗೆ ನಾನು ಪೂರ್ವತಯಾರಿ ನಡೆಸಿದ್ದೆ. ನಕ್ಷತ್ರ ವೀಕ್ಷಣೆ ಮಾಡುವಾಗ ನಾವು ಗಮನಿಸಬೇಕಾದ ಮತ್ತೊಂದು ಅಂಶವಿದೆ. ಉತ್ತರದಲ್ಲಿ ಧ್ರುವ ನಕ್ಷತ್ರವನ್ನು ನೀವೆಲ್ಲ ನೋಡಿದ್ದೀರಿ. ಭೂಮಧ್ಯರೇಖೆಯಿಂದ ನೀವು ಉತ್ತರಕ್ಕೆ ಹೋದಂತೆಲ್ಲ, ಆ ನಕ್ಷತ್ರ ಅಷ್ಟೇ ಡಿಗ್ರಿಯಷ್ಟು ದಿಗಂತದಿAದ ಮೇಲಕ್ಕೆ ಕಾಣುತ್ತದೆ. ಅಂದರೆ, ಕರ್ನಾಟಕದಲ್ಲಿ ೧೨-೧೭ ಡಿಗ್ರಿ ಮತ್ತು ಡೆಲ್ಲಿಯಲ್ಲಿ ೨೮ ಡಿಗ್ರಿ ಎತ್ತರದಲ್ಲಿ ಕಂಡುಬರುತ್ತದೆ. ಆಕಾಶದಲ್ಲಿ ನಮ್ಮ ಎರಡೂ ಬದಿಯಲ್ಲಿ ಉತ್ತರ-ದಕ್ಷಿಣದ ನಕ್ಷತ್ರಪಟಗಳನ್ನು ನೋಡಬಹುದು. ಅವೆರಡರ ಮಧ್ಯೆ ಸೂರ್ಯ, ಚಂದ್ರ, ಗ್ರಹಾದಿಗಳು ಪೂರ್ವದಿಂದ ಪಶ್ಚಿಮಕ್ಕೆ ಚಲಿಸುತ್ತವೆ. ಭೂಮಿಯ ಉತ್ತರ ಧ್ರುವದಲ್ಲಿ ರಾತ್ರಿ ನಿಂತು ನೋಡಿದರೆ, ಧ್ರುವನಕ್ಷತ್ರ ನೇರವಾಗಿ ನೆತ್ತಿಯ ಮೇಲೇ ಕಾಣುತ್ತದೆ ಹಾಗೂ ಆಕಾಶದಲ್ಲಿ ಉತ್ತರ ಭಾಗದ ಸಂಪೂರ್ಣ ಚಿತ್ರಪಟ ಕಾಣುತ್ತದೆ. ಅಷ್ಟೇ ಅಲ್ಲ, ಪೂರ್ವದಲ್ಲಿ ಉದಯಿಸಿ ಪಶ್ಚಿಮದಲ್ಲಿ ಅಸ್ತಮಿಸುವ ಸೂರ್ಯ, ಚಂದ್ರ, ಗ್ರಹಾದಿಗಳು ದಿಗಂತದಲ್ಲಿ ಅಡ್ಡಡ್ಡಲಾಗಿ ಚಲಿಸುವಂತೆ ಕಾಣುತ್ತವೆ!

ಅದೇ ರೀತಿ ನಾವು ಭೂಮಿಯ ದಕ್ಷಿಣಕ್ಕೆ ಪ್ರಯಾಣಿಸಿದಾಗ, ದಕ್ಷಿಣ ಧ್ರುವ ಪ್ರದೇಶದಲ್ಲಿ ಬರೇ ದಕ್ಷಿಣ ಆಕಾಶದ ಚಿತ್ರಪಟ ಕಾಣುತ್ತದೆ ಮತ್ತು ಭಾರತದಲ್ಲಿ ನಮಗೆ ಸಾಮಾನ್ಯವಾಗಿ ದಕ್ಷಿಣ ದಿಗಂತದಲ್ಲಿ ಕಾಣುವ ತಾರಾಮಂಡಲಗಳು ಅಂಟಾರ್ಟಿಕಾ ಪ್ರದೇಶದಲ್ಲಿ ಸುಲಭವಾಗಿ ತಲೆಯ ಮೇಲೇ ಕಾಣುವುವು. ಹಗಲಿನಲ್ಲಿ ಗ್ರಹಗಳು ಅಡ್ಡಡ್ಡಲಾಗಿ ಚಲಿಸುವಂತೆ ತೋರುತ್ತವೆ ಹಾಗೂ ಸೂರ್ಯನು ನಮ್ಮ ಭುಜ ಮಟ್ಟವನ್ನು ದಾಟಿ ಮೇಲೆ ಬರುವುದಿಲ್ಲ.

೧. ಅಚಿಡಿiಟಿಚಿ (ದೇವನೌಕೆ) ಎಂಬುದು ದಕ್ಷಿಣ ಆಕಾಶದಲ್ಲಿ ಕಾಣುವ ಒಂದು ನಕ್ಷತ್ರಪುಂಜ(ಅoಟಿsಣeಟಟಚಿಣioಟಿ). ಇದೊಂದು ಅತ್ಯಂತ ಮನೋಹರವಾದ, ಹಲವಾರು ನಕ್ಷತ್ರಗಳು, ನಕ್ಷತ್ರಗುಚ್ಚ(Sಣಚಿಡಿಅಟusಣeಡಿ)ಗಳು, ನೀಹಾರಿಕೆ(ಓebuಟಚಿ)ಗಳು, ಹತ್ತು-ಹಲವು ಬ್ರಹ್ಮಾಂಡ(ಉಚಿಟಚಿxಥಿ)ಗಳನ್ನು ಒಳಗೊಂಡ ವಿಶಾಲವಾದ ತಾರಾ ಸಮೂಹದ ನಭೋಪ್ರದೇಶ! ಈ ನಕ್ಷತ್ರಪುಂಜದಲ್ಲಿ ಎಲ್ಲಕ್ಕಿಂತ ಪ್ರಕಾಶಮಾನವಾಗಿ ಕಾಣುವ ಅಚಿಟಿoಠಿus (α ಅಚಿಡಿiಟಿಚಿe) ಎಂಬ ತಾರೆ ನಮಗೆ ಕರ್ನಾಟಕದಲ್ಲಿಯೂ ಬರಿಗಣ್ಣಿಗೆ, ದಕ್ಷಿಣ ದಿಗಂತದಲ್ಲಿ ಕಾಣುತ್ತದೆ. ಆದರೆ ಆ ನಕ್ಷತ್ರಪುಂಜದ ಉಳಿದ ನಕ್ಷತ್ರಗಳು ಸುಲಭವಾಗಿ ಕಾಣುವುದಿಲ್ಲ; ಹೆಚ್ಚು ಸಮಯ ಇವು ಕ್ಷಿತಿಜದ ಕೆಳಗೇ ಉಳಿಯುತ್ತವೆ. ನಾವಿರುವ ಬ್ರಹ್ಮಾಂಡಕ್ಕೆ ಕ್ಷೀರಪಥ ಬ್ರಹ್ಮಾಂಡವೆAದೇ ಹೆಸರು. ಭೂಮಿಯಿಂದ ನಾವು ರಾತ್ರಿ ವೇಳೆ ಗಗನವನ್ನು ನೋಡಿದಾಗ, ಬ್ರಹ್ಮಾಂಡದ ಮಧ್ಯ ಭಾಗದ ಮೂಲಕ ನಮಗೆ ನಕ್ಷತ್ರಗಳ ಸಾಂದ್ರತೆ ಹೆಚ್ಚಿ, ಮುದ್ದೆ ಮುದ್ದೆಯಾಗಿ, ರಾಶಿ ರಾಶಿ ತಾರೆಗಳು ಇಡೀ ಆಕಾಶದಲ್ಲಿ ಹಾಲು ಚೆಲ್ಲಿದ ಒಂದು ಪಟ್ಟಿಯಂತೆ ಕಾಣುತ್ತದೆ. ಶುಭ್ರವಾದ, ಕೃತಕ ಬೆಳಕಿನ ಬಾಧೆಯಿಲ್ಲದ ಜಾಗಗಳಲ್ಲಿ, ಸುಂದರವಾದ ಈ ಕ್ಷೀರಪಥ(ಒiಟಞಥಿ Wಚಿಥಿ)ವನ್ನು ನಾವು ನೋಡಬಹುದು. ಇದು ಧನಸ್ಸು ರಾಶಿಯಿಂದ ತೊಡಗಿ, ದೇವನೌಕೆಯನ್ನು ಹಾದು ಹೋಗುವುದನ್ನು ಕಾಣಬಹುದು. ಹಾಗಾಗಿ, ನಮ್ಮ ಬ್ರಹ್ಮಾಂಡದ ಮಧ್ಯಭಾಗ ಮತ್ತು ಅದರಾಚೆ ಇರುವ ಅನೇಕ ಬ್ರಹ್ಮಾಂಡಗಳನ್ನು ದೇವನೌಕೆಯ ಅಂಗಳದಲ್ಲಿಯೇ ನಾವು ನಿರೀಕ್ಷಿಸಬಹುದು. ಅದರಲ್ಲೂ ಇಣಚಿ ಅಚಿಡಿiಟಿಚಿe ಎಂಬ ನೀಹಾರಿಕೆಯಂತೂ ಆಕಾಶವೀಕ್ಷಕರ ಅಚ್ಚುಮೆಚ್ಚಿನ ತಾಣ! η ಅಚಿಡಿiಟಿಚಿe ಎಂಬ ಅದೇ ಹೆಸರಿನ ನಕ್ಷತ್ರ ಹುಟ್ಟಿದ್ದೂ ಈ ನೀಹಾರಿಕೆಯಲ್ಲಿಯೇ! ಈ ನೀಹಾರಿಕೆಯ ಸುತ್ತ ಮುತ್ತ ಇನ್ನೂ ಹಲವಾರು ನೀಹಾರಿಕೆಗಳು, ನಕ್ಷತ್ರಗುಚ್ಚಗಳು ನೆಲೆಸಿವೆ. ಅವುಗಳಲ್ಲಿ ‘ಈಗಲ್’ ನೀಹಾರಿಕೆ ಅತ್ಯಂತ ಸುಂದರ ಮತ್ತು ಪ್ರಮುಖವಾದದ್ದು. ಹದ್ದಿನ ಆಕಾರದ ಈ ಅಂತರಿಕ್ಷಕಾಯ, ಭೂಮಿಯಿಂದ ೭ ಸಾವಿರ ಜ್ಯೋತಿರ್ವರ್ಷ ದೂರದಲ್ಲಿದೆ ಹಾಗೂ ಈ ದ್ರವ್ಯರಾಶಿಯ ವಿಸ್ತಾರವೇ ೭೦ ಜ್ಯೋತಿರ್ವರ್ಷಗಳು! ಈ ನೀಹಾರಿಕೆಗಳು, ಅನಿಲ ಸ್ಥಿತಿಯಲ್ಲಿರುವ ಬೃಹತ್ ದ್ರವ್ಯರಾಶಿಗಳು. ಮತ್ತು ಹೊಸ ಹೊಸ ನಕ್ಷತ್ರಗಳ ಹುಟ್ಟುದಾಣಗಳು.

೨. ಮ್ಯಾಜೆಲ್ಲನ್ನನ ಮೇಘಗಳು(ಒಚಿgeಟಟeಟಿiಛಿ ಅಟouಜs): ಬಹುಶಃ ಮ್ಯಾಜೆಲ್ಲನ್ ನಾವಿಕನ ಬಗ್ಗೆ ನೀವೆಲ್ಲ ಚರಿತ್ರೆಯ ಪಾಠದಲ್ಲಿ ಓದಿರಬಹುದು. ಆತ ಭೂಮಿಯ ಸುತ್ತ ಪ್ರಯಾಣ ಮಾಡುತ್ತಾ, ದಕ್ಷಿಣ ಗೋಳದಲ್ಲಿ ಸಂಚರಿಸುತ್ತಿರುವಾಗ ರಾತ್ರಿ ವೇಳೆ ಆಕಾಶದಲ್ಲಿ ಎರಡು ಸಣ್ಣ ಸಣ್ಣ ಮೋಡದಂತಿರುವ ಆಕಾಶಕಾಯಗಳನ್ನು ಕಂಡಿದ್ದನೆAದು ತೋರುತ್ತದೆ. ಆದ್ದರಿಂದ ಅವುಗಳಿಗೆ ಅವನ ಹೆಸರನ್ನೇ ಇಟ್ಟಿದ್ದಾರೆ. ಒಂದು ಮತ್ತೊಂದಕ್ಕಿAತ ಚಿಕ್ಕದಾಗಿರುವ ಕಾರಣ ಅವುಗಳಿಗೆ ಹಿರಿಯ ಮತ್ತು ಕಿರಿಯ ಮ್ಯಾಜೆಲ್ಲನ್ನನ ಮೇಘಗಳು ಎಂದು ಹೆಸರು. ಉತ್ತರ ಗೋಳಾರ್ಧದಲ್ಲಿರುವ ನಮಗೆ ಬರಿಗಣ್ಣಿಗೆ ಕಾಣುವ ಒಂದೇ ಒಂದು ಬ್ರಹ್ಮಾಂಡವೆAದರೆ, ಅದು ಆಂಡ್ರೋಮೆಡಾ (ಂಟಿಜಡಿomeಜಚಿ) ಬ್ರಹ್ಮಾಂಡ. ಅದು ನಮ್ಮಿಂದ ೨೪ ಲಕ್ಷ ಜೋತಿರ್ವರ್ಷಗಳ ದೂರದಲ್ಲಿರುವ ಮತ್ತು ನಮ್ಮ ಬ್ರಹ್ಮಾಂಡಕ್ಕಿAತ ಎರಡು ಪಟ್ಟು ದೊಡ್ಡದಾದ ಆಕಾಶಕಾಯ. ಅದೇ ರೀತಿ ದಕ್ಷಿಣ ಗೋಳಾರ್ಧದ ಜನರಿಗೆ ಮ್ಯಾಜೆಲ್ಲನ್ನನ ಜೋಡಿ ಮೇಘಗಳು, ನಮ್ಮ ಬ್ರಹ್ಮಾಂಡದಿAದ ಹೊರಗೆ ಬರಿಗಣ್ಣಿಗೆ ಕಾಣುವ ಮತ್ತೆರಡು ಬ್ರಹ್ಮಾಂಡಗಳು! ನಮ್ಮಿಂದ ಸುಮಾರು ೧೬೩-೨೦೬ ಸಾವಿರ ಜ್ಯೋತಿರ್ವರ್ಷ ದೂರದಲ್ಲಿರುವ, ನಿರ್ದಿಷ್ಟ ಆಕಾರವಿಲ್ಲದ, ಈ ಎರಡೂ ಬ್ರಹ್ಮಾಂಡಗಳು ನಮ್ಮ ಕ್ಷೀರಪಥ ಬ್ರಹ್ಮಾಂಡವನ್ನೇ ಸುತ್ತುತ್ತಿವೆ.

೩. ಇವಲ್ಲದೆ, ದಕ್ಷಿಣ ಆಕಾಶದಲ್ಲಿ ಮಾತ್ರ ಕಾಣುವ ಅನೇಕ ನಕ್ಷತ್ರಪುಂಜಗಳಾದ ಒusಛಿಚಿ, ಒeಟಿsಚಿ, ಊಥಿಜಡಿus, ಆoಡಿಚಿಜo, Piಛಿಣoಡಿ, ಖeಣiಛಿuಟum, ಖಿuಛಿಚಿಟಿಚಿ, ಔಛಿಣಚಿಟಿs, ಉಡಿus, Iಟಿಜus.. .. ಗಳನ್ನು ಮತ್ತು ಆ ಪ್ರದೇಶಗಳಲ್ಲಿರುವ ನಕ್ಷತ್ರಗಳು, ನಕ್ಷತ್ರಗುಚ್ಚಗಳು, ನೀಹಾರಿಕೆಗಳು, ಹತ್ತು-ಹಲವು ಬ್ರಹ್ಮಾಂಡಗಳನ್ನು ಕಾಣುವ ಒಂದೇ ಅವಕಾಶ ಇದಾಗಿತ್ತು.

ಬ್ಯೂನಸ್ ಆಯ್ರಿಸ್‌ನಿಂದಲೇ, ನಮ್ಮ ನೌಕೆ ಹೊರಟ ಮೊದಲ ರಾತ್ರಿಯಿಂದಲೇ, ನಾನು ಆಕಾಶವನ್ನು ಗಮನಿಸುತ್ತ ಹೊರಟೆ. ದಕ್ಷಿಣ ದಿಕ್ಕಿನತ್ತ ಪ್ರಯಾಣ ಮಾಡುತ್ತಿದ್ದಂತೆ, ಬರಬರುತ್ತ ರಾತ್ರಿಯ ವೇಳೆ ಕಡಿಮೆಯಾಗುತ್ತಾ, ಕೊನೆಗೆ ಅಂಟಾರ್ಟಿಕಾ ತಲಪುವ ಹೊತ್ತಿಗೆ ರಾತ್ರಿ ಹನ್ನೊಂದೂಮುಕ್ಕಾಲು ಗಂಟೆಗೆ ಕತ್ತಲಾದರೆ, ಎರಡು-ಎರಡೂವರೆ ಗಂಟೆಗೆ ಬೆಳಕು ಹರಿಯುತ್ತಿತ್ತು! ಹೀಗಾಗಿ ನಾನು ಮಧ್ಯ ರಾತ್ರಿಯ ನಂತರವೇ ಕೊರೆಯುವ ಚಳಿಯಲ್ಲಿ ಹಡಗಿನಿಂದ ಹೊರಗೆ ಬರಬೇಕಿತ್ತು. ಅಂಟಾರ್ಟಿಕಾದಲ್ಲಿ ಇದ್ದ ನಾಲ್ಕು ದಿವಸಗಳಲ್ಲಿ, ಎರಡು ರಾತ್ರಿಗಳು ಆಕಾಶದಲ್ಲಿ ಮಂಜು-ಮಳೆ ಮತ್ತು ಹಿಮಪಾತವಾಗಿದ್ದರಿಂದ ನನಗೆ ದೊರಕಿದ್ದು ಎರಡೇ ರಾತ್ರಿಗಳ ಆಕಾಶವೀಕ್ಷಣೆಯ ಭಾಗ್ಯ! ಆ ನಡುರಾತ್ರಿಯಲ್ಲಿ, ನನ್ನ ಜೊತೆಗಾರನಾಗಿ ಬಂದಿದ್ದ ಕಿರಣ್ ‘ವೇಷ ಕಟ್ಟಿಕೊಂಡು’ ನನ್ನೊಡನೆ ಹನ್ನೆರಡನೆ ಮಹಡಿ ಹತ್ತಿ, ಮೊದಲ ರಾತ್ರಿ ಏನೋ ಬಂದ. ಆದರೆ, ಎರಡನೆಯ ರಾತ್ರಿ ಆತ ಸುತರಾಂ ಒಪ್ಪಲಿಲ್ಲ. ಆ ಅಪರಾತ್ರಿಯ ವೇಳೆಯಲ್ಲಿ ಇತರ ಯಾವುದೇ ಪ್ರಯಾಣಿಕನನ್ನೂ ನಾನು ನಿರೀಕ್ಷಿಸುವಂತಿರಲಿಲ್ಲ. ಸುಮಾರು ೨೨ ದೇಶಗಳಿಂದ ಬಂದAತಹ ಪ್ರಯಾಣಿಕರಲ್ಲಿ ಯಾವೊಬ್ಬರಿಗೂ ಆಕಾಶ ವೀಕ್ಷಣೆಯ ಹವ್ಯಾಸವಿದ್ದಂತಿರಲಿಲ್ಲ; ಇದು ನನಗೆ ನಿಜಕ್ಕೂ ಬಹಳ ಆಶ್ಚರ್ಯದ ವಿಚಾರವಾಗಿತ್ತು.

ಪ್ರತಿ ರಾತ್ರಿ ನನ್ನೊಂದಿಗೆ ಲ್ಯಾಪ್‌ಟಾಪ್, ಬೈನಾಕ್ಯುರ‍್ಸ್, ಹಸಿರು ಲೇಸರ್ ಟಾರ್ಚ್ ಮತ್ತು ಅಚಿಟಿoಟಿ P೯೦ ಕ್ಯಾಮೆರಾದೊಂದಿಗೆ ಒಯ್ಯುತ್ತಿದ್ದೆ. ನನ್ನ ಹತ್ತಿರ ಟೆಲಿಸ್ಕೋಪ್ ಇಲ್ಲವಾದ್ದರಿಂದ ನನ್ನ ಆಕಾಶವೀಕ್ಷಣೆ ದುರ್ಬೀನಿನಲ್ಲಿ ಕಾಣುವ ಆಕಾಶಕಾಯಗಳಿಗೆ ಸೀಮಿತ. ಕೊರೆಯುವ ಚಳಿಯಲ್ಲಿ ಒಂದೊAದನ್ನೂ ಅಣಿಮಾಡಿ, ಹೊಂದಿಸುವುದರಲ್ಲಿ ಸಾಕುಸಾಕಾಗುತ್ತಿತ್ತು. ಅದೇನಾಯಿತೋ, ನನ್ನ ಮೊಬೈಲ್‌ನಲ್ಲಿ, ಎರಡು ದಿನ ಮುಂಚೆಯೇ, ಕಂಪಾಸ್ ಕೆಲಸ ಏರುಪೇರಾಗಿತ್ತು, ಅಂದರೆ, ದಿಕ್ಕುಗಳನ್ನು ಯದ್ವಾತದ್ವಾ ತೋರಿಸತೊಡಗಿತ್ತು. ಅದಕ್ಕೆ ಕಾರಣ ನನಗೆ ಇಲ್ಲಿಯವರೆಗೂ ಅರ್ಥವಾಗಿಲ್ಲ. ನನ್ನ ಆಕಾಶವೀಕ್ಷಣೆಯ ವೇದಿಕೆ, ನಮ್ಮ ಹಡಗಿನ ತುತ್ತತುದಿಯ ಮಹಡಿಯಾದ್ದರಿಂದ ಸುತ್ತಲೂ ಆಕಾಶದ ಎಲ್ಲ ದಿಕ್ಕುಗಳೂ ಕಾಣುತ್ತಿತ್ತು. ನನಗೆ ಬಂದ ಮತ್ತೊಂದು ಅಡಚಣೆಯೆಂದರೆ, ಹಡಗಿನ ಮೇಲೆ ಸುತ್ತಲೂ ಉರಿಯುತ್ತಿದ್ದ ಲೈಟ್‌ಗಳು! ಪ್ರತಿ ಬಾರಿಯೂ ಕತ್ತಲ ಜಾಗವನ್ನು ಹುಡುಕಿ ನಿಲ್ಲಬೇಕಾಗಿತ್ತು. ಆ ಸಮಯದಲ್ಲಿ ಯಾವ ಮಟ್ಟದ ಚಳಿ ಇರುತ್ತಿತ್ತೆಂದರೆ, ¥s಼ÉÇÃಟೋ ತೆಗೆಯಲು ಹರಸಾಹಸ ಪಡಬೇಕಾಗಿತ್ತು. ಕ್ಯಾಮೆರಾದ ಯಾವ ಕೀಲಿಯೂ ದಪ್ಪನಾದ ಕೈಕವಚದ ಮೂಲಕ ತಿರುಗಿಸಲಾಗುತ್ತಿರಲಿಲ್ಲ. ಕೈಕವಚವನ್ನು ತೆಗೆದು ಎಲ್ಲವನ್ನೂ ಹೊಂದಿಸಿ ಕ್ಲಿಕ್ ಮಾಡುವಷ್ಟರಲ್ಲಿ ಕೈ ಮರಗಟ್ಟಿ ಹೋಗುತ್ತಿತ್ತು. ಪುನಃ ಬೆರಳುಗಳು ಬೆಚ್ಚಗಾಗಿಸಲು ಎರಡು ನಿಮಿಷ!

ನಕ್ಷತ್ರಪುಂಜಗಳು ಮತ್ತು ಗ್ರೀಕ್ ಖಗೋಳಶಾಸ್ತç:

ಇರುಳಿನ ವೇಳೆ ಆಕಾಶದಲ್ಲಿ ನಕ್ಷತ್ರಗಳನ್ನು ನೋಡಿ ಆಶ್ಚರ್ಯ-ಕುತೂಹಲ-ಭಯ-ಗೌರವಭಾವಗಳಿಂದ ನೋಡಿದವರಲ್ಲಿ ಗ್ರೀಕರೂ ಒಬ್ಬರು. ಕತ್ತಲು ಕವಿದಂತೆ ಗಗನದಲ್ಲಿ ಮಿಂಚುತ್ತಿದ್ದ ತಾರೆಗಳನ್ನು ಗಮನಿಸಿ, ಆ ಚಿತ್ತಾರಗಳಿಗೆ ಏನೋ ಒಂದು ಅರ್ಥವಿರಬೇಕೆಂದು ಊಹಿಸಿದರು. ಆ ಊಹೆಯನ್ನು ವಿಸ್ತರಿಸಿ, ಚೆಲ್ಲಾಪಿಲ್ಲಿಯಾಗಿ ಎರಚಿ ಹೋದ ಹೊಳೆಯುವ ನಕ್ಷತ್ರಗಳನ್ನು ರಂಗೋಲಿ ಚುಕ್ಕೆಗಳನ್ನು ಸೇರಿಸಿ ಚಿತ್ರ ರಚಿಸುವಂತೆ, ವಿವಿಧ ಚಿತ್ರಗಳನ್ನು ಸೃಷ್ಟಿಸಿ, ಅವಕ್ಕೆ ವಿವಿಧ ಗ್ರೀಕ್ ಪೌರಾಣಿಕ ಹೆಸರುಗಳನ್ನು ನೀಡಿ ಪ್ರಚುರಪಡಿಸಿದರು. ಆಕಾಶದಲ್ಲಿ ನಕ್ಷತ್ರಗಳನ್ನು ಬರಿಗಣ್ಣಿನಿಂದ ನೋಡಿ, ಅವುಗಳನ್ನು ವ್ಯವಸ್ಥಿತವಾಗಿ ವಿಂಗಡಿಸಿ, ಮಾಡಿದ ೮೮ ನಕ್ಷತ್ರಪುಂಜಗಳ ಖಗೋಳ ನಕ್ಷೆಯನ್ನು ಇಂದಿಗೂ ಕೂಡ ಬಳಸುತ್ತಿದ್ದೇವೆ. ಭೂಮಿಯ ಮೇಲೆ ಸ್ಥಳಗಳನ್ನು ಗುರುತಿಸಲು ಅಕ್ಷಾಂಶ(ಐಚಿಣiಣuಜe)-ರೇಖಾAಶ(ಐoಟಿgiಣuಜe)ಗಳ ಅನ್ವಯ ನಿರ್ಧರಿಸಿರುವಂತೆ, ಆಕಾಶದಲ್ಲೂ ಯಾವುದೇ ನಕ್ಷತ್ರದ ಸ್ಥಾನವನ್ನು ನಿರ್ಧರಿಸಲು ವಿಷುವದಂಶ(ಆeಛಿಟiಟಿಚಿಣioಟಿ)- ಘಂಟವೃತ್ತಾAಶ(ಖighಣ ಚಿsಛಿeಟಿsioಟಿ) ಎಂಬ ಅಂಶಗಳನ್ನು ಬಳಸುತ್ತೇವೆ.

ಕ್ರಿ.ಶ. ಒಂದು-ಎರಡನೆಯ ಶತಮಾನದಲ್ಲಿ ಭಾರತ ಮತ್ತು ಗ್ರೀಕರ ಒಡನಾಟ-ಪ್ರಭಾವ-ವಿಚಾರವಿನಿಮಯದಿಂದಾಗಿ ಭಾರತೀಯ ಖಗೋಳ ವಿಜ್ಞಾನಿಗಳೂ ಆಕಾಶದಲ್ಲಿನ ಆ ೮೮ ನಕ್ಷತ್ರಪುಂಜಗಳಿಗೆ ಭಾರತೀಯ ಹೆಸರುಗಳನ್ನು ಇಟ್ಟು ಬಳಸತೊಡಗಿದರು. ಇಲ್ಲಿ ನಾವು ಅವಶ್ಯವಾಗಿ ಗಮನಿಸಬೇಕಾದ ಒಂದು ಅಂಶವೇನೆAದರೆ, ೮೮ ನಕ್ಷತ್ರಪುಂಜಗಳಲ್ಲಿಯೇ ರಾಶಿಚಕ್ರ(Zoಜiಚಿಛಿ)ವೂ ಬರುವುದರಿಂದ ಅದರಲ್ಲಿರುವ ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ.. .. ಮುಂತಾದ ಅಸಂಬದ್ಧ ಹೆಸರುಗಳು ಕ್ರಮವಾಗಿ ಂಡಿies, ಖಿಚಿuಡಿus, ಉemiಟಿi, ಅಚಿಟಿಛಿeಡಿ, ಐeo.. ಗಳ ನೇರ ಭಾಷಾಂತರಗಳಾಗಿವೆ. ಇದನ್ನು ಭಾರತದಲ್ಲಿ ಬಳಸಿದವರಲ್ಲಿ ಎರಡನೆ ಭಾಸ್ಕರಾಚಾರ್ಯ(೧೧೧೪-೧೧೮೫)ನ ಪಾತ್ರ ದೊಡ್ಡದು. ಉದಾಹರಣೆಗೆ ಇಲ್ಲಿ ನಾನು ಹೇಳಿರುವ ಅಚಿಡಿiಟಿಚಿ ನಕ್ಷತ್ರಪುಂಜಕ್ಕೆ ದೇವನೌಕಾ ಎಂದು ಹೆಸರು. ಇಂದು ನಮ್ಮಲ್ಲಿ ಗಿಳಿಶಾಸ್ತç ಹೇಳುವ ಸಾವಿರಾರು ಜೋತಿಷಿಗಳು ಬಳಸುವ ರಾಶಿ, ಜಾತಕ ಇವೆಲ್ಲ ಭಾರತೀಯ ಪರಂಪರೆ-ಸAಸ್ಕöÈತಿಯಲ್ಲಿ ಬಂದದ್ದಲ್ಲ. ಅವೆಲ್ಲ ಗ್ರೀಕರಿಂದ ನೇರವಾಗಿ ನಮ್ಮವರು ಎರವಲು ಪಡೆದದ್ದು!

೩೦ ಜನವರಿ: ಭೂಮಿಯ ದಕ್ಷಿಣ ಭಾಗದ ಸ್ಥಳಗಳಿಂದ ತೋರುತ್ತಿದ್ದ ಆಕಾಶ ನನಗೆ ಸಂಪೂರ್ಣವಾಗಿ ಹೊಸದು. ಮೊದಲು ಮೊದಲಿಗೆ ನನಗೆ ಆಕಾಶದಲ್ಲಿ ಕಾಣುತ್ತಿದ್ದ ತಾರೆಗಳನ್ನು ಗುರುತಿಸುವ ಕಾರ್ಯದಲ್ಲಿ ಸ್ವಲ್ಪ ಮಟ್ಟಿನ ಗೊಂದಲವುAಟಾಗಿತ್ತು. ಪ್ರತಿನಿತ್ಯ ರಾತ್ರಿ ಒಂದಲ್ಲ ಒಂದು ವೇಳೆಯಲ್ಲಿ ನಕ್ಷತ್ರವೀಕ್ಷಣೆ ಮಾಡುತ್ತಿದ್ದುದರಿಂದ ಆ ಕೆಲಸ ಹಗುರವೇನೋ ಆಗಿತ್ತು. ಆದರೆ, ಅಂಟಾರ್ಟಿಕಾದ ಅತ್ಯಂತ ನಿರಭ್ರವಾದ, ಒಂದಿಷ್ಟೂ ಕೃತಕ ಬೆಳಕಿಲ್ಲದ ಆ ಆಕಾಶದಲ್ಲಿ ಎಲ್ಲಾ ತಾರೆಗಳು ಇನ್ನೂ ಹೆಚ್ಚು ಪ್ರಕಾಶಮಾನವಾಗಿ ಹೊಳೆಯುತ್ತಿದ್ದಂತೆ ತೋರುತ್ತಿದ್ದವು! ಸುತ್ತಲೂ ಸಮುದ್ರವೇ ಸಮುದ್ರ! ತಲೆಯೆತ್ತಿದರೆ, ದಿಗಂತದಿAದ ದಿಗಂತದವರೆಗೆ ಅಭೂತಪೂರ್ವ ಆಕಾಶ! ವಾಹ್! ಅದೊಂದು ಅನಿರ್ವಚನೀಯ ಅನುಭವ! ನನ್ನೊಂದಿಗೆ ಕಿರಣನನ್ನೂ ಕರೆದುಕೊಂಡು ಬಂದಿದ್ದೆ. ಸಂಭ್ರಮದಿAದ ಒಂದೊAದನ್ನೂ ಅವನಿಗೆ ಅರ್ಥವಾಗುವಂತೆ ತೋರಿಸಿದೆ. ಸಂಭ್ರಮ ನನಗೆ!



ಬಾಂದಳದಲ್ಲಿ ಪ್ರಥಮವಾಗಿ ನನ್ನನ್ನು ಆಕರ್ಷಿಸಿದ್ದು ಹಾಲಿನಂತೆ ಆವರಿಸಿದ್ದ ಕ್ಷೀರಪಥ. ಧನಸ್ಸುರಾಶಿಯಲ್ಲಿ ನೆಲೆಸಿರುವ ನಮ್ಮ ಬ್ರಹ್ಮಾಂಡದ ಕೇಂದ್ರಭಾಗವನ್ನು ದಿಗಂತದಿAದ ಅಷ್ಟು ಎತ್ತರದಲ್ಲಿ ನಾನು ಕಂಡಿರಲಿಲ್ಲ. ಸಿಂಹ, ಕನ್ಯಾ, ತುಲಾ, ವೃಶ್ಚಿಕಾ, ಧನಸ್ಸು ರಾಶಿಗಳು ಕ್ಷಿತಿಜವನ್ನು ಅಲಂಕರಿಸಿದ್ದವು. ಪೂರ್ವದಲ್ಲಿ ಸಾಲಾಗಿ ಗುರುಗ್ರಹ ತುಲಾರಾಶಿಯಲ್ಲಿ; ಮಂಗಳಗ್ರಹ ವೃಶ್ಚಿಕಾ ರಾಶಿಯ ಅನೂರಾಧಾ ನಕ್ಷತ್ರದ ಬಳಿ ಹಾಗೂ ಶನಿಗ್ರಹ ಧನಸ್ಸುರಾಶಿಯಲ್ಲಿ ಮಿಂಚುತ್ತಿದ್ದವು. ಆ ದಿನ ಅಥವಾ ಹಿಂದಿನ ದಿನ ಹುಣ್ಣಿಮೆಯಿದ್ದಿರಬೇಕು. ಚಂದ್ರ ರಾತ್ರಿ ೧೨:೫೦ಕ್ಕೆ ಪಶ್ಚಿಮದ ಕಡೆಗೆ ಅಸ್ತಮಿಸಿದ್ದರಿಂದ, ಅವನ ಬೆಳಕು ಗಗನ ವೀಕ್ಷಣೆಗೆ ಅಡ್ಡಬರಲಿಲ್ಲ. ಆಕಾಶದಲ್ಲಿ ಮಹಾವ್ಯಾಧ(ಔಡಿioಟಿ) ಮತ್ತು ಮಹಾಶ್ವಾನ(ಅಚಿಟಿis ಒಚಿರಿoಡಿ) ಪುಂಜಗಳು ಆಕರ್ಷಿಸಿದವು. ತಲೆಯ ಮೇಲೆ ಎದ್ದು ಕಾಣುತ್ತಿದ್ದ ನಕ್ಷತ್ರಪುಂಜಗಳಲ್ಲಿ ಅತಿ ಮುಖ್ಯವಾದ ಅeಟಿಣಚಿuಡಿus, ಅಡಿux, ಅಚಿಡಿiಟಿಚಿ, ಮುಂತಾದುವುಗಳನ್ನು, ಅವುಗಳಲ್ಲಿದ್ದ ವಿಶೇಷತೆಗಳನ್ನು ಸಾಕಷ್ಟು ಹೊತ್ತು ವಿವರವಾಗಿ ನೋಡಿದೆ.

ಅಲ್ಲಿಂದ ನನ್ನ ಗಮನವನ್ನೆಲ್ಲ ಮ್ಯಾಜೆಲ್ಲನ್ನನ ಮೇಘಗಳ ಮೇಲೆ! ಈವರೆಗೆ ನಾನು ಅವುಗಳನ್ನು ಬರೇ ಪುಸ್ತಕಗಳಲ್ಲಿ, ಕಂಪ್ಯೂಟರಿನಲ್ಲಿ ಕಂಡಿದ್ದೆ. ಆಕಾಶದಲ್ಲಿ ಆ ಎರಡು ಮೇಘಗಳು ಬೂದು ಮೋಡಗಳಂತೆ ಎದ್ದು ಕಾಣುತ್ತವೆಂದು ಭಾವಿಸಿದ್ದೆ. ಸ್ವಲ್ಪ ಹೊತ್ತು ಅವು ಖಂಡಿತ ನನ್ನ ಕಣ್ಣಿಗೆ ಕಾಣಿಸಲೇ ಇಲ್ಲ. ಶತಮಾನಗಳ ಹಿಂದೆ ನಾವಿಕ ಮ್ಯಾಜೆಲ್ಲನಿಗೆ ಅಷ್ಟು ಸ್ಫುಟವಾಗಿ ಕಂಡ ಬ್ರಹ್ಮಾಂಡಗಳನ್ನು ನಾನಿಂದು ದುರ್ಬೀನಿನಲ್ಲಿ ಹುಡುಕಬೇಕಾಯಿತು! ಅವು ಅಲ್ಲಿಯೇ ಇದ್ದವು, ನನ್ನ ಕಣ್ಣಿಗೆ ಬಿದ್ದಿರಲಿಲ್ಲ. ತಡ ಮಾಡದೆ ಕ್ಯಾಮೆರಾದಲ್ಲಿ ಒಂದಷ್ಟು ¥s಼ÉÇÃಟೊಗಳನ್ನು ತೆಗೆದೆ.

ಆಕಾಶವೀಕ್ಷಣೆಯಂತಹ ಗಹನವಾದ ವಿಚಾರದಲ್ಲೆಲ್ಲ ಕಿರಣನಿಗೆ ಆಸಕ್ತಿ ಅಷ್ಟಕ್ಕಷ್ಟೆ. ಬೆನ್ನು ನೋವು, ಕತ್ತು ಉಳುಕು, ಬೆರಳುಗಳನ್ನು ಆಡಿಸಲು ಆಗದೇ ಇರುವಷ್ಟು ಚಳಿ, ನಿದ್ರೆ, ಇವೆಲ್ಲ ಅವನಿಗೆ ಒಟ್ಟಿಗೇ ಕಾಡತೊಡಗಿದವು. ಹಾಗಾಗಿ ನಾವು ಬೆಳಕು ಹರಿಯುವವರೆಗೆ, ಅಂದರೆ, ಎರಡು ಗಂಟೆಯವರೆಗೆ ಮುಂದುವರೆಸಲಿಲ್ಲ.

೩೧ ಜನವರಿ: ಕಿರಣ್ ಈ ರಾತ್ರಿ ನನ್ನೊಂದಿಗೆ ಬರಲಿಲ್ಲ. ಆ ಅಪರಾತ್ರಿಯಲ್ಲಿ ಹಡಗಿನ ಮೇಲ್ಚಾವಣಿಯ ಮೇಲೆ ನಾನೊಬ್ಬನೇ ಎಲ್ಲ ಸಲಕರಣೆಗಳನ್ನೂ ಹೊತ್ತುಕೊಂಡು ಹೋಗಿ, ಆಕಾಶವನ್ನು ವೀಕ್ಷಿಸಿಬೇಕಾಯಿತು. ಹಿಂದಿನ ರಾತ್ರಿ ಕಂಡ ದೃಶ್ಯಗಳ ಪುನರಾವರ್ತನೆ ಹಾಗೂ ಪುನರ್ಪರಿಶೀಲನೆ. ಮರುದಿನ ನಮ್ಮ ಹಡಗು ಹಿಂದಿರುಗುವುದರಲ್ಲಿತ್ತು. ಹಾಗಾಗಿ ಮತ್ತೊಂದು ಬಾರಿ, ಕೊನೆಯ ಬಾರಿ, ಎಲ್ಲವನ್ನೂ ಕಣ್ತುಂಬಿಕೊAಡೆ.



ರಾತ್ರಿ ಸುಮಾರು ಒಂದು ಗಂಟೆಯ ಸಮಯ. ಯಾವುದೋ ದ್ವೀಪದ ಒಂದು ಪರ್ವತಶ್ರೇಣಿಯನ್ನು ನಮ್ಮ ಹಡಗು ದಾಟುತ್ತಿತ್ತು. ಅಂಟಾರ್ಟಿಕಾದ ದಕ್ಷಿಣ ದಿಗಂತದಲ್ಲಿ ಇದ್ದಕ್ಕಿದ್ದಂತೆ ಆ ಪರ್ವತಗಳ ಆಚೆಯಿಂದ ಕ್ಷೀಣವಾದ ಬೆಳಕೊಂದು ಕಾಣಿಸಿತು. ಇದೇನಿದು? ಯಾವುದಾದರೂ ಮತ್ತೊಂದು ಹಡಗು ನಮ್ಮತ್ತ ಬರುತ್ತಿದೆಯೇ? ಎಂದು ಊಹಿಸುವಷ್ಟರಲ್ಲಿ ಬೆಳಕು ಇಡೀ ಆಕಾಶವನ್ನು ಆವರಿಸಿತು! ನೋಡನೋಡುತ್ತಿದ್ದಂತೆಯೇ ಬಣ್ಣ ಬಣ್ಣದ ಛಾಯೆಗಳು ಆಕಾಶದ ದಕ್ಷಿಣ ಭಾಗವನ್ನು ವ್ಯಾಪಿಸಿದವು. ಇವಿಷ್ಟೂ ಕೇವಲ ೩೦-೪೦ ಸೆಕೆಂಡುಗಳಲ್ಲಿ ನಡೆದುಹೋದವು! ನನ್ನ ಜೀವಮಾನದಲ್ಲಿ ಅತ್ಯಂತ ಸಂತೋಷವಾದ ಘಳಿಗೆ ಇದು! ಮೊದಲ ಬಾರಿಗೆ ನಾನು ಂಡಿoಡಿಚಿ ಂusಣಡಿಚಿಟis ಎಂಬ ಅದ್ಭುತ ವಿದ್ಯಮಾನವನ್ನು ಕಂಡಿದ್ದೆ! ಕನ್ನಡದಲ್ಲಿ ಇದನ್ನು “ಭೂಕಾಂತ ಧ್ರುವ ಪ್ರಭೆ” ಎನ್ನುತ್ತಾರೆ. ಸೂರ್ಯನ ಮೇಲ್ಮೆöÊ ಮೇಲೆ ಏಳುವ ವಿದ್ಯುತ್ ಕಾಂತ ಅಲೆಗಳು ಭೂಮಿಯ ಧ್ರುವ ಪ್ರದೇಶಗಳ ವಾತಾವರಣವನ್ನು ಅಪ್ಪಳಿಸಿದಾಗ, ಭೂಮಿಯ ವಾಯುಮಂಡಲದ ಕಾಂತಗೋಳ(ಒಚಿgಟಿeಣiಛಿ sಠಿheಡಿe)ದಲ್ಲಿ ಉದ್ಭವವಾಗುವ ವಿದ್ಯುತ್ ಅಲೆಗಳು ಹೀಗೆ ವಾಯುಮಂಡಲವನ್ನು ಬೆಳಗುತ್ತವೆ. ಇವು ಮುಖ್ಯವಾಗಿ ಹಸಿರು, ಹಳದಿ, ಕೆಂಪು ಬಣ್ಣದ ಛಾಯೆಗಳಿಂದ ಕೂಡಿರುತ್ತವೆ. ಬಹಳ ಅಪರೂಪವಾಗಿ ಘಟಿಸುವ ಈ ವಿದ್ಯಮಾನವನ್ನು ಉತ್ತರ ಮತ್ತು ದಕ್ಷಿಣ ಧ್ರುವ ಪ್ರದೇಶಗಳಲ್ಲಿ ನಾವು ಕಾಣಬಹುದು.

ಸುತ್ತಲೂ ಮತ್ತೊಮ್ಮೆ ನೋಡಿದೆ. ನನ್ನ ಸಂತೋಷವನ್ನು ಹಂಚಿಕೊಳ್ಳಲು ಅಲ್ಲಿ ಯಾರೂ ಇರಲಿಲ್ಲ. ಓಡಿ ಹೋಗಿ ಕಿರಣನನ್ನು ಎಬ್ಬಿಸಲೆ? ಅವನು ಎಚ್ಚರಗೊಂಡು, ವೇಷ ಕಟ್ಟಿಕೊಂಡು ಮೇಲೆ ಬರಲು ಕನಿಷ್ಟ ೨೦ ನಿಮಿಷವಾದರೂ ಬೇಕು. ಅಷ್ಟರಲ್ಲಿ ಇದೆಲ್ಲಾದರೂ ಮಾಯವಾಗಿಬಿಟ್ಟರೆ? ಅಂದು ನಾನು ಕಂಡ ಧ್ರುವ ಪ್ರಭೆ ಸುಮಾರು ೨೨ ನಿಮಿಷ ಆಕಾಶವನ್ನು ಬೆಳಗಿತು. ¥s಼ÉÇÃಟೊ ತೆಗೆಯಲು ಯಾವ ಸಮಸ್ಯೆಯೂ ಇರಲಿಲ್ಲ. ನೇರವಾಗಿ ಯಾವುದೇ ಸಿದ್ಧತೆಯಿಲ್ಲದೆ ಆ ಕ್ಷಣವನ್ನು ಕ್ಯಾಮೆರಾದಲ್ಲಿ ಬಂಧಿಸಿದೆ. ಅಬ್ಬ! ಈ ವಿಸ್ಮಯಕರ ಘಟನೆಯನ್ನು ನೋಡಲು ನನ್ನೂರಿನಿಂದ ೧೪ ಸಾವಿರ ಕಿಲೋಮೀಟರು ಬರಬೇಕಾಯಿತಲ್ಲ! ಅರೋರಾ ಮಾಯವಾಗಿ ಪುನಃ ಕತ್ತಲೆ ಆವರಿಸಿತು. ತೃಪ್ತವಾದ, ಹಗುರವಾದ, ಆದರೆ ಅಷ್ಟೇ ಭಾರವಾದ ಮನಸ್ಸಿನಿಂದ ರೂಮಿಗೆ ಹಿಂದಿರುಗಿದೆ.

ಹಡಗಿನಲ್ಲಿ ಇದ್ದ ನಾಲ್ಕು ಂಗಿ ರೂಮ್‌ಗಳಲ್ಲಿ ನಮಗೆ ಪ್ರತಿದಿನ ದೈನಂದಿನ ಚಟುವಟಿಕೆಗೆಳು, ನೋಡಬಹುದಾದ ವೈಚಿತ್ರ÷್ಯಗಳು ಮತ್ತು ಪ್ರಾಣಿ-ಪಕ್ಷಿಗಳ ಬಗ್ಗೆ ಸವಿವರವಾಗಿ ವರ್ಣಿಸುತ್ತಿದ್ದರು. ಮಿಕಿ ಲೈವ್ ಎಂಬಾತ ಆ ಗೈಡ್‌ಗಳ ಮುಖ್ಯಸ್ಥ. ನೇರವಾಗಿ ಅವನಲ್ಲಿ ಹೋಗಿ, ಪ್ರತಿದಿನ ಇಷ್ಟೆಲ್ಲ ಹೇಳುವ ನೀವು ಆಕಾಶವೀಕ್ಷಣೆಯ ವಿಚಾರ ಹೇಳುವುದೇ ಇಲ್ಲವಲ್ಲ, ಏಕೆ? ಎಂದು ಕೇಳಿದೆ. ಕೇಳುವ ಆಸಕ್ತಿ ಎಷ್ಟು ಮಂದಿಗಿತ್ತೋ, ತಿಳಿಹೇಳುವ ಜನ ಅಲ್ಲಿರಲಿಲ್ಲ. ನೀವೇ ಹೇಳಿ ಎಂದು ನನ್ನನ್ನೇ ನೇಮಿಸಿದ. ಅಲ್ಲಿಂದ ಎರಡು ದಿನ ಹಗಲು ವೇಳೆಯಲ್ಲಿ ೩೦-೭೦ ಆಸಕ್ತರಿಗೆ ಲ್ಯಾಪ್‌ಟಾಪ್ ಮೂಲಕವೇ ವಿವರಿಸಿದೆ. ಆದರೆ ಹಿಂದಿರುವಾಗ, ಅಂಟಾರ್ಟಿಕಾದಿAದ ಉತ್ತರಕ್ಕೆ ನಮ್ಮ ಪ್ರಯಾಣ, ಬೇರೆ ವಿಧಿಯಿಲ್ಲದೆ, ಅಟ್ಲಾಂಟಿಕ್ ಸಾಗರದಲ್ಲಿಯೇ ಸಾಗಿದ್ದರಿಂದ, ರಾತ್ರಿ ವೇಳೆ ಬಿರುಸು ಗಾಳಿ, ತೀವ್ರ ಅಲೆಗಳ ಕಾರಣ ಯಾರೊಬ್ಬರೂ ಹೊರಗೆ ಹೋಗದಂತೆ ನಿರ್ಬಂಧ ಹಾಕಲಾಗಿತ್ತು. ೩೦-೩೩ ಅಡಿಗಳಷ್ಟು ಎತ್ತರದ ಅಲೆಗಳು, ೨೦೦-೨೫೦ ಕಿಮೀ ವೇಗದ ಗಾಳಿ, ನಮ್ಮ ದೈತ್ಯ ಹಡಗನ್ನೇ ನಡುಗಿಸಿಬಿಟ್ಟಿತ್ತು!


ವಿರಾಜಪೇಟೆ ತಾಲ್ಲೂಕು ೯ನೇ ಕನ್ನಡ ಸಾಹಿತ್ಯ ಸಮ್ಮೇಳನ- ಸಮ್ಮೇಳನಾಧ್ಯಕ್ಷರ ಭಾಷಣ

ವಿರಾಜಪೇಟೆ ತಾಲ್ಲೂಕು ೯ನೇ ಕನ್ನಡ ಸಾಹಿತ್ಯ ಸಮ್ಮೇಳನ

ಶನಿವಾರ, ೨೧ ಜನವರಿ ೨೦೨೩

ಮೊರಾರ್ಜಿ ದೇಸಾಯಿ ವಸತಿ ಶಾಲೆ, ಆರ್ಜಿ ಗ್ರಾಮ, ದ. ಕೊಡಗು.

ಸಮ್ಮೇಳನಾಧ್ಯಕ್ಷರ ಭಾಷಣ

ಹಣ್ಣನೀವ ಕಾಯನೀವ ಪರಿಪರಿಯ ಮರಂಗಳೊ

ಪತ್ರಮೀವ ಪುಷ್ಪಮೀವ ಲತೆಯ ತರತರಂಗಳೊ||

ಅಲೆಯ ಮಲೆಯ ಗಾಳಿಯೊ ಖಗಮೃಗೋರಗಾಳಿಯೊ

ನದಿನಗರನಗಾಳಿಯೊ ಇಲ್ಲಿಲ್ಲದುಳಿದುದೆ||

ಜೇನು ಸುರಿವ ಹಾಲು ಹರಿವ ದಿವಂ ಭೂಮಿಗಿಳಿದುದೆ?

_ ಮಂಜೇಶ್ವರರ ಽಕನ್ನಡಿಗರ ತಾಯಿ'ಯಿಂದ

ಕೊಡಗಿನ ಸಾರಸ್ವತ ಲೋಕದ, ಕನ್ನಡ ಸಾಹಿತ್ಯ ಸಮ್ಮೇಳನವೆಂಬ ಅನರ್ಘ್ಯ ಅಕ್ಷರ ಪೂಜೆಯ ಇಂತಹ ಶುಭ ಸಂದರ್ಭದಲ್ಲಿ, ಈ ಗೌರವಯುತ ಸ್ಥಾನ ನೀಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾಗೂ ಎಲ್ಲ ಪದಾಧಿಕಾರಿಗಳಿಗೂ ಮತ್ತು ಇದಕ್ಕೆ ಸರ್ವಾನುಮತದ ಮುದ್ರೆಯೊತ್ತಿದ ಸರ್ವ ಸಹೃದಯ ಮನಸ್ಸುಗಳಿಗೆ, ಮತ್ತು ನನ್ನೆಲ್ಲ ಪ್ರೀತಿಯ ಕೊಡಗಿನ ಅಕ್ಷರ ಪ್ರೇಮಿಗಳಿಗೆ, ನನ್ನ ಹೃದಯಾಂತರಾಳದ ನಮನಗಳು.

ಕನ್ನಡ ಭಾಷಾ ಸಾಹಿತ್ಯವು ವಿಶ್ವದ ಇನ್ನಾವುದೇ ಸಾಹಿತ್ಯಕ್ಕಿಂತ ಹೆಚ್ಚು ಶ್ರೀಮಂತವಾಗಿದೆ ಎಂದು ಭಾಷಾತಜ್ಞರು ಅಭಿಪ್ರಾಯ ಪಡುತ್ತಾರೆ. ಕನ್ನಡÀಕ್ಕೆ ಸುಮಾರು ಎರಡೂವರೆ ಸಾವಿರ ವರ್ಷಗಳ ಶಾಸನಾಧಾರಿತ ಮತ್ತು ಅಕ್ಷರರೂಪದ ಇತಿಹಾಸವಿದೆ. ಕನ್ನಡ ಭಾಷೆಯು ಬೆಳೆದು ಬಂದ ಹಾದಿಯ ಒಂದು ಪಕ್ಷಿನೋಟವನ್ನು ಬೀರೋಣ. ಕ್ರಿ.ಶ. ೨ನೇ ಶತಮಾನದಲ್ಲಿ ಈಜಿಪ್ಟ್ ದೇಶದಲ್ಲಿ ದೊರೆತ ಒಂದು ಗ್ರೀಕ್ ನಾಟಕದಲ್ಲಿ, ಕನ್ನಡ ಪದಗಳು ಲಭಿಸಿವೆ. ತಾಳಗುಂದ (ಕ್ರಿ.ಶ.೩೭೦) ಮತ್ತು ಹಲ್ಮಿಡಿ (ಕ್ರಿ.ಶ.೪೫೦) ಶಾಸನಗಳು ಕನ್ನಡದ ಪ್ರಾಚೀನತೆಯನ್ನು ಸಾರುತ್ತವೆ. ಕನ್ನಡಿಗರು "ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್' ಎಂದು ಕವಿರಾಜಮಾರ್ಗ (ಕ್ರಿ.ಶ.೮೫೦) ಜಂಭದಿAದ ಹೇಳುತ್ತದೆ! ಅಂದರೆ, ಅದಕ್ಕಿಂತ ಏನಿಲ್ಲವೆಂದರೂ ಎರಡು ಸಾವಿರ ವರ್ಷ ಹಿಂದೆಯೇ ಕನ್ನಡ ಭಾಷೆ ಮನೆಮಾತಾಗಿತ್ತೆಂದು ನಾವು ಊಹಿಸಬಹುದು.

ಶಾತವಾಹನ, ಕದಂಬ, ಗಂಗ, ಬಾದಾಮಿ ಚಾಲುಕ್ಯ, ರಾಷ್ಟçಕೂಟ, ಕಲ್ಯಾಣ ಚಾಲುಕ್ಯ, ಹೊಯ್ಸಳ, ಯಾದವ, ಕುಮ್ಮಟದುರ್ಗ, ಕಾಕತೀಯ, ವಿಜಯನಗರ, ಕೆಳದಿ, ಮೈಸೂರು ಮೊದಲಾದ ಕರ್ನಾಟಕ ಸಾಮ್ರಾಜ್ಯದ ದೊರೆಗಳು ಕನ್ನಡ ಕವಿಗಳಿಗೆ ರಾಜಾಶ್ರಯವನ್ನು ನೀಡಿ, ಪ್ರೋತ್ಸಾಹಿಸಿ, ಕನ್ನಡದ ಬೆಳವಣಿಗೆಗೆ ಕೈಜೋಡಿಸಿದರು. ಇಡೀ ಭಾರತ ದೇಶ ಕಂಡ ಅತ್ಯಂತ ಶ್ರೇಷ್ಠ ಕವಿಗಳು ಈ ಕನ್ನಡನಾಡಿನಲ್ಲಿ ಜನಿಸಿದ್ದಾರೆ ಎನ್ನುವುದೇ ಹೆಮ್ಮೆಯ ವಿಷಯ!

ಣುಣುಪಾದ ದುಂಡಾದ ಲಿಪಿಯ ಕರ್ಮಾಟಕ|

ದನುಪಮ ರಳಕುಳವೆರಸಿ||

ಮನುಜರ ದೇವರಜೀವರಾಶಿಯ ಶಬ್ದ|

ದನುಪಮ ಪ್ರಾಕೃತ ದ್ರವಿಡ||

_ ಕುಮುದೇಂದು ಮುನಿ

ಶ್ರೀವಿಜಯ, ಪಂಪ, ಪೊನ್ನ, ರನ್ನ, ಹರಿಹರ, ರಾಘವಾಂಕ, ಜನ್ನ, ಕೇಶಿರಾಜ, ಕುಮಾರವ್ಯಾಸ ಮುಂತಾದವರು ಕನ್ನಡವನ್ನು ತಮ್ಮ ಅದ್ಭುತ ಕೃತಿಗಳಿಂದ ಶ್ರೀಮಂತಗೊಳಿಸಿದರು. ರಾಮಾಯಣ, ಭಾಗವತ, ಮಹಾಭಾರತ, ವೇದ-ಉಪನಿಷತ್ತುಗಳು, ಬೌದ್ಧ, ಜೈನ, ಮುಂತಾದ ವಿವಿಧ ಮತಗಳ ಸಾಹಿತ್ಯ ವಿಫುಲವಾಗಿ ರಚಿತಗೊಂಡವು. ಕ್ರಿ.ಶ. ಹನ್ನೊಂದನೆಯ ಶತಮಾನದ ದೇವರ ದಾಸಿಮಯ್ಯ, ಹನ್ನೆರಡನೆಯ ಶತಮಾನದ ಶಿವಶರಣರು, ಅದರಲ್ಲೂ ಬಸವಣ್ಣನವರ ಶಿವಾನುಭವ ಮಂಟಪದಲ್ಲಿ ಬೆಳೆದ ಅಲ್ಲಮ, ಅಕ್ಕಮಹಾದೇವಿ, ಮುಪ್ಪಿನ ಷಡಕ್ಷರಿ, ಚೆನ್ನಬಸವಣ್ಣ, ಸಿದ್ದರಾಮ, ಅಂಬಿಗರ ಚೌಡಯ್ಯ, ಮುಂತಾದವರು, ಅಲ್ಲದೆ ನಿಜಗುಣ ಶಿವಯೋಗಿ, ತ್ರಿಪದಿUಳ ಮೂಲಕ ಸರ್ವಜ್ಞ , ವಚನ ವಾಙ್ಮಯವನ್ನು ವಿಫುಲಗೊಳಿಸಿದರು. ಆ ನಂತರ ಶ್ರೀಪಾದರಾಯರು, ವ್ಯಾಸರಾಜರು, ಪುರಂದರದಾಸ, ಕನಕದಾಸ, ಜಗನ್ನಾಥದಾಸರಿಂದ ಬೆಳೆದ ದಾಸ ಸಾಹಿತ್ಯವಂತೂ ಶಾಸ್ತಿçÃಯ ಸಂಗೀತಕ್ಕೆ ತಳಹದಿಯನ್ನು ಹಾಕಿಕೊಟ್ಟಿತು. ಎಂಟನೆಯ ಶತಮಾನದ ಜೈನ ಮುನಿ, ಕುಮುದೇಂದು, ಕನ್ನಡ ಅಂಕೆಗಳನ್ನು ಬಳಸಿ, ವಿಜ್ಞಾನದ ಚಕ್ರಬಂಧಗಳಲ್ಲಿ ರಚಿಸಿದ "ಸಿರಿ ಭೂವಲಯ‟ ಎಂಬ ಗ್ರಂಥ, ವಿಶ್ವದಲ್ಲಿಯೇ ಅತ್ಯಂತ ಅಪರೂಪದ ಅಂಕಾಕ್ಷರ ಗ್ರಂಥವಾಗಿದೆ!

ಇಪ್ಪತ್ತನೆಯ ಶತಮಾನದ ನವೋದಯ ಕಾಲದಲ್ಲಿ ಮುದ್ದಣ, ಬಿ.ಎಂ.ಶ್ರೀ, ದೇವುಡು, ಕೈಲಾಸಂ, ಅನಕೃ, ಕುವೆಂಪು, ಬೇಂದ್ರೆ, ಗೋವಿಂದ ಪೈ, ಡಿ.ವಿ.ಗುಂಡಪ್ಪ, ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ತರಾಸು, ಆಲೂರು ವೆಂಕಟರಾವ್, ವಿ.ಸೀತಾರಾಮಯ್ಯ, ವೆಂಕಟರಾಮಯ್ಯ, ಪು.ತಿ.ನ., ಕಟ್ಟೀಮನಿ, ಚೆನ್ನಪ್ಪ ಉತ್ತಂಗಿ, ರಾಜರತ್ನಂ, ರಾಶಿ, ಕಸ್ತೂರಿ, ಕೆ.ಎಸ್À.ನರಸಿಂಹಸ್ವಾಮಿ, ತ್ರಿವೇಣಿ, ಮುಳಿಯ, ಜಿ.ಎಸ್.ಶಿವರುದ್ರಪ್ಪ, ಗೋಕಾಕ್, ಕಂಬಾರ, ಹೀಗೆ ಅಸಂಖ್ಯ ಕವಿಗಳು, ಬರಹಗಾರರು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದರು. ರೆವರೆಂಡ್ ಕಿಟ್ಟೆಲ್‌ರವರ ಕನ್ನಡ-ಇಂಗ್ಲಿಷ್ ನಿಘಂಟು ಶಬ್ದಕೋಶಗಳಿಗೆ ಮಾದರಿಯಾಯಿತು. ಇವುಗಳೊಂದಿಗೇ ಬೆಳೆದು ಬಂದಿರುವ ಜಾನಪದ ಸಾಹಿತ್ಯವಂತೂ ಇಡೀ ಕನ್ನಡ ಸಾಹಿತ್ಯನಿಧಿಗೆ ಗ್ರಾಮ್ಯ ಸೊಗಡನ್ನು ನೀಡಿದೆ! ಹೊಸಗನ್ನಡ ಕಾವ್ಯ, ಕಥಾಸಾಹಿತ್ಯ, ಶಿಶುಸಾಹಿತ್ಯ, ಕನ್ನಡ ನಾಟಕ, ಪ್ರವಾಸ, ಆಧ್ಯಾತ್ಮಿಕ ಸಾಹಿತ್ಯ, ಮಹಿಳಾ ಸಾಹಿತ್ಯ, ವೈಜ್ಞಾನಿಕ ಸಾಹಿತ್ಯ, ಪತ್ತೇದಾರಿ ಸಾಹಿತ್ಯ, ಬಂಡಾಯ ಸಾಹಿತ್ಯ, ದಲಿತ ಸಾಹಿತ್ಯ, ಲಲಿತ ಸಾಹಿತ್ಯ, ಹೀಗೆ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿಯೂ ಕನ್ನಡದ ಸೃಜನಶೀಲ ಬರಹಗಳಿಂದÀ ನಮ್ಮ ಕನ್ನಡ ನುಡಿ ಭಂಡಾರ ಇಂದು ತುಂಬಿ ತುಳುಕುತ್ತಿದೆ. ಇವೆಲ್ಲವೂ ಸೇರಿ, ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನೂ, ಎರಡು ಸರಸ್ವತಿ ಸಮ್ಮಾನಗಳನ್ನೂ ಮತ್ತು ಶಾಸ್ತಿçÃಯ ಭಾಷೆಯೆಂಬ ಹೆಗ್ಗಳಿಕೆಯನ್ನೂ ಗಳಿಸಿಕೊಟ್ಟಿವೆ!

ಕೊಡಗಿನ ಮಟ್ಟಿಗೆ ಹೇಳುವುದಾದರೆ, ನಾಡನ್ನಾಳಿದ ಲಿಂಗಾಯತ ಅರಸರು, ಕೊರವಂಡ ಅಪ್ಪಯ್ಯ, ನಡಿಕೇರಿಯಂಡ ಚಿನ್ನಪ್ಪ, ಹರದಾಸ ಅಪ್ಪಚ್ಚಕವಿ, ಕೊಡಗಿನ ಗೌರಮ್ಮ, ಭಾರತೀಸುತ, ಕಾಕೆಮಾನಿ, ಬಿ.ಡಿ.ಗಣಪತಿ, ಪಂಜೆ ಮಂಗೇಶರಾಯರು, ಡಿ.ಎನ್.ಕೃಷ್ಣಯ್ಯ, ಐ.ಮಾ.ಮುತ್ತಣ್ಣ, ಜಿ.ಟಿ.ನಾರಾಯಣರಾವ್, ಇನ್ನಿತರರು ಕೊಡಗಿನ ಸಾಹಿತ್ಯಕ್ಕೆ ಅಮೂಲ್ಯ ಕಾಣಿಕೆ ಸಲ್ಲಿಸಿದ್ದಾರೆ.

ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು

ಹೊಸ ಯುಕ್ತಿ ಹಳೆ ತತ್ತ÷್ವ ದೊಡಗೂಡೆ ಧರ್ಮ |

ಋಷಿವಾಕ್ಯದೊಡನೆ ವಿಜ್ಞಾನಕಲೆ ಮೇಳಯಿಸೆ

ಜಸವು ಜೀವನಕೆ ಮಂಕುತಿಮ್ಮ ||

_ ಡಿ. ವಿ. ಗುಂಡಪ್ಪ

ಹದಿನೈದಿಪ್ಪತ್ತು ವರ್ಷಗಳ ಹಿಂದಿನವರೆಗೂ ಮುದ್ರಣಾಲಯದಲ್ಲಿ, ಅಲ್ಲಿಯ ಸಿಬ್ಬಂದಿಗಳು ಪ್ರತಿಯೊಂದು ಅಕ್ಷರದ ಮೊಳೆಯನ್ನೂ ಹೆಕ್ಕಿ ಹೆಕ್ಕಿ ಜೋಡಿಸಿ ಪುಟಗಳನ್ನು ಮುದ್ರಿಸಬೇಕಿತ್ತು. ಎರಡು-ಮೂರು ಬಾರಿ ತಪ್ಪೊಪ್ಪುಗಳ ತಪಾಸಣೆ, ಮರು ಹೊಂದಾಣಿಕೆ, ಇವುಗಳ ಜಂಜಾಟದಲ್ಲಿ ಸಾಕಷ್ಟು ಶ್ರಮ ಮತ್ತು ಸಮಯ ವ್ಯರ್ಥವಾಗುತ್ತಿತ್ತು. ಆ ಸಾಹಿತ್ಯ ರಚನೆಗಳಲ್ಲಿ ಅಲ್ಲಲ್ಲಿ ಮುದ್ರಾರಾಕ್ಷಸನ ಹಾವಳಿಯನ್ನು ನಾವು ಕಾಣಬಹುದಾಗಿತ್ತು. ಇವೆಲ್ಲ ಅಸೌಕರ್ಯಗಳ ನಡುವೆಯೂ ಸುಂದರವಾದ, ತಪ್ಪಿಲ್ಲದ ಲಕ್ಷಾಂತರ ಕನ್ನಡ ಪುಸ್ತಕÀಗಳು ಪ್ರಕಟಗೊಂಡಿವೆ.

ಇದು ಡಿಜಿಟಲ್ ಯುಗ! ಬರಹಗಾರರು ಮೆದುಳಿಗೆ ಹೊಳೆದದ್ದನ್ನು ನೇರವಾಗಿ ಕೀಲಿಮಣೆಯ ಸಹಾಯದಿಂದ ಬರೆಯಬಹುದು. ಲೇಖನಿ ಹಿಡಿದ ಕೈ ಇಂದು ಕೀಲಿಮಣೆಯೊಂದಿಗೆ ಆಡುತ್ತಿವೆ. ಇಂದು ಬರಹ, ನುಡಿ, ಆಕೃತಿ, ಕುವೆಂಪು ಮುಂತಾದ ತಂತ್ರಾAಶಗಳು ಲಭ್ಯವಿವೆ. ಈ ತಂತ್ರಾAಶಗಳನ್ನು ಬಳಸಿಕೊಂಡು, ಗಣಕ ಯಂತ್ರಗಳ ಸಹಾಯದಿಂದ ಸುಂದರವಾದÀ ಪುಟಗಳ ರಚನೆ, ವಿವಿಧ ಕನ್ನಡ ಅಕ್ಷರ ವಿನ್ಯಾಸ, ಪಂಕ್ತಿಗಳನ್ನು ಎಲ್ಲಿ ಬೇಕೆಂದರಲ್ಲಿ ಮರುಜೋಡಿಸುವ, ತಪ್ಪೊಪ್ಪುಗಳನ್ನು ಪರದೆಯ ಮೇಲೆಯೇ ನೋಡಿ, ಅಲ್ಲಿಗಲ್ಲಿಯೇ ಸರಿಪಡಿಸುವ ಸೌಕರ್ಯವಿದೆ. ಲೇಖಕನೇ ಇರಲಿ, ಕವಿಯೇ ಇರಲಿ, ತಾನು ಬರೆದ ಲೇಖನ, ಕವನ ಸಂಕಲನ, ಕಾದಂಬರಿ, ಮತ್ತಾವುದೇ ವಸ್ತುವನ್ನು ನೇರವಾಗಿ ಮುದ್ರಣಾಲಯಕ್ಕೆ ಕಳುಹಿಸುವ ಸೌಲಭ್ಯವಿದೆ.

ವಿದ್ಯುನ್ಮಾನ ಮಾಧ್ಯಮಗಳು ಬಂದ ಮೇಲಂತೂ ಕನ್ನಡ ಸಾಹಿತ್ಯ ರಚನೆಯು ಹೊಸ ರೂಪವನ್ನು ಪಡೆದುಕೊಳ್ಳುತ್ತಿದೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಉದಯೋನ್ಮುಖ ಕವಿಗಳು, ಬರಹಗಾರರು, ಮತ್ತು ಆರ್ಥಿಕ ಸಂಕಷ್ಟದಿAದ ಪುಸ್ತಕರೂಪದಲ್ಲಿ ತಮ್ಮ ಕೃತಿಯನ್ನು ಹೊರತರಲಾಗದವರು, ಇ-ಮೇಯ್ಲ್, ಬ್ಲಾಗ್, ಫೇಸ್ ಬುಕ್, ವಾಟ್ಸ್ ಆಪ್, ಇನ್ಸಾ÷್ಟಗ್ರಾಮ್ ಮುಂತಾದ ಮಾಧ್ಯಮಗಳ ಮೂಲಕ ಪ್ರಕಟಿಸಿ, ಸಾಹಿತ್ಯಕೃಷಿಯನ್ನು ಮಾಡುತ್ತಿದ್ದಾರೆ.

ಇಂದು ಅಂಗೈಯಲ್ಲಿಯೇ ಅರಮನೆಯನ್ನು ತೋರುವ ಸ್ಮರ‍್ಟ್ ಫೋನ್ ಎಂಬ ಅದ್ಭುತ ಯಂತ್ರದಲ್ಲಿ ಉತ್ತಮ ನಿಘಂಟುಗಳನ್ನಿರಿಸಿಕೊAಡು, ಕನ್ನಡದ ಕ್ಲಿಷ್ಟ ಪದಗಳಿಗೆ ಅರ್ಥವನ್ನೂ, ರ‍್ಯಾಯ ಪದಗಳನ್ನೂ ಸುಲಭದಲ್ಲಿ ಹುಡುಕಬಹುದಾಗಿದೆ. ಹೀಗೆ ಕನ್ನಡ ಭಾಷೆಯನ್ನು ಬೆಳೆಸುವಲ್ಲಿ ಅಂತರ್ಜಾಲ ಮಾಧ್ಯಮಗಳೂ ಉತ್ತಮ ಪ್ರಯತ್ನವನ್ನು ಮಾಡುತ್ತಿವೆ. ಅಲ್ಲದೆ ಹಲವಾರು ಕನ್ನಡದ ಕೃತಿಗಳನ್ನು ಅಂತರ್ಜಾಲದ ಮೂಲಕ ವರ್ಗಾಯಿಸಿಕೊಂಡು ಅಧ್ಯಯನ ಮಾಡುವ ಸೌರ‍್ಯವೂ ಲಭ್ಯವಿದೆ. ಕನ್ನಡಿಗರಿಗೆ ಕನ್ನಡ ಸಾಹಿತ್ಯಾಸ್ವಾದನೆಗೆ ಇಷ್ಟೆಲ್ಲ ವ್ಯವಸ್ಥೆಗಳಿದ್ದರೂ ಕರ್ನಾಟಕದಲ್ಲಿ ನಿರೀಕ್ಷಿತ ಪ್ರಮಾಣದ ಬೆಳವಣಿಗೆ ಕಂಡುಬರುತ್ತಿಲ್ಲ ಎಂಬುದೇ ವಿಷಾದಕರ ಸಂಗತಿ. ಕನ್ನಡ ಸಾರಸ್ವತ ಜಗತ್ತನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಬೇಕು, ಅದು ಸತತವಾಗಿ ಶ್ರೀಮಂತಗೊಳ್ಳುತ್ತಿರಬೇಕು ಎನ್ನುವುದು ಎಲ್ಲ ಕನ್ನಡಾಭಿಮಾನಿಗಳ ಕನಸಾಗಬೇಕು. ಕನ್ನಡ ಸಾಂಸ್ಕೃತಿಕ ಹಬ್ಬವೇ ಆಗಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಈ ದಿನ, ಈ ಬಗ್ಗೆ ಪ್ರಾಮಾಣಿಕವಾಗಿ ಯೋಚಿಸುವುದು ಅತ್ಯಂತ ಉಚಿತವಾಗಿದೆ.

ನಾವಿಂದು ಹಲವಾರು ಕನ್ನಡದ ತಂತ್ರಾAಶಗಳು ಉಚಿತವಾಗಿಯೇ ಪಡೆಯಬಹುದಾಗಿದೆ. ಜಸ್ಟ್ಕನ್ನಡ, ಇಂಡಿಕ್, ನುಡಿ, ಬರಹ, ಮತ್ತು ಹತ್ತಾರು ಕನ್ನಡ ಕೀಲಿಮಣೆ ತಂತ್ರಾAಶಗಳು ಲಭ್ಯವಿವೆ. ಆದ್ದರಿಂದ ಈವತ್ತು “ನಡೆ ಕನ್ನಡ, ನುಡಿ ಕನ್ನಡ ಮಾತ್ರವಷ್ಟೇ ಅಲ್ಲ, ಬೆರಳ್ ಕನ್ನಡ”ವೂ ಆಗಬೇಕಾಗಿದೆ! ಕನ್ನಡಿಗರಿಗೆ ಕನ್ನಡವೇ ಸಹಜ. ಕನ್ನಡವು ಇಂಗ್ಲೀಷ್ ಭಾಷೆಯ ವ್ಯಾಪಕತೆಯನ್ನು ಸಂಪಾದಿಸುವವರೆಗೆ ಸಂಸ್ಕೃತಿ ವರ್ಧನೆಗಾಗಿ ಇಂಗ್ಲಿಷ್ ವ್ಯಾಮೋಹ ತಪ್ಪಿದ್ದಲ್ಲ. ಕನ್ನಡಕ್ಕೆ ಈ ಕೀರ್ತಿಯನ್ನು ತರಬೇಕಾದರೆ, ಕನ್ನಡಿಗರೇ ಕಂಕಣಬದ್ಧರಾಗಬೇಕು. _ ವಿ. ಕೃ. ಗೋಕಾಕ್

ಭಾರತದ ಎಲ್ಲಾ ಭಾಷೆಗಳ ಅಕ್ಷರಮಾಲೆಗಳಿಗೂ ಸಂಸ್ಕೃತವೇ ಆಧಾರ. ಈ ಭಾಷೆಗಳನ್ನು ನಾವು ಹೇಗೆ ಉಚ್ಛರಿಸುತ್ತೇವೆಯೋ, ಅದನ್ನು ಹಾಗೆಯೇ ಬರೆಯುತ್ತೇವೆ. ಆದರೆ, ಕನ್ನಡ ಭಾಷೆಗೆ ಮತ್ತೂ ಹೆಚ್ಚಿನ ಮಹತ್ವವಿದೆ. ಕನ್ನಡ ಭಾಷೆ ಸಂಸ್ಕೃತವನ್ನೂ ಮೀರಿದೆ ಎಂದರೂ ತಪ್ಪಾಗಲಾರದು! ಸಂಸ್ಕೃತದÀಲ್ಲಿಲ್ಲದ ಎ-ಏ, ಒ-ಓ, ಲ-ಳ ಹಾಗೂ ಹಳೆಗನ್ನಡದ ¾ ಮತ್ತು ¿ ಅಕ್ಷರಗಳು ಕನ್ನಡದ್ದೇ! ಇದರೊಂದಿಗೆ ನಾಲ್ಕಾರು ಅರ್ಧಾಕ್ಷರಗಳನ್ನು ಹೊಂದಿಸಿಕೊAಡುಬಿಟ್ಟರೆ, ಮಾನವನ ಕೊರಳಿನಿಂದ ಹೊರಡುವ ಎಲ್ಲ ಧ್ವನಿಗಳನ್ನೂ ಕನ್ನಡದಲ್ಲಿ ಅಕ್ಷರರೂಪದಲ್ಲಿ ಬರೆಯಬಹುದು! ಹಾಗಾಗಿ ಕನ್ನಡದ ಧ್ವನಿಭಂಡಾರವನ್ನು ಬಳಸಿಕೊಂಡು ಪ್ರಪಂಚದ ಎಲ್ಲಾ ಭಾಷೆಗಳನ್ನೂ ಅಕ್ಷರಗಳಲ್ಲಿ ಬರೆಯುವ ಸಾಮರ್ಥ್ಯ ಕನ್ನಡಕ್ಕಿದೆ!

"ಇಂದು ಪ್ರಪಂಚದಲ್ಲಿ ಪ್ರಚಲಿತವಿರುವ ಭಾಷೆಗಳಲ್ಲೆಲ್ಲ ಅತ್ಯಂತ ವೈಜ್ಞಾನಿಕ ತಳಹದಿಯ ಮೇಲೆ ರಚನೆಯಾದ, ಗಣಕ ತಾಂತ್ರಿಕತೆಗೆ ಅತ್ಯಂತ ಸರಳವೂ, ಪೂರಕವೂ ಆದ ಮತ್ತು ಎಲ್ಲಕ್ಕಿಂತಲೂ ಅತಿಶಯವಾಗಿ, ಪರಿಪೂರ್ಣವಾದ ಭಾಷೆ ನಮ್ಮ ಕನ್ನಡ!"

ಗಣಕಯಂತ್ರದ ಈ ಕಾಲಘಟ್ಟದಲ್ಲಿ ಸದ್ದಿಲ್ಲದೆ ಮತ್ತೊಂದು ಬೆಳವಣಿಗೆಯಾಗಿದೆ. ಕಂಪ್ಯೂಟರ್ ವಿಜ್ಞಾನಿಗಳು ಈಗ ಒಂದು ಹೊಸ ತಂತ್ರಾAಶವನ್ನು ಸಿದ್ಧಪಡಿಸಿದ್ದಾರೆ. ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್‌ನಲ್ಲಿ ಈ ತಂತ್ರಾAಶವನ್ನು ಅಳವಡಿಸಿಕೊಂಡು ಬಿಟ್ಟರೆ, ನೀವು ಯಾವುದೇ ಭಾಷೆಯಲ್ಲಿ ಮಾತನಾಡಿದರೂ ಅದೆಲ್ಲವನ್ನೂ ಕನ್ನಡದಲ್ಲಿ ಬರೆಯುತ್ತದೆ! ಇದಕ್ಕೆ ಖಿಡಿಚಿಟಿs Phoಟಿeಣiಛಿ ಐiಣeಡಿಚಿಣioಟಿ ಅಥವಾ ಸ್ಪೀಚ್ ಟು ಟೆಕ್ಸ್÷್ಟ ಅಂದರೆ, ಽಧ್ವನಿಯಿಂದ ಪಠ್ಯ‟ ತಂತ್ರಜ್ಞಾನ ಎನ್ನುತ್ತಾರೆ. ಕನ್ನಡಕ್ಕಿರುವ ಈ ಅನರ್ಘ್ಯ ಸಾಮರ್ಥ್ಯವನ್ನು ಮನಗಂಡು ೯೦ರ ದಶಕದಲ್ಲಿಯೇ ಇದಕ್ಕೊಂದು ಂಟgoಡಿiಣhm ಅಂದರೆ, ಽಶಿಷ್ಟಾಚಾರದ ನೀತಿಸಂಹಿತೆ‟ಯನ್ನು ಬರೆದು ಹಲವು ಕಂಪ್ಯೂಟರ್ ವಿಜ್ಞಾನಿಗಳಿಗೆ ಕಳುಹಿಸಿದ್ದೆ. ಅದು ಇಂದು ಫಲ ನೀಡಿದೆ. ಇಷ್ಟಾಗಿಯೂ ಇಂದಿನ ದಿನಪತ್ರಿಕೆಗಳು, ನಿಯತಕಾಲಿಕಗಳು, ಕಥೆ-ಕಾದಂಬರಿಗಳು ವ್ಯಾಕರಣ, ಕಾಗುಣಿತ, ಚಿಹ್ನೆ, ಅಕ್ಷರವಿನ್ಯಾಸ, ಏಕರೂಪದ ಪಠ್ಯ, ಮೊದಲಾದುವುಗಳಿಂದ ದೂರವಾಗಿವೆ. ಕನ್ನಡ ಬರಹಗಾರರು, ಕನ್ನಡ ಕೀಲಿಮಣೆ ಬಳಸುವ ಸಿಬ್ಬಂದಿಗಳು, ಮುದ್ರಣಾಲಯದ ನೌಕರವರ್ಗದವರು, ಮುಂತಾದವರಿಗೆ ಕನ್ನಡದ ಬಗ್ಗೆ ಅವಜ್ಞೆ, ತಾತ್ಸಾರ-ಉಪೇಕ್ಷೆಯೇ ಇದಕ್ಕೆ ಕಾರಣ. ಕನ್ನಡ ತಂತ್ರಜ್ಞಾನದಲ್ಲಿ ಇಷ್ಟೆಲ್ಲ ಅನುಕೂಲತೆಗಳಿದ್ದೂ ಮುದ್ರಣಗಳಲ್ಲಿ ತಪ್ಪುಗಳು ಕಾಣಿಸಿಕೊಂಡರೆ, ಅದು ಅಕ್ಷಮ್ಯ ಎಂದೇ ನಾವು ಭಾವಿಸಬೇಕು.

ಹಿತವಂ ತೋರುವನಾತ್ಮಬಂಧು ಪೊರೆವಾತಂ ತಂದೆ ಸದ್ಧರ್ಮದಾ

ಸತಿಯೇ ಸರ್ವಕೆ ಸಾಧನಂ ವರ್ಣಮಾತ್ರಂ ಕಲಿಸಿದಾತಂ ಗುರು|

ಶೃತಿಮಾರ್ಗಂ ಬಿಡದಾತ ಸುವೃತಿ ಮಹಾಸದ್ವಿದ್ಯೆಯೇ ಪುಣ್ಯದಂ

ಸುತನೇ ಸದ್ಗತಿದಾತನೈ ಹರಹರಾ ಶ್ರೀಚೆನ್ನಸೋಮೇಶ್ವರಾ||

- ಸೋಮೇಶ್ವರ ಶತಕ

ಇಂದು ಇಡೀ ಕರ್ನಾಟಕದಲ್ಲಿ ಒಂದು ರೀತಿಯ ಬೇಸರದ ಪರಿಸ್ಥಿತಿ ಕಂಡುಬರುತ್ತಿದೆ. ಎಲ್ಲೆಡೆ ಇಂಗ್ಲೀಷ್ ವ್ಯಾಮೋಹವನ್ನು ನೋಡುತ್ತಿದ್ದೇವೆ. ಹೆತ್ತವರಿಗೆ, ಪೋಷಕರಿಗೆ ತಮ್ಮ ಮಕ್ಕಳು ಕನ್ನಡದ ಽಅ‟ ಕಲಿಯುವುದಕ್ಕೆ ಮುಂಚೆ ಇಂಗ್ಲೀಷಿನ ಽಎ‟ ಕಲಿಯುವುದೇ ದೊಡ್ಡಸ್ತಿಕೆಯ ವಿಷÀಯವಾಗಿದೆ! ಸಾರ್ವಜನಿಕ ವ್ಯವಹಾರಗಳಲ್ಲಿ, ಆಂಗ್ಲ ಭಾಷೆೆಯಲ್ಲಿ ಮಾತನಾಡುವುದು ಪ್ರತಿಷ್ಠೆಯ ಸಂಕೇತವಾಗಿದೆ. ಇಷ್ಟೇ ಅಲ್ಲದೆ, ಕನ್ನಡಿಗರು ಇತರ ಭಾಷಿಗರೊಂದಿಗೆ ಕನ್ನಡವನ್ನು ಬಿಟ್ಟು, ಅವರದ್ದೇ ಭಾಷೆಯಲ್ಲಿ ಮಾತನಾಡುವುದು ಹೆಚ್ಚುಗಾರಿಕೆಯೆಂದು ಭಾವಿಸುತ್ತಾರೆ. ಇದಕ್ಕಿಂತ ನಾಚಿಕೆಗೇಡಿನ, ಹುಂಬತನದ ವಿಷಯ ಮತ್ತೊಂದಿಲ್ಲ. ಇವೆÀಲ್ಲವೂ ನಮ್ಮ ಭಾಷೆಯ ಬಗ್ಗೆ ನಮಗಿರುವ ಅವಿಶ್ವಾಸ, ಉದಾಸೀನವೇ ಕಾರಣ.

ಕೊಡಗು ಹೇಗೆ ಒಂದು ಗಡಿ ಪ್ರದೇಶದ ಜಿಲ್ಲೆಯೋ, ಹಾಗೆಯೇ ಕೇರಳ, ತಮಿಳುನಾಡು, ಮಹಾರಾಷ್ಟç ಮುಂತಾದ ಕರ್ನಾಟಕ ರಾಜ್ಯದ ಗಡಿಗಳಲ್ಲಿ ಆಯಾ ರಾಜ್ಯಗಳ ಜಿಲ್ಲೆಗಳಿಲ್ಲವೆ? ಆ ಸ್ಥಳಗಳಲ್ಲಿ ಕನ್ನಡ ಮಾತನಾಡುವ ಜನ ಎಷ್ಟಿದ್ದಾರೆ? ಅವರಿಗಿರುವ ಭಾಷಾಭಿಮಾನ, ನುಡಿಯೊಲವು-ಅಕ್ಕರೆ ನಮಗೇಕಿಲ್ಲ? ಕನ್ನಡಿಗರು, ನಾವು, ಕನ್ನಡಕ್ಕಾಗಿ ಡಿಂಡಿಮ ಬಾರಿಸುತ್ತೇವೆ ಅವರು ಬೊಂಬಡ ಬಾರಿಸುತ್ತಾರೆ! ಅವರ ಕಾರ್ಯ ಸಾಧನೆಯಾಗುತ್ತದೆ.

ಮತ್ತೊಂದು ಗಹನವಾದ ಸಮಸ್ಯೆಯನ್ನು ನಾವು ಗಮನಿಸಬೇಕು. ಕೊಡಗಿನ ಪ್ರಸ್ತುತ ಕನ್ನಡದ ಪರಿಸ್ಥಿತಿಯನ್ನು ಗಮನಿಸೋಣ. ಸರ್ಕಾರದ ನಿಯಮದಂತೆ ಒಂಬತ್ತನೆಯ ತರಗತಿಯವರೆಗೆ ಯಾರೂ ಫೇಲಾಗುವಂತೆಯೇ ಇಲ್ಲ! ಸರ್ಕಾರಿ ಶಾಲೆಗಳನ್ನು ಹೊರತುಪಡಿಸಿದರೆ, ಎಲ್ಲೆಲ್ಲಿಯೂ ನಮಗೆ ಆಂಗ್ಲ ಮಾಧ್ಯಮ ಶಾಲೆಗಳೇ ಕಂಡು ಬರುತ್ತಿವೆ. ಈ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಕನ್ನಡ ಒಂದು ಪಠ್ಯವಷ್ಟೆ. ಒಂದು ಬಾರಿ ಹತ್ತನೆ ತರಗತಿಯನ್ನು ದಾಟಿಬಿಟ್ಟರೆ ಅವರಿಂದ ಕನ್ನಡವೂ ದೂರವಾಗಿ ಬಿಡುತ್ತದೆ. ಈ ವಿದ್ಯಾರ್ಥಿಗಳು ಕನ್ನಡವನ್ನು ಓದಲೂ ಬರೆಯಲೂ ಮರೆತೇ ಬಿಡುತ್ತಾರೆ. ಕನ್ನಡನಾಡಿನಲ್ಲಿ ಹುಟ್ಟಿ ಬೆಳೆದು, ಕಾವೇರಿಯ ನೀರನ್ನು ಕುಡಿದವರಾಗಿ, ಕನ್ನಡದವರಾಗಿ, ಕನಿಷ್ಠ ಕನ್ನಡವನ್ನು ಮಾತನಾಡಲೂ ಹಿಂಜರಿಯುವ ಇವರಿಗೆ ಕನ್ನಡದ ಬಗ್ಗೆ ಕೀಳರಿಮೆ ಏಕೆಂದು ನಾವು ಆಲೋಚಿಸಬೇಕು. ದಕ್ಷಿಣ ಕೊಡಗಿನಲ್ಲಿ ಮತ್ತೊಂದು ವಿಚಿತ್ರವಾದ-ವಿಶಿಷ್ಟವಾದ ಸನ್ನಿವೇಶವನ್ನು ಕಾಣುತ್ತೇವೆ. ಇಲ್ಲಿ ಮಲೆಯಾಳವನ್ನು ಮಾತನಾಡುವ ಜನ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಕನ್ನಡ ಮಾಧ್ಯಮದ ಶಾಲೆಗಳಲ್ಲಿಯೇ ಓದಿದರೂ, ಈ ಮಕ್ಕಳು ಮನೆಯಲ್ಲಿ, ಓರಗೆಯ ಮಿತ್ರರೊಂದಿಗೆ, ಸಹಪಾಠಿಗಳೊಂದಿಗೆ, ಮಲೆಯಾಳ ಭಾಷೆÉಯಲ್ಲಿಯೇ ಮಾತನಾಡುವುದರಿಂದ ಇವರಿಗೆಲ್ಲ ಸಹಜವಾಗಿಯೇ ಕನ್ನಡ ಭಾಷೆ, ತರಗತಿಗೆ ಮಾತ್ರ ಸೀಮಿತವಾಗಿರುತ್ತದೆ. ಹತ್ತನೆಯ ತರಗತಿ ದಾಟಿದರೆಂದರೆ, ಯಥಾಪ್ರಕಾರ ಇವರೆಲ್ಲ ಕನ್ನಡದಿಂದ ದೂರವಾಗುತ್ತಾರೆ. ಅದಕ್ಕಿಂತ ದುರಂತವೇನೆAದರೆ, ಜೀವನ ಪರ್ಯಂತ ಮಲೆಯಾಳ ಮಾತನಾಡುವ ಇವರು ಒಂದಕ್ಷರ ಮಲೆಯಾಳವನ್ನೂ ಓದಲು-ಬರೆಯಲು ಕಲಿತಿರುವುದಿಲ್ಲವಾದ ಕಾರಣ, ಒಂದು ರೀತಿಯಲ್ಲಿ ಅನಕ್ಷರಸ್ಥರಾಗಿಯೇ ಉಳಿದುಬಿಡುತ್ತಾರೆ! ಈ ನಿಟ್ಟಿನಲ್ಲಿ ನಾನು ಒಂದು ವಿಚಾರವನ್ನು ಒತ್ತಿ ಹೇಳಬೇಕಾಗಿದೆ. ವರ್ಣಮಾತ್ರಂ ಕಲಿಸಿದಾತಂ ಗುರು ಎಂಬ ಮಾತಿನಂತೆ, ಸಣ್ಣ ವಯಸ್ಸಿನಿಂದಲೇ ವಿದ್ಯಾರ್ಥಿಗಳಲ್ಲಿ ಕನ್ನಡದ ಬಗೆಗೆ ಪ್ರೀತಿ, ಅಭಿಮಾನ, ಅಭಿರುಚಿಗಳನ್ನು ಮೂಡಿಸುವಲ್ಲಿ ಪ್ರಾಥಮಿಕ ಶಿಕ್ಷಕರ ಜವಾಬ್ದಾರಿ ಬಹಳ ಗುರುತರವಾದದ್ದು. ಕನ್ನಡ ನಾಡು, ಭಾಷೆ, ಪರಂಪರೆ, ಹಿರಿಮೆ ಮುಂತಾದುವುಗಳನ್ನು ಹೇಳಿಕೊಡಲು ಆ ಶಿಕ್ಷಕರಿಗೆ ಇದರ ಸಲುವಾಗಿ, ವಿಶೇಷವಾದ ತರಬೇತಿಯೂ ಬೇಕಾಗಬಹುದು. ಮಕ್ಕಳ ಮೆದುಳಿನಲ್ಲಿ ಆ ಹಂತದಲ್ಲಿ ಕನ್ನಡ ಭದ್ರವಾಗಿ ನೆಲೆ ನಿಂತರೆ, ಅವರು ಕನ್ನಡವನ್ನು ಎಂದಿಗೂ ಮರೆಯುವುದಿಲ್ಲ. ಹಿಂದೆ ಪ್ರತಿಯೊಂದು ನಗರದಲ್ಲಿಯೂ ಕನ್ನಡ- ಕರ್ನಾಟಕ ಸಂಘಗಳಿದ್ದವು. ಯಾವುದೇ ಕನ್ನಡಪರ ಕಾರ್ಯಕ್ರಮವಾಗಲಿ, ಹೋರಾಟವಾಗಲಿ, ಚಳವಳಿಯಾಗಲಿ, ಕನ್ನಡದ ಕಟ್ಟಾಳುಗಳು ಮುಂದೆ ನಿಂತು ಕೈ ಜೋಡಿಸುತ್ತಿದ್ದರು. ಅಂತಹ ಕರ್ನಾಟಕ ಸಂಘಗಳು ಈವತ್ತು ಎಲ್ಲಿವೆ? ವಿರಾಜಪೇಟೆಯಲ್ಲಿ ಕನ್ನಡವನ್ನು ಕಟ್ಟಿ ಬೆಳೆಸಿದ ಡಿ.ಜೆ.ಪದ್ಮನಾಭ, ಡಾ. ಆಸ್ರಣ್ಣ, ಟೈಲರ್ ದಾಸ್, ಯತಿರಾಜು, ಮುಕುಂದ ಸಿಂಗ್, ಅರಮೇರಿ ಕಳಂಚೇರಿ ಮಠ, ತಾಲ್ಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಶ್ರೀ ಕೇಶವ ಭಟ್ ಇವರೆಲ್ಲರನ್ನೂ ಇಂದು ನಾವು ನೆನೆಸಿಕೊಳ್ಳಬೇಕು. ಕನ್ನಡ ಸಾಹಿತ್ಯವನ್ನು ಬೆಳೆಸಲು ಕನ್ನಡಿಗರೆಲ್ಲ ಮೊದಲು ಕನ್ನಡವನ್ನು ಮನಸಾರೆ ಪ್ರೀತಿಸಬೇಕು. ಕನ್ನಡ ಪುಸ್ತಕಗಳನ್ನು ಕೊಂಡು ಓದಬೇಕು. ಊರಿಗೊಂದಾದರೂ ಕನ್ನಡ ವಾಚನಾಲಯ ಹಾಗೂ ಕನ್ನಡ ಪುಸ್ತಕಗಳನ್ನು ಮಾರುವ ಅಂಗಡಿಯಿರಬೇಕು. ಕನ್ನಡ ಸಮ್ಮೇಳನಗಳಲ್ಲಿ ಅತ್ಯಂತ ಹೆಚ್ಚು ಪುಸ್ತಕ ವ್ಯಾಪಾರದ ಮಳಿಗೆಗಳ ವ್ಯವಸ್ಥೆಯಾಗಬೇಕು. ಪುಸ್ತಕ ಮಾರಾಟವೆಂಬುದು ಎಲ್ಲೆಡೆ ಒಂದು ವ್ಯಾಪಕ ಚಳವಳಿಯೇ ಆಗಬೇಕು! ಈ ನಿಟ್ಟಿನಲ್ಲಿ ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಪ್ರಾಧಿಕಾರ, ವಿವಿಧ ವಿಶ್ವವಿದ್ಯಾಲಯಗಳ ಪ್ರಸಾರಾಂಗಗಳು, ಪ್ರಕಾಶಕರು ಮುಂದಾಳತ್ವ ವಹಿಸಿ, ಮಾರ್ಗದರ್ಶಕರಾಗಬೇಕು. ಹಬ್ಬಹರಿದಿನಗಳಲ್ಲಿ, ಮದುವೆ ಸಮಾರಂಭಗಳಲ್ಲಿ, ಹುಟ್ಟುಹಬ್ಬದ ಆಚರಣೆಗಳ ಸಂದರ್ಭಗಳಲ್ಲಿ ಪುಸ್ತಕಗಳನ್ನು ಉಡುಗೊರೆಯಾಗಿ, ಹಾಗೂ ಶಾಲಾಕಾಲೇಜುಗಳ ಸ್ಪರ್ಧೆಗಳಲ್ಲಿ ಪುಸ್ತಕಗಳನ್ನು ಬಹುಮಾನಗಳ ರೂಪದಲ್ಲಿ, ಕೊಡುವ ಸಂಪ್ರದಾಯ ಬೆಳೆಯಬೇಕು. ಕನ್ನಡದಲ್ಲಿಯೇ ಬರೆಯೋಣ; ಕನ್ನಡ ಬಾರದಿರುವವರಿಗೆ ಕನ್ನಡ ಕಲಿಸೋಣ; ವ್ಯಾಪಾರಿಗಳೊಂದಿಗೆ, ಕೆಲಸದವರೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸೋಣ. “ಜಮ್ಮ ಕೊಡಗಿದು ನಮ್ಮದು” ಎಂಬ ಕವಿಯ ನುಡಿಯಂತೆ, ದಕ್ಷಿಣ ಕೊಡಗಿನ ನೆಲದ ಮೇಲೆ ನಡೆಯುತ್ತಿರುವ ೯ನೇ ವಿರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಕೊಡಗು ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವಾಧ್ಯಕ್ಷರಾದ ಶ್ರೀ ಕೇಶವ ಕಾಮತ್‌ರವರಿಗೆ, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷರಾದ ಶ್ರೀ ಡಿ.ಪಿ.ರಾಜೇಶ್Àರವರಿಗೆ, ಕಾರ್ಯದರ್ಶಿಗಳಾದ ಟೋಮಿ ಥಾಮಸ್ ಮತ್ತು ಶ್ರೀಮತಿ ಸಾವಿತ್ರಿ ಮತ್ತು ಇತರ ಎಲ್ಲ ಪದಾಧಿಕಾರಿಗಳಿಗೂ, ಪರಿಷತ್ತಿನ ಸರ್ವ ಸದಸ್ಯರಿಗೂ, ಕೊಡಗಿನ ಮಹಾಜನತೆಗೂ, ಇಲ್ಲಿ ನೆರೆದಿರುವ ಸಮಸ್ತ ಸಭಾಸದರಿಗೂ, ನಾಡಿನ ಎಲ್ಲೆಡೆಯಿಂದ ಬಂದಿರುವ ಬಂಧುಮಿತ್ರರಿಗೂ, ಎದೆತುಂಬಿ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಕೊನೆಯಲ್ಲಿ ಡಿ.ವಿ.ಜಿ.ಯವರ ಅಮರವಾಣಿಗೆ ದನಿಗೂಡಿಸುತ್ತ ಮಂಗಳ ಹಾಡುತ್ತೇನೆ.

ಕಾನನದಿ ಮಲ್ಲಿಗೆಯು ಮೌನದಿಂ ಬಿರಿದು ನಿಜಸೌರಭವ ಸೂಸಿ ನಲವಿಂ ತಾನೆಲೆಯ ಪಿಂತಿರ್ದು ದೀನತೆಯ ತೋರಿ ಅಭಿ ಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ || ವನಸುಮದೊಲೆನ್ನ ಜೀ ವನವು ವಿಕಸಿಸುವಂತೆ ಮನವನನುಗೊಳಿಸು ಗುರುವೇ ಹೇ ದೇವ || ಸಿರಿಗನ್ನಡಂ ಗೆಲ್ಗೆ!! ಜೈ ಭುವನೇಶ್ವರಿ!!

                                                                                                 _ ಡಾ| ಎಸ್. ವಿ. ನರಸಿಂಹನ್ ವಿರಾಜಪೇಟೆ, ದ. ಕೊಡಗು. ೯೪೮೦೭೩೦೮೮೪

Wednesday, October 8, 2025

WILDLIFE MESSAGES 2025

Behold the drama on the cosmic stage                                                                                                                                Infinite actors weaving their roles                                                                                                                                        A drama with no script no beginning nor end                                                                                                                    Every spectator an actor and part of the play                                                                                                                                                                                                                                                                                                                                                       - D. V. Gundappa's 'Mankuthimmana Kagga'

Friday, 26 September 2025

Dear friend,

 The world is a grand canvas and life is an epic drama unfolding upon it. Not only humans are participating in this drama, but all the lifeforms of creation are playing their roles. The characters are not one or two; billions of actors, each a unique entity, don vibrant, diverse roles, playing their parts with instinctual precision. Every role is of equal esteem and no role is inferior. The curtain rose on this cosmic spectacle eons ago and its finale remains a mystery shrouded in the mists of time. Every being inherits its script from the legacy of its predecessors, performing its role with authenticity and flair. When one act concludes, the transition begins and actors re-emerge, reborn, in new guises, ready to play their next part in the eternal dance if existence.

According to scientists, the concept of this theatrical began 13.8 billion years ago! On this platform called the Earth, the stage design, lighting system, decoration, selection of various characters, screenplay, stage rehearsal, etc. have taken billions of years to formulate. They say that the play that we see on Earth today, began about four billion years ago, when the first lifefom was born on the Earth.

Another perplexing thing about this narrative is that there is no specific storyline or theme for the play. No one knows whether it has happy ending or tragic finale! However, every moment of the play is thrilling with a wonderful scenario that constantly arouses curiosity about what will happen next!

The unique thing about this drama is that each character does not have a specific period for its role. For some creatures, it is just a few minutes; for the others, it may go on for hundred years! Each character begins as an innocent character and receives further training on this stage; learns what was taught, develops, and evolves to become a mature character. Having learned and understood its role, it displays it on the stage and becomes the target of the world's admiration, indifference, scorn, slander or accusation. It teaches what it has learned to the next generation, sifts through all that it has learned, carries the essence and prepares for another performance, and enters the stage again.

With great excitement and curiosity, we are watching the wonderful drama being performed on the earth, wondering what will happen next and how this story will continue tomorrow! We are totally captivated by the sequence of events and are lost in thought while watching. The irony is that we have forgotten that we too are part of this story and actors in this drama!

If we call this is a drama, shouldn't there be a director for this theatrical? Shouldn't there be a regisseur for this stageshow? Most of us believe that there is a divine force that pervades and governs the entire universe and is responsible this drama. We call him God. He selects the roles. He decides, who should continue and for how long. Those roles which are not contributing, those which are irrilavent, move permanently to backstage. And there are also those who think, if this eternal stageplay has a director remotely, or does it need one? And there are millions of living beings on this earth who think like them or cannot think at all!

There are people who try to disturb the fragile equilibrium of nature; spoilsports who kindle wrath in the society; who spoil its health. No wonder such people have been on earth since time immemorial. After all, a drama of this magnitude should comprise of all kinds of characters! We should always remember that the sole intention of the whole creation is to move from chaos to order, from darkness to light, from death to immortality, and ultimately towards excellence!

Let us join hands to make our only Earth, a place where all elements of life can live in health, happiness and harmony.

SPECIAL WILDLIFE MESSENGER OF THIS YEAR

Pheasant-tailed Jacana (Hydrophasianus chirurgus), found in tropical Asia, is an eye-catching waterbird found on lakes and ponds with extensive floating vegetation. They have elongated toes and nails that enable them to walk on floating vegetation.  Long-tailed breeding adults are striking: the large white wing patch and head contrast sharply with its black body and bright yellow neck patch. It forages on floating plants for insects, molluscs and seeds.  The bird is polyandrous, with females courting multiple males.  Its song, seldom heard, is a repeated, ringing ‘ku-woo’.

Hand-painted cards, Acrylic on Paper. Total: this year 1875; in 41 years 83,470. Total recipients: this year 1236; in 41 years 16,640.


ನಾಟಕವ ನೋಡು ಬ್ರಹ್ಮಾಂಡ ರಂಗಸ್ಥಲದಿ

ಕೋಟಿ ನಟರಾಂತಿಹರು ಚಿತ್ರ ಪಾತ್ರಗಳ |

ಆಟಕ್ಕೆ ಕಥೆಯಿಲ್ಲ ಮೊದಲಿಲ್ಲ ಕಡೆಯಿಲ್ಲ

ನೋಟಕರುಮಾಟಕರೆ – ಮಂಕುತಿಮ್ಮ ||

                                                                                                                                          - ಡಿ. ವಿ. ಗುಂಡಪ್ಪನವರ ‘ಮಂಕುತಿಮ್ಮನ ಕಗ್ಗ’

                                                                                                                                                             ಶುಕ್ರವಾರ, ೨೬ಸೆಪ್ಟೆಂಬರ್೨೦೨೫

ಮಿತ್ರರೆ,

ಇಡೀ ವಿಶ್ವವೇ ಒಂದು ಬೃಹತ್ ರಂಗಸ್ಥಳ. ಈ ವೇದಿಕೆಯಲ್ಲಿ ಬಹು ದೊಡ್ಡ ನಾಟಕವೇ ನಡೆಯುತ್ತಿದೆ. ಈ ನಾಟಕದಲ್ಲಿ ಕೇವಲ ಮನುಷ್ಯರು ಮಾತ್ರವೇ ಭಾಗವಹಿಸುತ್ತಿಲ್ಲ. ಸೃಷ್ಟಿಯ ಸಕಲ ಜೀವರಾಶಿಗಳೂ ಪಾತ್ರ ವಹಿಸುತ್ತಿವೆ. ಪಾತ್ರಧಾರಿಗಳು ಒಬ್ಬಿಬ್ಬರಲ್ಲ; ಚಿತ್ರವಿಚಿತ್ರ ವೇಷಗಳನ್ನು ಧರಿಸಿದ ಕೋಟಿ ಕೋಟಿ ನಟರು ತಮ್ಮ ತಮ್ಮ ಪಾತ್ರಗಳನ್ನು ಪ್ರಾಮಾಣಿಕವಾಗಿ ನಟಿಸುತ್ತಿದ್ದಾರೆ. ಪ್ರತಿಯೊಂದು ಜೀವಿಯೂ ಒಂದೊAದು ರೂಪ ಧರಿಸಿ ಈ ಜಗನ್ನಾಟಕದಲ್ಲಿ ನಟಿಸುತ್ತಿವೆ. ಎಲ್ಲ ಜೀವಿಗಳಿಗೂ ಒಂದೊAದು ಪಾತ್ರ ವಿಧಿತ. ಎಲ್ಲವೂ ಮಹತ್ವದ ಪಾತ್ರಗಳು; ಇಲ್ಲಿ ಯಾವುದೂ ನಿಕೃಷ್ಟವಲ್ಲ. ಇದು ಯಾವಾಗ ಶುರುವಾಯಿತು ಎನ್ನುವುದು ನಮ್ಮ ಊಹೆಗೂ ಮೀರಿದ್ದು ಮತ್ತು ಯಾವಾಗ ಮುಗಿಯುತ್ತದೆ ಎಂಬುದೂ ನಮ್ಮ ಊಹೆಗೆ ನಿಲುಕದ ವಿಚಾರ. ಎಲ್ಲ ಪಾತ್ರಧಾರಿಗಳೂ ತಾವು ಹಿಂದಿನಿAದ ಹೊತ್ತು ತಂದ ಪಾತ್ರವನ್ನು, ಗುಣ ಮತ್ತು ಸ್ವಭಾವಜನ್ಯವಾದ ಮಾತುಗಳನ್ನು ಆಡುತ್ತಾ, ನಟನೆಯನ್ನು ಮಾಡುತ್ತಾ, ನಟಿಸುತ್ತಾ ನಟಿಸುತ್ತಾ ನೇಪಥ್ಯಕ್ಕೆ ಸರಿದು, ಮತ್ತೊಂದು ರೂಪಧರಿಸಿ ಮತ್ತೆ ರಂಗ ಪ್ರವೇಶ ಮಾಡುತ್ತಾರೆ.

ವಿಜ್ಞಾನಿಗಳ ಪ್ರಕಾರ ಈ ನಾಟಕದ ಪರಿಕಲ್ಪನೆ ಶುರುವಾದದ್ದು ಒಂದು ಸಾವಿರದ ಮುನ್ನೂರ ಎಂಭತ್ತು ಕೋಟಿ ವರ್ಷಗಳ ಹಿಂದೆ! ಈ ನಮ್ಮ ಭೂಮಿಯೆಂಬ ರಂಗಮAಚದ ಮೇಲೆ ರಂಗವಿನ್ಯಾಸ, ಬೆಳಕಿನ ವ್ಯವಸ್ಥೆ, ರಂಗಸಜ್ಜಿಕೆ, ವಿವಿಧ ಪಾತ್ರಗಳ ಆಯ್ಕೆ, ರಂಗತಾಲೀಮು, ಮುಂತಾದ ಪೂರ್ವಸಿದ್ಧತೆಗೇ ನೂರಾರು ಕೋಟಿ ವರ್ಷಗಳು ಸವೆದಿವೆ. ಅವರೇ ಹೇಳುವಂತೆ ಸುಮಾರು ನಾನ್ನೂರು ಕೋಟಿ ವರ್ಷಗಳ ಹಿಂದೆ ಇಂದು ನಾವು ಭೂಮಿಯ ಮೇಲೆ ನೋಡುತ್ತಿರುವ ಜೀವಜಗತ್ತಿನ ನಾಟಕದ ಪ್ರಾರಂಭವಾಯಿತು. 

ವಿಸ್ಮಯದ ವಿಚಾರವೇನೆಂದರೆ, ಇಲ್ಲಿ ನಡೆಯುತ್ತಿರುವ ನಾಟಕಕ್ಕೆ ಒಂದು ನಿರ್ದಿಷ್ಟವಾದ ಕಥೆಯೂ ಇಲ್ಲ. ಇದು ಸುಖಾಂತವೋ ದುಃಖಾಂತವೋ ಯಾರಿಗೂ ತಿಳಿಯದು! ಆದರೂ ನಾಟಕದ ಪ್ರತಿಯೊಂದು ಕ್ಷಣವೂ ಅತ್ಯಂತ ರೋಮಾಂಚನಕಾರಿ; ಭವಿಷ್ಯದ ಕತೆ ಏನಾಗುತ್ತದೋ ಎಂದು ನಿರಂತರವಾಗಿ ಕುತೂಹಲವನ್ನು ಕೆರಳಿಸುವಂತಹ ಅದ್ಭುತ ಕಥಾಸರಣಿ! 

ಅಲ್ಲದೆ, ಪ್ರತಿಯೊಂದು ಪಾತ್ರಕ್ಕೂ ಇಂತಿಷ್ಟು ನಿರ್ದಿಷ್ಟ ಅವಧಿಯ ನಟನೆಯೆಂದೇನಿಲ್ಲ. ಕೆಲವು ಪಾತ್ರಧಾರಿಗಳಿಗೆೆ ಕೇವಲ ಹತ್ತಾರು ನಿಮಿಷಗಳ ನಟನೆಯಾದರೆ, ಉಳಿದವರಿಗೆ ಹತ್ತಾರು ವರ್ಷಗಳ ಪಾತ್ರ! ಪ್ರತಿಯೊಂದು ಪಾತ್ರಧಾರಿಯೂ ಮೊದಮೊದಲು ಮುಗ್ಧಪಾತ್ರವಾಗಿ, ಇದೇ ರಂಗದಲ್ಲೇ ಮುಂದಿನ ತಾಲೀಮು ಪಡೆಯುತ್ತದೆ. ಹೊಸತು ಏನನ್ನು ಕಲಿಯಿತೋ ಅದನ್ನು ಅರಿತು, ವಿಕಾಸ ಹೊಂದಿ, ಒಂದು ಪ್ರೌಢಪಾತ್ರವಾಗುತ್ತದೆ. ಹಾಗೆ ಕಲಿತು, ಅರಿತದ್ದನ್ನೆಲ್ಲಾ ಇಲ್ಲಿಯೇ ಪ್ರದರ್ಶಿಸಿ ಸೃಷ್ಟಿಯ ಮೆಚ್ಚುಗೆಗೋ, ತಾಟಸ್ಥö್ಯಕ್ಕೋ, ನಿಂದೆಗೋ, ಅಪವಾದಕ್ಕೋ ಅಥವಾ ಅಪನಿಂದೆಗೋ ಗುರಿಯಾಗುತ್ತದೆ. ತಾನು ಕಲಿತದ್ದನ್ನು ಅನ್ಯರಿಗೆ ಕಲಿಸಿ, ತಾನು ಕಲಿತದ್ದನ್ನೆಲ್ಲಾ ಜರಡಿಯಾಡಿಸಿ, ಸಾರವನ್ನು ಹೊತ್ತುಕೊಂಡು ಹೊಸ ವೇಷಭೂಷಣ, ಹೊಸ ಪಾತ್ರದೊಂದಿಗೆ ಮತ್ತೊಂದು ಪ್ರದರ್ಶನಕ್ಕೆ ಅಣಿಯಾಗಿ, ಮತ್ತೆ ರಂಗಪ್ರವೇಶ ಮಾಡುತ್ತದೆ. 

ಭೂಮಿಯ ವಿಶಾಲ ರಂಗಮAಚದ ಮೇಲೆ ಪ್ರದರ್ಶಿಸಲ್ಪಡುತ್ತಿರುವ ಅದ್ಭುತ ನಾಟಕವನ್ನು, ನಾವೆಲ್ಲರೂ ಕ್ಷಣಕ್ಷಣವೂ ಕತೆ ಹೇಗೆ ಮುಂದುವರೆಯುವುದೋ, ಮುಂದೇನಾಗುವುದೋ, ಎಂದು ಎಡೆಬಿಡದೆ ಬಹಳ ಕೌತುಕದಿಂದ ವೀಕ್ಷಿಸುತ್ತಿದ್ದೇವೆ; ನೋಡುತ್ತ ನೋಡುತ್ತ ಅದರಲ್ಲೇ ಮೈಮರೆತಿದ್ದೇವೆ. ವಿಪರ್ಯಾಸವೇನೆಂದರೆ, ನಾವೂ ಈ ನಾಟಕದ ಪಾತ್ರಧಾರಿಗಳು ಎಂಬುದನ್ನೂ ಮರೆತುಬಿಟ್ಟಿದ್ದೇವೆ!   

ಇದು ನಾಟಕವೆಂದಾದರೆ, ಈ ನಾಟಕಕ್ಕೆ ಒಬ್ಬ ಸೂತ್ರಧಾರನೂ ಇರಬೇಕಲ್ಲವೆ? ಇಡೀ ವಿಶ್ವವನ್ನು ವ್ಯಾಪಿಸಿಕೊಂಡು ಈ ನಾಟಕವನ್ನು ನಿರ್ದೇಶಿಸುತ್ತಿರುವ ಆ ದಿವ್ಯಶಕ್ತಿಯನ್ನು ನಾವು ದೇವರೆಂದು ಕರೆಯುತ್ತೇವೆ. ಪಾತ್ರಗಳ ಆಯ್ಕೆ ಆತನದ್ದು. ಯಾರು ಮುಂದುವರೆಯಬೇಕು, ಎಷ್ಟು ಕಾಲ ನಟಿಸಬೇಕು ಎಂಬ ತೀರ್ಮಾನವೂ ಆತನದ್ದೇ. ಯಾವ ಪಾತ್ರಗಳು ನಾಟಕಕ್ಕೆ ಪೂರಕವಲ್ಲವೋ, ಯಾವ ಪಾತ್ರಗಳು ನಿರರ್ಥಕವೋ, ನಿಷ್ಪçಯೋಜಕವೋ ಅವು ಶಾಶ್ವತವಾಗಿ ನೇಪಥ್ಯಕ್ಕೆ ಸರಿದು ಬಿಡುತ್ತವೆ. ತನ್ನಂತಾನೇ ನಡೆಯುತ್ತಿರುವ ಈ ಜಗನ್ನಾಟಕಕ್ಕೆ ಒಬ್ಬ ಸೂತ್ರಧಾರನಿದ್ದಾನೆಯೆ, ಹಾಗೊಬ್ಬ ನಿರ್ದೇಶಕನ ಅವಶ್ಯಕತೆಯಿದೆಯೆ? ಎಂದು ಆಲೋಚಿಸುವವರೂ ಇದ್ದಾರೆ. ಅವರಂತೆ ಆಲೋಚಿಸುವ ಅಥವಾ ಅವರಷ್ಟೂ ಆಲೋಚಿಸಲು ಅಸಮರ್ಥರಾಗಿರುವ ಕೋಟಿಕೋಟಿ ಜೀವಜಂತುಗಳು ಈ ಭೂಮಿಯ ಮೇಲಿಲ್ಲವೆ? 

ಪ್ರಕೃತಿಯ ಸಮತೋಲನವನ್ನು ಕದಡುವ, ಸಮಾಜದ ಒಳಿತನ್ನು ಬಯಸದ ಮತ್ತು ಅದರ ಸ್ವಾಸ್ಥö್ಯವನ್ನು ಕೆಡಿಸಲು ಪ್ರಯತ್ನಿಸುವ ದುಷ್ಟ ಮಂದಿ ಅನಾದಿ ಕಾಲದಿಂದಲೂ ಭೂಮಿಯ ಮೇಲೆ ಆಗಿ ಹೋಗಿದ್ದಾರೆ. ನಾಟಕ ಎಂದಾದ ಮೇಲೆ ಎಲ್ಲ ರೀತಿಯ, ವೈವಿಧ್ಯಮಯ ಪಾತ್ರಗಳೂ ಇರಬೇಕಲ್ಲ! ಆದರೆ, ಅವ್ಯವಸ್ಥೆಯಿಂದ ಸುವ್ಯವಸ್ಥೆಯೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮೃತತ್ವದೆಡೆಗೆ, ಹಾಗೂ ಉತ್ಕೃಷ್ಟತೆಯ ಕಡೆಗೆ ಸಾಗುವುದೇ ಸೃಷ್ಟಿಯ ಆಶಯವಲ್ಲವೆ? 

ಬನ್ನಿ, ನಾವೆಲ್ಲ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿAದ, ಸಹಬಾಳ್ವೆ ನಡೆಸುವಂತೆ ಮಾಡೋಣ.

ವಂದನೆಗಳು.    

ಈ ವರ್ಷದ ವಿಶೇಷ ವನ್ಯಜೀವಿ ಸಂದೇಶವಾಹಕ

(ಬಾಲದ ದೇವನಕ್ಕಿ  ಭಾರತದಲ್ಲಲ್ಲದೆ, ಉಷ್ಣ್ಣವಲಯದ ಏಷ್ಯಾದಲ್ಲಿ  ಕಂಡು ಬರುವ, ನೋಡಲು ಆಪ್ಯಾಯಮಾನವಾದ ಒಂದು ಜಲಪಕ್ಷಿಯಾಗಿದ್ದು, ತಾವರೆ, ಅಂತರಗAಗೆ, ಹಯಾಸಿಂತ್ ಮುಂತಾದ ತೇಲುವ ಸಸ್ಯವರ್ಗವನ್ನು  ಹೊಂದಿದ ಸರೋವರಗಳು ಮತ್ತು ಕೊಳಗಳ ಮೇಲೆ ವಾಸಿಸುತ್ತವೆ. ಅವುಗಳಿಗೆ ಉದ್ದವಾದ ಕಾಲ್ಬೆರಳುಗಳು ಮತ್ತು ಉಗುರುಗಳಿದ್ದು ತೇಲುವ ಎಲೆಗಳ ಮೇಲೆ ನಡೆಯಲು ಅನುವು ಮಾಡಿಕೊಡುತ್ತದೆ. ಪ್ರಜನನ ಕಾಲದಲ್ಲಿ ಗಂಡುಹಕ್ಕಿಯ ಉದ್ದನೆಯ ಬಾಲ ಬಹು ಆಕರ್ಷಕವಾಗಿರುತ್ತದೆ. ಅಚ್ಚ ಬಿಳಿ ಬಣ್ಣದ ತಲೆ, ಕಪ್ಪು ದೇಹ, ಕಪ್ಪು ರೆಕ್ಕೆಯ ಮೇಲೆ ದೊಡ್ಡ ಬಿಳಿ ಪಟ್ಟಿ, ಉಜ್ವಲ ಹಳದಿ ಕುತ್ತಿಗೆ ಮುಂತಾದ ಲಕ್ಷಣಗಳಿಂದ ಈ ದೇವನಕ್ಕಿಯನ್ನು ಸುಲಭವಾಗಿ ಗುರುತಿಸಬಹುದು.. ಇದು ನೀರಿನಲ್ಲಿರುವ ಜಲಸಸ್ಯಗಳನ್ನಲ್ಲದೆ, ಅವುಗಳ ಬೀಜಗಳು, ಕೀಟ, ಮೃದ್ವಂಗಿ, ಮುಂತಾದುವುಗಳನ್ನು ತಿನ್ನುತ್ತದೆ. ಹೆಣ್ಣು ಪಕ್ಷಿಗಳು ಬಹುಪತಿತ್ವ ಹೊಂದಿರುತ್ತವೆ. ಕು-ವೂ...ಕು-ವೂ ಎಂದು ಅಪರೂಪಕ್ಕೆ ಹಾಡುತ್ತವೆ.

ಕೈಯಲ್ಲೇ ಚಿತ್ರಿಸಿದ ಒಟ್ಟು ಕಾರ್ಡುಗಳ ಸಂಖ್ಯೆ: ಈ ವರ್ಷ ೧೮೭೫; ೪೧ ವರ್ಷಗಳಲ್ಲಿ ೮೩೪೭೦.  ಪಡೆದವರು: ಈ ವರ್ಷ ೧೨೦೮;  ೪೧ ವರ್ಷಗಳಲ್ಲಿ ೧೬,೬೪೦.